ನವದೆಹಲಿ: ಕಳೆದ ವರ್ಷ ತೀವ್ರ ಪ್ರಕ್ಷುಬ್ಧಗೊಂಡಿದ್ದ ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಮೂಲಸೌಕರ್ಯದ ಕಾಮಗಾರಿ ನಡೆಸುತ್ತಿರುವುದಕ್ಕೆ ಎರಡೂ ದೇಶಗಳ ಸೇನಾಧಿಕಾರಿಗಳ ಮಧ್ಯೆ ಇತ್ತೀಚೆಗೆ ನಡೆದ ಸಭೆಯಲ್ಲಿ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಇಂತಹ ಚಟುವಟಿಕೆಗಳು ಶಾಂತಿ ಮತ್ತು ಸ್ಥಿರತೆಯ ಪ್ರಕ್ರಿಯೆಗೆ ತೊಡಕುಂಟು ಮಾಡುತ್ತದೆ ಎಂದು ಹೇಳಿದೆ.
ಸರ್ವಋತು ರಸ್ತೆಗಳನ್ನು ಚೀನಾ ಪೀಪಲ್ಸ್ ಲಿಬರೇಷನ್ ಆಮಿರ್ ತ್ವರಿತ ಗತಿಯಲ್ಲಿ ನಿಮಿರ್ಸುತ್ತಿದೆ. ಅರುಣಾಚಲ ಪ್ರದೇಶ ಮತ್ತು ಟಿಬೆಟ್ ಮಧ್ಯೆಯ ಜಾಗವನ್ನು ಅತಿಕ್ರಮಿಸಿಕೊಂಡು ನೂರು ಮನೆಗಳಿರುವ ಗ್ರಾಮ ನಿರ್ಮಾಣ ಮಾಡಿದೆ. ಈ ಕುರಿತು ಭಾರತ ಆಕ್ಷೇಪ ದಾಖಲಿಸಿದೆ.
ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಅನೇಕ ಭಾಗಗಳಲ್ಲಿ ಮೂಲಸೌಕರ್ಯ ಹೆಚ್ಚಳ, ಹೆದ್ದಾರಿಗಳಿಗೆ ರಸ್ತೆ ಸಂಪರ್ಕ ವೃದ್ದಿ, ಜನವಸತಿ ಪ್ರದೇಶಗಳ ನಿರ್ಮಾಣ, ಗಡಿ ಭಾಗಕ್ಕೆ ಯುದ್ಧ ವಿಮಾನಗಳು ಶೀಘ್ರವಾಗಿ ಬಂದು ಹೋಗಲು ಅನುಕೂಲವಾಗುವಂತೆ ಹೊಸ ಏರ್ಸ್ಟ್ರಿಪ್ಗಳನ್ನು ನಿರ್ಮಾಣ ಮಾಡುತ್ತಿದೆ. ಗಡಿ ನೆಲೆಗಳಿಗೆ ಅಧಿಕ ಪ್ರಮಾಣದಲ್ಲಿ ಶಸ್ತ್ರಾಸ್ತ್ರ, ಪಣಿ ಮತ್ತು ರಾಕೆಟ್ ರೆಜಿಮೆಂಟ್ಗಳನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
ಗಡಿಯನ್ನು ಕೇಂದ್ರೀಕರಿಸಿ ಡ್ರೋನ್ ನಿಯೋಜನೆ, ಸ್ಯಾಟಲೈಟ್ ಮೂಲಕವೂ ನಿಗಾ ಹೆಚ್ಚಿಸಿರುವ ಚೀನಾ, ಟಿಬೆಟಿಯನ್ ಯುವಕರನ್ನು ರಾತ್ರಿ ಹೊತ್ತು ಗಡಿ ಕಾಯಲು ನೇಮಿಸುವ ಪ್ರಯತ್ನವನ್ನು ಮಾಡುತ್ತಿದೆ. 2020ರ ಚಳಿಗಾಲಕ್ಕೆ ಹೋಲಿಸಿದರೆ ಈ ಸಾರಿ ಚೀನಾ ಸೇನೆಯ ಸಿದ್ಧತೆ ಬಲಿಷ್ಠವಾಗಿದೆ ಎಂದು ಮೂಲಗಳು ಹೇಳಿವೆ.
ಭಾರತ ಕೂಡ ಗಡಿಯಲ್ಲಿ ಮೂಲ ಸೌಕರ್ಯ ಹೆಚ್ಚುವ ಕಾರ್ಯ ಕೈಗೊಂಡಿದೆ. ಅದರೆ ಇದರ ವೇಗ ಚೀನಾದಷ್ಟು ವೇಗವಾಗಿಲ್ಲ. ಸೇನೆಯ ಗಡಿ ರಸ್ತೆ ಅಭಿವೃದ್ಧಿ ಘಟಕವು ಗಡಿ ರಸ್ತೆಗಳ ಸಂಪರ್ಕ ಸುಧಾರಣೆ, ಸೇತುವೆ ನಿರ್ಮಾಣ ಕಾಮಗಾರಿ ನಡೆಸಿದೆ. ಜತೆಗೆ ಗಡಿಯ ಮುಂಚೂಣಿ ನೆಲೆಗಳಿಗೆ ಶಸ್ತ್ರಾಸ್ತ್ರ, ಅತ್ಯಾಧುನಿಕ ವಿಮಾನ, ಟ್ಯಾಂಕ್ಗಳನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
Discussion about this post