Chennapattana News: ಚನ್ನಪಟ್ಟಣ ತಾಲೂಕಿನ ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಮೇ 25ಕ್ಕೆ ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್- ಬಿಜೆಪಿ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.
ಹಾಲಿ ಬಮೂಲ್ ನಿರ್ದೇಶಕ ಜೆಡಿಎಸ್ ಬೆಂಬಲಿತ ಎಚ್.ಸಿ.ಜಯಮುತ್ತು ಮತ್ತು ಕಾಂಗ್ರೆಸ್ ಬೆಂಬಲಿತ ಎಸ್.ಲಿಂಗೇಶ್ ಕುಮಾರ್ ನಿರ್ದೇಶಕ ಸ್ಥಾನದ ಆಕಂಕ್ಷಿಯಾಗಿದ್ದು, ತಾಲೂಕಿನಲ್ಲಿ ಚುನಾವಣಾ ಕಣ ಭರ್ಜರಿಯಾಗಿ ರಂಗೇರಿದೆ.
ಜಯಮುತ್ತು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಇವರಿಗೆ ಬಿಜೆಪಿ ಬೆಂಬಲವೂ ಇದೆ. ಎಸ್.ಲಿಂಗೇಶ್ ಕುಮಾರ್ ಈ ಮ“ದಲು ಜೆಡಿಎಸ್ನಲ್ಲಿದ್ದು, ಬಳಿಕ ಬಿಜೆಪಿ ಸೇರಿದರು. ನಂತರ ಚುನಾವಣಾ ವೇಳೆಯಲ್ಲಿ ಯೋಗೇಶ್ವರ್ ಕಾಂಗ್ರೆಸ್ ಸೇರಿದಾಗ, ಅವರ ಜತೆ ಲಿಂಗೇಶ್ ಕೂಡ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಹಾಗಾಗಿ ಇದೀಗ ಲಿಂಗೇಶ್ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕ“ಂಡಿದ್ದಾರೆ.
ವಿಧಾನಸಭಾ ಉಪಚುನಾವಮೆಯ ಕಾವು ತಣ್ಣಗಾಗುತ್ತಿದ್ದಂತೆ, ಬಮೂಲ್ ನಿರ್ದೇಶಕ ಸ್ಥಾನದ ಚುನಾವಣಾ ಕಣ ರಂಗೇರಿದೆ. ಮೇ 25ರಂದು ಈ ಚುನಾವಣೆ ನಡೆಯಲಿದ್ದು ಈಗಾಗಲೇ ಈ ಇಬ್ಬರು ಸ್ಪರ್ಧಿಗಳ ಸ್ಪರ್ಧೆಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಎಂದಿನಂತೆ ಆರೋಪ ಪ್ರತ್ಯಾರೋಪಗಳ Competition ಜೋರಾಗಿದೆ.
ಜೆಡಿಎಸ್ ಅಭ್ಯರ್ಥಿಯ ಪರ ಜೆಡಿಎಸ್ ಯುವ ನಾಾಯಕ ನಿಖಿಲ್ ಕುಮಾರ್ ಸ್ವಾಮಿ ಬೆಂಬಲಕ್ಕೆ ನಿಂತಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಬೆಂಬಲಕ್ಕೆ, ಡಿ.ಕೆ.ಸುರೇಶ್ ಮತ್ತು ಸಿ.ಪಿ.ಯೋಗೇಶ್ವರ್ ನಿಂತಿದ್ದಾರೆ.
ಚನ್ನಪಟ್ಟಣ ತಾಲೂಕಿನಲ್ಲಿ 176 ಹಾಲು ಉತ್ಪಾದಕ ಸಹಕಾರಿ ಸಂಘಗಳಿದೆ. ಇವುಗಳ ಪೈಕಿ 131 ಸಂಘಗಳ ಮತದಾರರು ಬಮೂಲ್ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಹಕ್ಕನ್ನು ಹ“ಂದಿದ್ದಾರೆ.
ಉಳಿದವುಗಳಲ್ಲಿ ಕೆಲವು ಸಂಘಗಳಿಗೆ ತಾಂತ್ರಿಕ ಕಾರಣಗಳಿಂದಾಗಿ ಚುನಾವಣೆ ನಡೆದಿಲ್ಲ. ಕೆಲವು ಸಂಘಗಳು ನಿಯಮಗಳನ್ನು ಪಾಲಿಸದ ಕಾರಣ ಸೂಪರ್ ಸೀಡ್ ಆಗಿದೆ. ಇವುಗಳಿಗೆ ಮತದಾನದ ಹಕ್ಕು ಸಿಕ್ಕಿಲ್ಲ. ಮತದಾನದ ಹಕ್ಕು ಪಡೆದಿರುವ 131 ಹಾಲು ಉತ್ಪಾದಕರ ಸಂಘಗಳ ಆಡಳಿತ ಮಂಡಳಿ ಪ್ರತಿನಿಧಿಗಳನ್ನು ತಮ್ಮಲ್ಲೇ ಆಯ್ಕೆ ಮಾಡಿಕ“ಂಡು ಅವರಿಗೆ ಮತದಾನದ ಹಕ್ಕು ನೀಡಿದೆ.
ವಿಧಾನಸಭಾ ಉಪಚುನಾವಣೆ ನಂತರ ಬಂದಿರುವ ಬಮೂಲ್ ನಿರ್ದೇಶನ ಸ್ಥಾನದ ಚುನಾವಣೆ ತಯಾರಿ ಜೋರಾಗಿದೆ. ಈ ಮುನ್ನ ಜೆಡಿಎಸ್ ಪಕ್ಷದಲ್ಲೇ ಸ್ಪರ್ಧೆ ಇತ್ತು. ಆದರೆ ಇದೇ ಪ್ರಥಮ ಬಾರಿ ಕಾಂಗ್ರೆಸ್ – ಜೆಡಿಎಸ್ ಮುಖಾಮುಖಿಯಾಗಿದೆ.
ಕಾಂಗ್ರೆಸ್ನವರು ವಾಮ ಮಾರ್ಗ ಅನುಸರಿಸಿ, ಹೆದರಿಸಿ, ಬೆದರಿಸಿ ಜೆಡಿಎಸ್ ಬೆಂಬಲಿತ ಮತದಾರರ ಹಕ್ಕು ಹೋಂದಿರುವ ಅಧ್ಯಕ್ಷರ ರಾಜೀನಾಮೆ ಪಡೆದು, ಚುನಾವಣೆ ನಡೆಸುತ್ತಿದೆ ಎಂದು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯಮುತ್ತು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ನಮ್ಮ ಪಕ್ಷ ವಾಮಮಾರ್ಗ ಅನುಸರಿಸುತ್ತಿಲ್ಲ. ಸಹಕಾರ ಇಲಾಖೆ ನಿಯಮಾವಳಿ ಪ್ರಕಾರ ಯಾವ ಸಂಘದಲ್ಲಿ ಲೋಪದೋಷವಿದೆಯೋ, ಅವುಗಳಿಗೆ notice ನೀಡಲಾಗಿದೆ. ಅದರಲ್ಲಿ ಜೆಡಿಎಸ್- ಕಾಂಗ್ರೆಸ್ ಎನ್ನುವ ಪ್ರಶ್ನೆಯೇ ಇಲ್ಲ. ಯಾವುದೇ ಲೋಪವಿಲ್ಲದ ಮೇಲೆ ಎಪಿಎಂಸಿಗಳು ಭಯಪಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಿಂಗೇಶ್ ಕುಮಾರ್ ಹೇಳಿದ್ದಾರೆ.
Discussion about this post