ಡಿಸೆಂಬರ್ 8ರಂದು ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭದ್ರತಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಂದ ತೆರವಾದ ಹುದ್ದೆಗೆ ನರವಾಣೆ ಅವರನ್ನು ನೇಮಕ ಮಾಡಲಾಗಿದೆ.
ನರವಾಣೆ ಮೂರು ಸಶಸ್ತ್ರ ಸೇನಾ ಮುಖ್ಯಸ್ಥರುಗಳ ಪೈಕಿ ಹಿರಿಯ ಅಧಿಕಾರಿಯಾಗಿದ್ದಾರೆ. ಹೀಗಾಗಿ, ಅವರಿಗೇ ಶ್ರೇಣಿಯ ಆಧಾರದ ಮೇಲೆ ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಹುದ್ದೆ ದೊರೆತಿದೆ ಎನ್ನಲಾಗಿದೆ.
ವಾಯು ನೆಲೆ ಮುಖ್ಯಸ್ಥರಾಗಿ ಮಾರ್ಷಲ್ ವಿ. ಆರ್. ಚೌಧರಿ ಹಾಗೂ ನೌಕಾ ನೆಲೆ ಮುಖ್ಯಸ್ಥರಾಗಿ ಆರ್. ಹರಿ ಕುಮಾರ್ ಅವರು ಕ್ರಮವಾಗಿ 2021ರ ಸೆಪ್ಟೆಂಬರ್ 30 ಮತ್ತು ನವೆಂಬರ್ 30 ರಂದು ತಮ್ಮ ಸ್ಥಾನವನ್ನು ಅಲಂಕರಿಸಿದ್ದರು.
ಡಿಸೆಂಬರ್ 14ರಂದು, ನರವಾಣೆ ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.
ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿಯ ಸದಸ್ಯರು ಮಂಗಳವಾರ, ಡಿಸೆಂಬರ್ 8ರಂದು ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಜನರಲ್ ರಾವತ್ ಮತ್ತು ಅವರ ಹೆಂಡತಿ ಮಧುಲಿಕ ಹಾಗೂ ಇತರೆ 11 ಸೇನಾ ಸಿಬ್ಬಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಹೆಲಿಕಾಪ್ಟರ್ ಅವಘಡದಲ್ಲಿ ಗಾಯಾಳುವಾಗಿ ಬದುಕುಳಿದಿದ್ದ ಕ್ಯಾಪ್ಟನ್ ವರುಣ್ ಸಿಂಗ್ ಬುಧವಾರ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನರಾದರು.
ಈ ಮಧ್ಯೆ, ಹುದ್ದೆ ಅಲಂಕರಿಸಿದ ಬೆನ್ನಲ್ಲೇ ಜನರಲ್ ನರವಾಣೆ ಸೌಧಿ ಭದ್ರತಾ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಫಾದ್ ಬಿನ್ ಅಬ್ದುಲ್ಲಾ ಅಲ್ ಮುಟೈರ್ ಅವರೊಂದಿಗೆ ಉಭಯ ದೇಶಗಳ ರಕ್ಷಣೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Army chief Gen Naravane Takes Charge as Head of Chiefs of Staff Committee
ಇದನ್ನೂ ಓದಿ: Army Leader: ಸಾಧಕ, ಸುಧಾರಕ, ಸೇನಾ ನಾಯಕ: ಸಿಡಿಎಸ್ ಬಿಪಿನ್ ರಾವತ್ ಬದುಕು ಸಾಗಿಬಂದ ಹಾದಿ
Discussion about this post