ನವದೆಹಲಿ: ತೀವ್ರ ಮಳೆಯ ಕಾರಣ ದೇಶದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಆಗುತ್ತಿಲ್ಲ, ಗೂಡ್ಸ್ ರೈಲು ಸಂಚಾರಕ್ಕೂ ಅಡಚಣೆ ಆಗಿದೆ. ಜೊತೆಗೆ ತೆಗೆದಿರುವ ಕಲ್ಲಿದ್ದಲು ತೋಯ್ದು ಹೋಗಿರುವುದರಿಂದ ಅವುಗಳನ್ನು ತಕ್ಷಣಕ್ಕೆ ಬಳಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದೇಶದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ತೀವ್ರ ಕುಸಿತವಾಗಿದ್ದು, ವಿದ್ಯುತ್ ಸಮಸ್ಯೆ ದೇಶಾದ್ಯಂತ ಕಾಡುವ ಆತಂಕ ಎದುರಾಗಿದೆ. ಈಗಿರುವ ದಾಸ್ತಾನು ಕೆಲ ದಿನ ಮಟ್ಟಿಗೆಷ್ಟೆ ಸಾಕಾಗುತ್ತದೆ ಎಂದು ಹೇಳಲಾಗಿದೆ. ಈ ಮಧ್ಯೆ, ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲು ಧಾರಣೆ ಕೂಡ ವಿಪರೀತ ಏರಿಕೆ ಕಂಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕದ ರಾಯಚೂರು, ಯರಮರಸ್, ಬಳ್ಳಾರಿಯಲ್ಲಿರುವ ಶಾಖೋತ್ಪನ್ನ ಘಟಗಳು ಸೇರಿದಂತೆ ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ, ತಮಿಳುನಾಡುಗಳ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಗೆ ಅಡಚಣೆ ಆಗುವ ಸಂಭವ ಇದೆ. ವಿದ್ಯುತ್ ಸಮಸ್ಯೆ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಕಲ್ಲಿದ್ದಲು ಕೊರತೆ ಹೊಗಲಾಡಿಸಲು ಪ್ರಧಾನಿ ಮೋದಿ ಕೂಡಲ ಮಧ್ಯಪ್ರವೇಶ ಮಾಡಬೇಕು ಎಂದು ಆಂಧ್ರ ಪ್ರದೇಶದ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆಗ್ರಹಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ವಿದ್ಯುತ್ ಸ್ಥಾವರಗಳಿಗೆ ಗ್ಯಾಸ್ ಪೂರೈಕೆ ಮಾಡಲಾಗುವುದು ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ. ಪಂಜಾಬ್ನಲ್ಲಿ ಈಗಾಗಲೇ ಲೋಡ್ಶೆಡ್ಡಿಂಗ್ ಘೋಷಣೆ ಮಾಡಲಾಗಿದೆ.
ಕಲ್ಲಿದ್ದಲು ಗಣಿಗಳಿರುವ ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್ಗಢ, ಮಧ್ಯಪ್ರದೇಶ ಇನ್ನಿತರ ರಾಜ್ಯಗಳಲ್ಲಿ ವಿಪರೀತ ಮಳೆಯಿಂದಾಗಿ ಕಲ್ಲಿದ್ದಲು ಗಣಿಯಲ್ಲಿ ಕೆಲಸಗಳು ನಿಂತಿವೆ ಮತ್ತು ತೆಗೆಯಲಾದ ಕಲ್ಲಿದ್ದಲೂ ತೋಯ್ದು ಹೋಗಿದೆ ಮತ್ತು ಸಾಗಣೆಯೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಲ್ಲಿದ್ದಲು ಕೊರತೆ ಎದುರಾಗಿದೆ. ಮುಂದಿನ ಮೂರು ದಿನ 1.60 ಮೆಟ್ರಿಕ್ ಟನ್ ಮಾತ್ರ ಬಳಕೆ ಮಾಡಲು ಸೂಚಿಸಲಾಗಿದೆ. ಪರಿಸ್ಥಿಯ ಮೇಲೆ ಅಂತರ್ ಸಚಿವಾಲಯದ ತಂಡ ನಿಗಾ ಇರಿಸಿದೆ. ತುರ್ತು ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
Coal Shortage Fears
ಇದನ್ನು ಓದಿ: Video: ಧಾರಾಕಾರ ಮಳೆಗೆ ನಲುಗಿದ ಹೈದರಾಬಾದ್
ಇದನ್ನು ಓದಿ: ಕೆಟ್ಟು ಹೋದ 24 ಗಂಟೆಯೊಳಗೆ ಪರಿವರ್ತಕ ಬದಲಾವಣೆ ಮಾಡಬೇಕು
Discussion about this post