ಪುನೀತ್ ರಾಜ್ಕುಮಾರ್ ನಿಧನವಾಗಿ 14 ದಿನವಾಯಿತು. ಈ ತನಕ ಯಾವುದೇ ಹೇಳಿಕೆ ನೀಡದ, ಅಂತ್ಯಕ್ರಿಯೆಗೂ ಬರದ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ ಇದ್ದಕ್ಕಿದ್ದಂತೆ ತುಟಿ ಬಿಚ್ಚಿ ಎಲ್ಲರ ಆಶ್ಚರ್ಯ ಮಾಡಿಸಿದ್ದಾರೆ. ಮಗಳ ಐಶ್ವರ್ಯ ಆ್ಯಪ್ನಲ್ಲಿ ಪ್ರತ್ಯಕ್ಷರಾಗಿ ಪುನೀತ್ ಅಗಲಿಕೆಯ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
‘ಮಗನೆ ಪುನೀತ್, ನಿನ್ನ ಅಗಲಿಕೆಯನ್ನು ನನಗೆ ಒಪ್ಪಿಕೊಳ್ಳುವುದಕ್ಕೇ ಆಗುತ್ತಿಲ್ಲ. ಆದರೂ, ನಿನ್ನ ಆತ್ಮಕ್ಕೆ ಶಾಂತಿ ಕೋರುತ್ತೇನೆ’ ಎಂದು ಬರೆದುಕೊಂಡು, ಆಡಿಯೋ ಒಂದನ್ನು ಮಗಳ ಆ್ಯಪ್ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅದನ್ನು ಸ್ವತಃ ರಜನಿಕಾಂತ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡುತ್ತಿದ್ದಂತೆ ನೂರಾರು ಅಭಿಮಾನಿಗಳು ತಲೈವ ಅವರ ಈ ನಡೆಗೆ ಆಕ್ಷೇಪ, ದಿಗ್ರ್ಭಮೆ ವ್ಯಕ್ತಪಡಿಸಿದ್ದಾರೆ.
ನೀವು ಒಬ್ಬ ಹಿರಿಯ, ಅದ್ಬುತ ನಟರಾಗಿ ಹೀಗೆ, ಮಗಳ ಆ್ಯಪ್ನ ಪ್ರಚಾರಕ್ಕಾಗಿ ಪುನೀತ್ ಅವರ ಸಾವನ್ನು ಬಳಸಿಕೊಳ್ಳಬಾರದಿತ್ತು ಎಂದು ಕಟುಕಿಯಾಡಿದ್ದಾರೆ. ಇನ್ನೊಬ್ಬರು- ಮಗಳ ಆ್ಯಪ್ನ್ನು ಜನಪ್ರಿಯ ಮಾಡಲು ಪುನೀತ್ ಅವರ ಶ್ರದ್ಧಾಂಜಲಿಯೇ ಬೇಕಿತ್ತಾ? ತಲೈವ ನಿಮ್ಮ ನಡೆ ನನಗೆ ಬಹಳ ದಿಗ್ಭ್ರಮೆ ಮೂಡಿಸಿದೆ ಎಂದಿದ್ದಾರೆ.
ಬಹಳಷ್ಟು ಟ್ವೀಟಿಗರು ಪುನೀತ್ ಅವರ ಈ ಸಂದರ್ಭವನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದ್ದೀರ ಎಂದು ಆರೋಪಿಸಿ ರಜನೀಕಾಂತ್ ಮಗಳು ಸೌಂದರ್ಯಾ ರಜನೀಕಾಂತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಜನೀಕಾಂತ್ ಅವರ ಟ್ವಿಟರ್ನ ಮೇಲುಸ್ತುವಾರಿ ವಹಿಸಿಕೊಂಡಿರುವವರು ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಟಿ ರಾಗಿಣಿ ಫುಲ್ ಬ್ಯುಸಿ; ಸಿನಿ ಪಯಣದಲ್ಲೇ ಭಿನ್ನ ಪಾತ್ರದಲ್ಲಿ ತುಪ್ಪದ ಬೆಡಗಿ
Discussion about this post