ದೆಹಲಿ: ಗಗನಮುಖಿಯಾಗಿದ್ದ ತೈಲ ದರದಿಂದ ಹೈರಾಣರಾಗಿದ್ದ ಜನರಿಗೆ ನಿರಾಳ ನೀಡಲು ಅಬಕಾರಿ ಸುಂಕವನ್ನು ಕಡಿತವಂತಹ ಸೂಕ್ಷ್ಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜನರ ಜೇಬಿಗೆ ಹೊರೆಯಾಗಿದ್ದ ಇಂಧನ ತೈಲ ದರ ತಗ್ಗಿಸುವುದು ಅಷ್ಟೊಂದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಸೂಕ್ಷ್ಮವಾದ ಅಬಕಾರಿ ಸುಂಕ ಕಡಿತ ಮಾಡುವ ತೀರ್ಮಾನವನ್ನು ಗಟ್ಟಿಯಾಗಿ ತೆಗೆದುಕೊಂಡರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇದರಿಂದ ಸರ್ಕಾರಕ್ಕೆ 1.40 ಲಕ್ಷ ಕೋಟಿ ರೂಪಾಯಿ ವರಮಾನ ಕೊರತೆಯಾದರೂ ಜನರಿಗೆ ಆರ್ಥಿಕ ಹೊರೆ ಇಳಿಯಬೇಕು ಎಂಬ ಕಳವಳಿಯಿಂದ ಪ್ರತಿ ಲೀಟರ್ ಪೆಟ್ರೋಲ್ಗೆ 5ರೂ. ಮತ್ತು ಡೀಸೆಲ್ಗೆ 10 ರೂ.ವರೆಗೆ ತೆರಿಗೆ ಕಡಿತ ಮಾಡುವ ತೀಮರ್ಮಾನ ಕೈಗೊಂಡರು. ಇದು ದೀಪಾವಳಿಗೆ ಮೋದಿಯವರು ನೀಡಿದ ಕೊಡುಗೆ. ಇದರಿಂದ ಹಣದುಬ್ಬರವೂ ತಗ್ಗಲಿದೆ ಎಂದು ಟ್ವೀಟ್ನಲ್ಲಿ ಬಣ್ಣಿಸಿದ್ದಾರೆ.
ಕೇಂದ್ರ ಸರ್ಕಾರದ ಮಾದರಿಯಲ್ಲೇ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಆಡಳಿತವಿರುವ ರಾಜ್ಯಗಳು ತೈಲದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಇಳಿಕೆ ಮಾಡಿವೆ. ಇದರಿಂದ ಪ್ರತಿ ಲೀಟರ್ಗೆ ಪೆಟ್ರೋಲ್ಗೆ ಸರಾಸರಿ 12 ರೂ. ಮತ್ತು ಡೀಸೆಲ್ಗೆ 19 ರೂ.ವರೆಗೆ ಇಳಿಕೆ ಆಗಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸುತ್ತಿದ್ದಂತೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸರ್ಕಾರ ಇರುವ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರತಿ ಲೀಟರ್ಗೆ 7 ರೂಪಾಯಿಯಷ್ಟು ವ್ಯಾಟ್ ಇಳಿಸಿವೆ. ಆದರೆ, ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ ಹೀಗೆ ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಕಡಿಮೆ ಮಾಡಿಲ್ಲ. ಒಡಿಶಾದ ಬಿಜೆಡಿ ಸರ್ಕಾರ ಪ್ರತಿ ಲೀಟರ್ಗೆ 3 ರೂ. ಇಳಿಕೆ ಮಾಡಿದೆ.
Amith Shah Responds to Fuel Price Roll Back Decision
ಇದನ್ನೂ ಓದಿ: ಸಿಆರ್ಪಿಎಫ್ ಸಿಬ್ಬಂದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೋಜನ
Discussion about this post