ಲಖನೌ: ಉತ್ತರ ಪ್ರದೇಶ ಚುನಾವಣೆಯಲ್ಲಿ ಶತಾಯಗತಾಯ ಗೆದ್ದು, ಮೂರು ದಶಕದ ನಂತರ ಅಧಿಕಾರ ಹಿಡಿಯಲು ಸಂಕಲ್ಪ ಮಾಡಿರುವ ಕಾಂಗ್ರೆಸ್, ಭರಪೂರ ಭರವಸೆಗಳನ್ನು ಒಳಗೊಂಡಿರುವ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ.
ಕಾಂಗ್ರೆಸ್ನ ಪ್ರಧಾನ ಕಾರ್ಯದಶರ್ಶಿಯೂ ಆದ ಉತ್ತರ ಪ್ರದೇಶದ ಪಕ್ಷದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಬಾರಾಬಂಕಿಯಲ್ಲಿ ಪ್ರತಿಜ್ಞಾ ಯಾತ್ರೆ ಆರಂಭಿಸಿ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಯುವ ಸಮುದಾಯಕ್ಕೆ 20 ಲಕ್ಷ ಉದ್ಯೋಗ ಸೃಷ್ಟಿ, ವಿದ್ಯಾರ್ಥಿನಿಯರಿಗೆ ಇ-ಸ್ಕೂಟರ್, ಮೊಬೈಲ್ ನೀಡುವ ಘೋಷಣೆಯನ್ನು ಮಾಡಿದೆ. ಎಲ್ಲ ವರ್ಗದ ಬಳಕೆದಾರರಿಗೆ ವಿದ್ಯುತ್ ಶುಲ್ಕದಲ್ಲಿ ಶೇ. 50 ಕಡಿತ, ಕೋವಿಡ್ ಸಾಂಕ್ರಾಮಿಕದ ವೇಳೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಶುಲ್ಕದ ಸಂಪೂರ್ಣ ಮನ್ನಾ, ಬಡವರ್ಗದ ಕುಟುಂಬಗಳಿಗೆ ವಾರ್ಷಿಕ 25 ಸಾವಿರ ರೂಪಾಯಿ ನೆರವು, ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ, ಭತ್ತ ಮತ್ತು ಗೋಧಿ ಪ್ರತಿ ಕ್ವಿಂಟಾಲ್ ಬೆಂಬಲ ಬೆಲೆ (ಎಂಎಸ್ಪಿ) 2,500 ರೂಪಾಯಿಗೆ ಏರಿಕೆ, ಕಬ್ಬಿಗೆ 400 ರೂಪಾಯಿ ಎಂಎಸ್ಪಿ ಹೆಚ್ಚಳ ಇನ್ನಿತರ ಆಶ್ವಾಸನೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಪಕ್ಷದ ಸಂಘಟನೆಯನ್ನು ಬೇರುಮಟ್ಟದಿಂದ ಬಲಗೊಳಿಸಿ ಚುನಾವಣೆ ಗೆಲ್ಲಲು ತಂತ್ರೋಪಾಯ ರೂಪಿಸುತ್ತಿರುವ ಕಾಂಗ್ರೆಸ್ ಈಗಾಗಲೇ ಶೇ. 40ರಷ್ಟು ಮಹಿಳೆಯರಿಗೆ ಈ ಸಾರಿ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಸಂಭಾವ್ಯ ಅಭ್ಯರ್ಥಿಗಳ ಹುಡುಕಾಟವನ್ನು ಆರಂಭಿಸಿದ್ದು, ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಹೈಕಮಾಂಡ್ ಸಭೆ ನಡೆಸಿದೆ.
Congress Releases Uttar Pradesh Election Manifesto
ಇದನ್ನೂ ಓದಿ: Byelection: ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ
ಇದನ್ನೂ ಓದಿ: ಪೊಲೀಸ್ ಮತ್ತು ಪ್ರಿಯಾಂಕಾ ನಡುವಿನ ಮಾತಿನ ಚಕಮಕಿ ಹರಿಯಬಿಟ್ಟ ಕಾಂಗ್ರೆಸ್
Discussion about this post