ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ಆಯೋಧ್ಯೆಯಲ್ಲಿ ದೀಪಾವಳಿಯಂದು ನಡೆದ ದೀಪೋತ್ಸವ ವಿಶ್ವದಾಖಲೆ ನಿರ್ಮಿಸಿದೆ. ಇಲ್ಲಿರುವ ಸರಯೂ ನದಿಯ ತಟದಲ್ಲಿ 12 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ವೈಭವೋಪೇತವಾಗಿ ಆಚರಿಸಲಾಯಿತು. ಇದರಲ್ಲಿ 9,51,000 ಹಣತೆಗಳು ನದಿಯ ತಟಕ್ಕೆ ಬೆಳಕು ಚೆಲ್ಲಿದವು. ರಾಮದೇವಾಲಯ ನಿರ್ಮಾಣದ ಜಾಗದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ದೀಪಗಳು ಬೆಳಗಿದವು.
ಉತ್ತರ ಪ್ರದೇಶ ಸರ್ಕಾರವು ಇದರ ಜೊತೆಗೆ ದೀಪಾವಳಿಯ ರಂಗನ್ನು ಹೆಚ್ಚಿಸಲು ಸೋಮವಾರದಿಂದಲೇ ಸರಾಯೂ ನದಿ ತಟದಲ್ಲಿ ರಾಮಲೀಲ ಎನ್ನುವ ತ್ರಿಡಿ ಲೇಸರ್ ಶೋ ಏರ್ಪಡಿಸಿತ್ತು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲು ಉತ್ತೇಜನ ನೀಡಿತು.
ಈ ಸಂದರ್ಭದಲ್ಲಿ ನಡೆದ ರಾಮಜನ್ಮಭೂಮಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದಿನ ಯಾವ ಸರ್ಕಾರವು ಇಂಥ ಸಂಭ್ರಮಕ್ಕೆ ಕಾರಣವಾಗಲಿಲ್ಲ. ಯೋಜನೆ ರೂಪಿಸುವ ಗೋಜಿಗೂ ಹೋಗಲಿಲ್ಲ. ರಾಮರಾಜ್ಯ ನಿರ್ಮಾಣವಾಗಬೇಕಾದರೆ ಇಂಥ ಸಂಭ್ರಮವನ್ನು ಏರ್ಪಡಿಸಬೇಕು, ಅದರಲ್ಲಿ ಭಾಗಿಯಬೇಕು ಎಂದು ನಮ್ಮ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.
ಆಯೋಧ್ಯೆಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲ ಪ್ರದೇಶಗಳಿಂದ ಜನರು ಆಗಮಿಸುತ್ತಿದ್ದಾರೆ. ಪಟ್ಟಣದ ಸೌಂದರ್ಯವನ್ನು ವರ್ಣಿಸಲು ಯಾವುದೇ ಪದಗಳು ಇಲ್ಲ. ಆ ರೀತಿ, ವೈಭವದಿಂದ ಕೂಡಿದೆ. ಇದನ್ನು ಕಣ್ಣುತುಂಬಿಕೊಳ್ಳುವುದು ನನ್ನ ಅದೃಷ್ಟ ಎಂದು ದೀಪೋತ್ಸವಕ್ಕೆ ಬಂದ ಪ್ರವಾಸಿ ಶಿವಂ ವಿವರಿಸಿದರು.
ಕಳೆದ ವರ್ಷ ಕೂಡ ಆಯೋಧ್ಯೆಯ ನಡೆದ ದೀಪೋತ್ಸವ ಇಂಥದೇ ವಿಶ್ವದಾಖಲೆಗೆ ಕಾರಣವಾಗಿತ್ತು. ಸುಮಾರು 5,84,572 ಹಣತೆಗಳನ್ನು ಸರಾಯು ನದಿ ತಟದಲ್ಲಿ ಹಚ್ಚಿದ್ದು ವಿಶ್ವದ ಗಮನ ಸೆಳೆಯಲು ಕಾರಣವಾಯಿತು.
Ayodhya sets Guinness Record at Deepotsav
ಇದನ್ನೂ ಓದಿ: ಅಯೋಧ್ಯೆ: 115 ದೇಶಗಳ ನೀರು ನಿರ್ಮಾಣ ಕಾರ್ಯಕ್ಕೆ ಬಳಕೆ
Discussion about this post