ಬೆಂಗಳೂರು: ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ, ಕೋವಿಡ್ -19 ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಲಸಿಕೆ ಹಾಕುವ ನಿಟ್ಟಿನಲ್ಲಿ ಸಾಮೂಹಿಕವಾಗಿ ಪ್ರಯತ್ನಗಳನ್ನು ಮಾಡುತ್ತಿರುವ ನಡುವೆಯು ಜನರು ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೆಚ್ಚಿನ ಅಪಾಯ ಇರುವವರಿಗೆ, ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಳ್ಳದವರಿಗೆ ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಇರುವ ರೋಗಿಗಳಿಗೆ ಆಂಟಿಬಾಡಿ ಕಾಕ್ಟೇಲ್ ಥೆರಪಿ ಶಿಫಾರಸ್ಸು ಮಾಡಲಾದ ಚಿಕಿತ್ಸಾ ವಿಧಾನವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದನ್ನು ಕ್ರಾಂತಿಕಾರಕ ಬದಲಾವಣೆ ಎಂದು ಪರಿಗಣಿಸಲಾಗುತ್ತದೆ ಮತ್ತು ಆರೋಗ್ಯ ರಕ್ಷಣೆ ಸಮುದಾಯವು ಹುಡುಕುತ್ತಿರುವ ಪರಿಹಾರವಾಗಿದೆ.
ಭಾರತದಲ್ಲಿ 35000ಕ್ಕೂ ಹೆಚ್ಚು ರೋಗಿಗಳು ಆಂಟಿಬಾಡಿ ಕಾಕ್ಟೈಲ್ ಥೆರಪಿಯನ್ನು ಪಡೆದಿದ್ದು, ಆಂಟಿಬಾಡಿ ಕಾಕ್ಟೇಲ್ ಥೆರಪಿಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿದಾಗ, ಕೋವಿಡ್ -19 ವಿರುದ್ಧ ಭರವಸೆಯ ಹೋರಾಟವನ್ನು ಇದು ಪ್ರದರ್ಶಿಸಿದೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಸುಮಾರು 904 ಸೋಂಕಿತರು ಸೇರಿದಂತೆ ರಾಜ್ಯದ 1068 ರೋಗಿಗಳಿಗೆ ಆಂಟಿಬಾಡಿ ಕಾಕ್ಟೈಲ್ ಥೆರಪಿ ಚಿಕಿತ್ಸೆ ನೀಡಲಾಗಿದೆ.
ಆಂಟಿಬಾಡಿ ಕಾಕ್ಟೇಲ್ ಚಿಕಿತ್ಸೆಯ ರೋಗಿಗಳ ಸಾವನ್ನು ಶೇ 70ರಷ್ಟು ಕಡಿಮೆ ಮಾಡಿ ಸಾವಿನ ಅಪಾಯದಿಂದ ಪಾರು ಮಾಡುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಬೊಜ್ಜು ಅಥವಾ ಮಧುಮೇಹ ಅಥವಾ ತೀವ್ರ ಹೃದಯರಕ್ತನಾಳ, ಶ್ವಾಸಕೋಶ, ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ಅಸ್ವಸ್ಥತೆಗಳು ರೋಗನಿರೋಧಕ ಶಕ್ತಿ ಇಲ್ಲದವರು ಕ್ಯಾನ್ಸರ್ ಚಿಕಿತ್ಸೆ, ಮೂಳೆ ಮಜ್ಜೆಯ ಅಥವಾ ಅಂಗಾಂಗ ಕಸಿ, ಇಮ್ಯುನೊಲಾಜಿಕಲ್ ನ್ಯೂನತೆಗಳು, ಎಚ್ಐವಿ ಸಿಕಲ್ಸೆಲ್ ರಕ್ತಹೀನತೆ, ಥಲಸ್ಸೆಮಿಯಾ ಈ ಔಷಧಿಯನ್ನು ವಯಸ್ಕರು ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸೌಮ್ಯದಿಂದ ಮಧ್ಯಮ ಪ್ರಮಾಣದ ಕೋವಿಡ್ 19 ರೋಗಲಕ್ಷಣ ಇರುವವರಿಗೆ ನೀಡಬಹುದು.
ಆಂಟಿಬಾಡಿ ಕಾಕ್ಟೇಲ್ ಕುರಿತು ಪ್ರತಿಕ್ರಿಯಿಸಿರುವ ಅಪೊಲೊ ಆಸ್ಪತ್ರೆಗಳ ಶ್ವಾಸಕೋಶ ತಜ್ಞ ಡಾ.ರವೀಂದ್ರ ಮೆಹ್ತಾ, ‘ತಮ್ಮ ತಂಡವು 40ಕ್ಕೂ ಹೆಚ್ಚು ರೋಗಿಗಳಿಗೆ ಈ ಚಿಕಿತ್ಸೆಯನ್ನು ಬಳಸಿದೆ. ಈ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. ಸಕ್ರ ವರ್ಲ್ಡ್ ಹಾಸ್ಪಿಟಲ್ ಮತ್ತು ಬೆಂಗಳೂರಿನ ಜೀವಿಕಾ ಆಸ್ಪತ್ರೆಯಲ್ಲಿ ಕೋವಿಡ್ -19 ಆರೈಕೆಯಲ್ಲಿ ತೊಡಗಿರುವ ಕನ್ಸಲ್ಟೆಂಟ್ ಫಿಸಿಶಿಯನ್ ಡಾ.ಟಿ.ಆರ್.ಹೇಮಕುಮಾರ್ ಅವರು, ’18 ರೋಗಿಗಳು ತಮ್ಮ ಆರೈಕೆಯಲ್ಲಿ ಪಡೆದಿದ್ದಾರೆ ಮೂರನೇ ಅಲೆಯ ಸಾಧ್ಯತೆ ಹಿನ್ನೆಲೆಯಲ್ಲಿ ಸರಿಯಾದ ಚಿಕಿತ್ಸೆಯ ಬಗ್ಗೆ ಅರಿವು ಅತ್ಯಗತ್ಯ. ಕೋವಿಡ್ ಪಾಸಿಟಿವ್ ರೋಗಿ ಅಥವಾ ಕೋವಿಡ್ ಪಾಸಿಟಿವ್ ರೋಗಿಗೆ ತೆರೆದುಕೊಳ್ಳುವಂಥ ವ್ಯಕ್ತಿಯು ಸರಿಯಾದ ಸಮಯದಲ್ಲಿ ಪ್ರತಿಕಾಯ ಕಾಕ್ಟೇಲ್ ಚಿಕಿತ್ಸೆಯನ್ನು ಪಡೆದರೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ರೋಗಿಗಳಲ್ಲಿ ರೋಗ ತೀವ್ರತೆಯಿಂದ ಆಸ್ಪತ್ರೆಗೆ ಸೇರಿಸುವುದನ್ನು ತಡೆಯಲು ಸಾಧ್ಯವಿದೆ. ಮೂರನೇ ಅಲೆಯ ಸಂದರ್ಭದಲ್ಲಿ ಈ ಚಿಕಿತ್ಸೆಯು ಅಮೂಲ್ಯ ಜೀವಗಳನ್ನು ಮತ್ತು ಆಸ್ಪತ್ರೆ/ಐಸಿಯು ಹಾಸಿಗೆಗಳನ್ನು ಉಳಿಸಬಲ್ಲದು ಇದನ್ನು ಡೇ ಕೇರ್ ಅಥವಾ ಶಾರ್ಟ್ ಸ್ಟೇ ಸೆಟಪ್ಗಳಲ್ಲಿ ಇಂಟ್ರಾವೆನಸ್ ಇನ್ಫ್ಯೂಷನ್ ಅಥವಾ ಇನ್ಸುಲಿನ್ ಇಂಜೆಕ್ಷನ್ನಂತೆ ನೀಡಬಹುದು’ ಒತ್ತಿ ಹೇಳಿದರು.
(ಗಮನಿಸಿ: ಕಾಕ್ಟೇಲ್ ಥೆರಪಿ ಪಡೆಯಬೇಕು ಎಂದು ಯಾರಿಗೂ ಕನ್ನಡನಾಡಿ ಶಿಫಾರಸು ಮಾಡುತ್ತಿಲ್ಲ. ವೈದ್ಯರ ಅಭಿಪ್ರಾಯವನ್ನು ಮಾತ್ರ ಇಲ್ಲಿ ನೀಡಲಾಗಿದೆ. ಅನಾರೋಗ್ಯವಿದ್ದಾಗ ನಿಮ್ಮ ವೈದ್ಯರೊಡನೆ ಸಮಾಲೋಚಿಸಿದ ನಂತರವೇ ಮುಂದಿನ ಚಿಕಿತ್ಸಾ ವಿಧಾನವನ್ನು ತೀರ್ಮಾನಿಸಬೇಕು)
Antibody Cocktail Therapy in Karnataka 1068 Cured from Covid
ಇದನ್ನೂ ಓದಿ: ಕೊರೊನಾದಿಂದ ಅನಾಥ ಮಕ್ಕಳಿಗೆ 10 ಲಕ್ಷ ರೂ ಸ್ಟೈಫಂಡ್
ಇದನ್ನೂ ಓದಿ: ಕೊರೊನಾ ಸಾವು: ಅರ್ಧಕ್ಕೆ ಇಳಿದ ಪರಿಹಾರ ಮೊತ್ತ: ₹1 ಲಕ್ಷ ಪರಿಹಾರ ಆದೇಶ ವಾಪಾಸ್
Discussion about this post