ನವದೆಹಲಿ: ಭಾರತದ ಪ್ರಖ್ಯಾತ ಉದ್ಯಮಿಗಳಲ್ಲೊಬ್ಬರಾದ ಆನಂದ್ ಮಹೀಂದ್ರ ಟಾಟಾ ಸನ್ಸ್ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ ಪ್ರಕ್ರಿಯೆಯನ್ನು ಸ್ವಾಗತಿಸುತ್ತಾ ಇದು ಸರ್ಕಾರದ ಒಂದು ಉತ್ತಮ ನಡೆಯಾಗಿದ್ದು ಭಾರತದ ಆರ್ಥಿಕತೆ ಹಾಗೂ ಖಾಸಗಿವಲಯದ ವ್ಯಾಪಾರೋದ್ಯಮರಂಗದಲ್ಲೇ ಆಮೂಲಾಗ್ರ ಬದಲಾವಣೆ ತರಬಲ್ಲ ಪ್ರಕ್ರಿಯೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
‘ಈ ಪ್ರಕ್ರಿಯೆಗೆ ನಾನು ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದೇನೆ ಎಂದು ಆರೋಪಿಸಬಹುದು. ಆದರೆ ಈ ಬಂಡವಾಳ ಹಿಂಪಡೆತ ಪ್ರಕ್ರಿಯೆಯು ಭಾರತದ ಉದ್ಯಮ ವಲಯಕ್ಕೆ ಹೊಸ ಶಕ್ತಿ ನೀಡುತ್ತದೆ. ಕೇಂದ್ರ ಸರಕಾರವು ಪ್ರತಿವರ್ಷ ಉಂಟಾಗುತ್ತಿದ್ದ ಸುಮಾರು 20 ಕೋಟಿ ರೂಪಾಯಿಗಳ ನಷ್ಟದಿಂದ ಪಾರಾಗುತ್ತದೆ. ಇದು ಖಾಸಗಿ ವಲಯದ ಮೇಲಿನ ಹೆಚ್ಚಿದ ವಿಶ್ವಾಸದ ಸೂಚಕವೂ ಆಗಿದ್ದು, ಖಾಸಗಿ ವಲಯದ ಉದ್ಯಮಗಳ ಪುನಶ್ಚೇತನಕ್ಕೂ ಕಾರಣವಾಗಲಿದೆ’ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.
ಏರ್ ಇಂಡಿಯಾ ಕಂಪನಿಯನ್ನು ಸರ್ಕಾರವು ಖಾಸಗಿ ವಲಯದ ಟಾಟಾ ಸನ್ಸ್ಗೆ ವಿಕ್ರಯ ಮಾಡಲು ಸರ್ಕಾರ ನಿನ್ನೆ (ಅ.8) ತೀರ್ಮಾನಿಸಿತ್ತು. ಏರ್ ಇಂಡಿಯಾಗೆ ಟೆಂಡರ್ ಹಾಕಿದ್ದವರ ಪೈಕಿ ಟಾಟಾ ಸನ್ಸ್ ಕಂಪನಿಯನ್ನು ಯಶಸ್ವಿ ಬಿಡ್ದಾರ ಎಂದು ಸರ್ಕಾರ ಘೋಷಿಸಿತ್ತು. ಹಸ್ತಾಂತರಗೊಳಿಸುವುದರ ಮೂಲಕ ನಷ್ಟದಲ್ಲೇ ನಡೆಯುತ್ತಿದ್ದ ಸಂಸ್ಥೆಯನ್ನು ಖಾಸಗೀಕರಣಗೊಳಿಸಿ ಸಮಸ್ಯೆಯಿಂದ ಸರ್ಕಾರ ಹೊರತಂದಂತಾಗಿದೆ.
ಏರ್ ಇಂಡಿಯಾ ಸಂಸ್ಥೆಯನ್ನು 68 ವರ್ಷಗಳ ಹಿಂದೆ ಸರ್ಕಾರ ಟಾಟಾ ಸನ್ಸ್ ಸಂಸ್ಥೆಯಿಂದಲೇ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಇದೀಗ ಹರಾಜು ಪ್ರಕ್ರಿಯೆ ಮೂಲಕ ಮತ್ತೆ ಮೂಲ ಮಾಲೀಕರ ತೆಕ್ಕೆಗೇ ಏರ್ ಇಂಡಿಯಾ ಮರಳುತ್ತಿದೆ. ಇದರ ಹರಾಜು ಬೆಲೆಯಾಗಿ ಟಾಟಾ ಸನ್ಸ್ 18,000 ಕೋಟಿ ರೂಪಾಯಿಗಳ ಬಿಡ್ ಸಲ್ಲಿಸಿತ್ತು. ಹಸ್ತಾಂತರ ಪ್ರಕ್ರಿಯೆಯು 2021 ರ ಅಂತ್ಯಕ್ಕೆ ಪೂರ್ಣವಾಗಲಿದೆಯೆಂದು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿಗಳ ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ತುಹಿನ್ ಪಾಂಡೆ ತಿಳಿಸಿದರು.
I may be accused of overstating the importance of this event but I think this divestment amounts to a ‘reset’ of the Indian business environment. Yes, the Govt. is dispensing of a cash drain; But it’s also renewing faith-after decades-in the potential efficiency of the Pvt.sector https://t.co/iZKgt2L7cD
— anand mahindra (@anandmahindra) October 8, 2021
Air India handed over to Tata Sons Anand Mahindra reacts
ಇದನ್ನೂ ಓದಿ: Viral: ನನಗೆ ಅಫೇರ್ ಇತ್ತು, ಅಬಾರ್ಶನ್ ಮಾಡಿಸಿದ್ದೆ ಎಂದೆಲ್ಲಾ ದೂರಿದ್ದರು: ಸಮಂತಾ ಭಾವುಕ ಪೋಸ್ಟ್
ಇದನ್ನೂ ಓದಿ: ಐಎಂಪಿಎಸ್ ಮಿತಿ 2ರಿಂದ 5 ಲಕ್ಷ ರೂ.ಗೆ ಏರಿಕೆ, ರೆಪೊ ಬದಲಿಸದಿರಲು ಆರ್ಬಿಐ ನಿರ್ಧಾರ
Discussion about this post