Tollywood News: ಆರ್ಸಿಬಿ ಈ ಬಾರಿ ಐಪಿಎಲ್ನಿಂದ ಔಟ್ ಆಗಿದ್ದು, ಕನ್ನಡಿಗರಿಗೆ ಇದು ಬೇಸರದ ಸಂಗತಿ ನಿಜ. ಆದರೆ ಕನ್ನಡಿಗರು ಎಂದಿಗೂ ಆರ್ಸಿಬಿಯನ್ನು ಹೇಟ್ ಮಾಡಿದವರೇ ಅಲ್ಲ. ಈ ಬಾರಿ ಇಲ್ಲವಾದರೂ ಮುಂದಿನ ಸಲ ಕಪ್ ನಮ್ಮದೇ ಎಂದು ಸಮಾಧಾನ ಮಾಡಿಕೊಂಡು, ಮೊದಲಿನಂತೆ ಆರ್ಸಿಬಿಯನ್ನು ನಾವು ಸಪೋರ್ಟ್ ಮಾಡುತ್ತ ಬರುತ್ತಿದ್ದೇವೆ.
ಆದರೆ ತಮಿಳು ನಟಿ ಕಸ್ತೂರಿ ಶಂಕರ್, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದು, ಆರ್ಸಿಬಿ ಸೋಲನ್ನು ಸಂಭ್ರಮಿಸಿದ್ದಾರೆ. ಈ ಮೊದಲು ಚೆನ್ನೈ ಜೊತೆ ಪಂದ್ಯವಾಡಿದ್ದ ಆರ್ಸಿಬಿ, ಗೆದ್ದು ಪ್ಲೇ ಆಫ್ಗೆ ಲಗ್ಗೆ ಇಟ್ಟಿತ್ತು. ಈ ವೇಳೆ ಚೆನ್ನೈ ಆಟಗಾರ ತುಷಾರ್ ದೇಶಪಾಂಡೆ ಸೇಡಿಟ್ಟುಕೊಂಡು, ಆರ್ಸಿಬಿ ಸೋಲುವುದನ್ನೇ ಕಾಯುತ್ತಿದ್ದ.
ಆರ್ಸಿಬಿ ಸೋಲನ್ನು ಸಂಭ್ರಮಿಸಿದ್ದ ತುಷಾರ್, ಈ ಸೋಲನ್ನು ಸಂಭ್ರಮಿಸಿ, ಪೋಸ್ಟ್ ಹಾಕಿದ್ದ. ಇದನ್ನೇ ಕಸ್ತೂರಿ ಶೇರ್ ಮಾಡಿಕೊಂಡಿದ್ದಾರೆ. ಪೋಸ್ಟ್ನಲ್ಲಿ ಬೆಂಗಳೂರು ದಂಡು ಎಂಬ ಪೋಸ್ಟ್ ಇದ್ದು, ಇಂಗ್ಲೀಷಿನಲ್ಲಿ ಬೆಂಗಳೂರು ಕಾಂಟ್ (bengaluru can’t) ಎಂದು ಬರೆದುಕೊಂಡಿದೆ. ಇದಕ್ಕೆ ಶೀರ್ಷಿಕೆ ಕೊಟ್ಟಿದ್ದು, ಅಲ್ಲಿನ ಲೋಕಲ್ ಜನರಿಗೆ ಹಲವು ವರ್ಷಗಳಿಂದ ಈ ಅನುಭವಾಗಿದೆ ಎಂದು ಕಸ್ತೂರಿ ಬರೆದುಕೊಂಡಿದ್ದರು.
ಇದರ ಅರ್ಥವೇನೆಂದರೆ, ಬೆಂಗಳೂರಿನ ಕೈಯಲ್ಲಿ ಸಾಧ್ಯವಿಲ್ಲ ಅಂತಾ ಅರ್ಥ. ಹೀಗೆ ಬೋರ್ಡ್ ಹಾಕಿ, ಆರ್ಸಿಬಿಯನ್ನು ಹಂಗಿಸಲಾಗಿದೆ. ಇದಕ್ಕೆ ರಿಪ್ಲೈ ಕೊಟ್ಟಿರುವ ಆರ್ಸಿಬಿ ಫ್ಯಾನ್ಸ್, ನೀವು ಬರೀ ತಮಿಳಿನಲ್ಲಷ್ಟೇ ಅಲ್ಲ, ಕನ್ನಡದಲ್ಲೂ ನಟಿಸಿದ್ದೀರಿ, ಬೆಂಗಳೂರು ನಿಮಗೆ ನಟನೆಗೆ ಅವಕಾಶ ಕೊಟ್ಟಿದೆ ಎಂಬುದು ನೆನಪಿರಲಿ ಎಂದು ನೆನಪಿಸಿದ್ದಾರೆ. ಅಲ್ಲದೇ, ಮೊನ್ನೆ ಆರ್ಸಿಬಿ ಚೆನ್ನೈಯನ್ನು ಹೇಗೆ ಸೋಲಿಸಿತು ಎಂದು ಕೂಡ ನೆನಪಿಸಿದ್ದಾರೆ. ಜೊತೆ ಚೀಟ್ ಮಾಡಲು ಹೋಗಿ, ಸಿಎಸ್ಕೆ 2 ವರ್ಷ ಬ್ಯಾನ್ ಆಗಿದ್ದನ್ನು ಕೂಡ ನೆನಪಿಸಿದ್ದಾರೆ.
ತಾಯಿ ಪ್ರವಾಸಕ್ಕೆ ಕರೆದುಕೊಂಡು ಹೋಗಿಲ್ಲವೆಂದು ನೇಣಿಗೆ ಶರಣಾದ 10 ವರ್ಷದ ಬಾಲಕಿ
ನಿಮ್ಮ ಉಪ ಮುಖ್ಯಮಂತ್ರಿ ಮಹಾಶಯ ಪೆನ್ ಡ್ರೈವ್ ಹಂಚಿಕೆಯಲ್ಲಿ ಶಾಮೀಲಾಗಿಲ್ಲವೇ?: ಸಿಎಂಗೆ ಹೆಚ್ಡಿಕೆ ಪ್ರಶ್ನೆ
ತಾಲೂಕು, ಜಿಲ್ಲಾ ಪಂಚಾಯತ್, ಬಿಬಿಎಂಪಿ ಚುನಾವಣೆ ಬಗ್ಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ
Discussion about this post