ಇಟಾನಗರ: ಅರುಣಾಚಲ ಪ್ರದೇಶದ ಕಮೆಂಗ್ ನದಿ ಕಲುಷಿತವಾಗಿರುವ ಕಾರಣ ಪೂರ್ವ ಕಮೆಂಗ್ ಜಿಲ್ಲೆಯ ಸೆಪ್ಪಾ ಹಳ್ಳಿಯಲ್ಲಿ ನೀರು ಕಪ್ಪಿಟ್ಟಿದೆ. ಇದರಿಂದ ಸಾವಿರಾರು ಮೀನುಗಳು ಅಸುನೀಗಿವೆ. ನೀರು ವಿಷಕಾರಿಯಾಗಲು ನದಿಯ ಮೇಲ್ಭಾಗದಲ್ಲಿ ಚೀನಾ ನಡೆಸುತ್ತಿರುವ ನಿರ್ಮಾಣ ಕಾಮಗಾರಿ ಕಾರಣವೆಂದು ಈ ದುರ್ಘಟನೆ ಸಂಭವಿಸಿದೆ ಎಂದು ಸೆಪ್ಪಾ ಗ್ರಾಮಸ್ಥರು ದೂರಿದ್ದಾರೆ.
ನೀರಿನಲ್ಲಿ ಕರಗುವಂತಹ ವಿಷಕಾರಿ ಅಂಶ (ಟಿಡಿಎಸ್) ಅಪಾಯಕಾರಿ ಮಟ್ಟದಲ್ಲಿ ಇರುವ ಕಾರಣ ಮೀನುಗಳ ಮಾರಣಹೋಮ ಆಗಿದೆ. ಸತ್ತ ಮೀನುಗಳನ್ನು ತಿನ್ನಬಾರದು ಎಂದು ರಾಜ್ಯ ಮೀನುಗಾರಿಕಾ ಇಲಾಖೆ ಎಚ್ಚರಿಕೆ ನೀಡಿದೆ. ಸೆಪ್ಪಾದಲ್ಲಿ ಪ್ರತಿ ಲೀಟರ್ ನದಿ ನೀರಿನಲ್ಲಿ 6,800 ಎಂಜಿಯಷ್ಟು ಟಿಡಿಎಸ್ ಇರುವುದು ದೃಢಪಟ್ಟಿದೆ. ಸಾಮಾನ್ಯವಾಗಿ ಇದು 300ರಿಂದ 1,200 ಎಂಜಿ ಇರಬೇಕು. ಟಿಡಿಎಸ್ ಪ್ರಮಾಣ ಹೀಗೇ ಮುಂದುವರಿದರೆ ಮೀನುಗಳ ಸಾವಿನ ಸಂಖ್ಯೆ ಲಕ್ಷಕ್ಕೆ ಏರುತ್ತದೆ ಮತ್ತು ನದಿಯ ಕೆಳಪಾತ್ರಕ್ಕೂ ವಿಸ್ತರಿಸುತ್ತದೆ ಎಂದು ಪೂರ್ವ ಕಮೆಂಗ್ ಜಿಲ್ಲಾ ಮೀನುಗಾರಿಕಾ ಇಲಾಖೆ ಹೇಳಿದೆ.
ಈ ಮಧ್ಯೆ, ಈ ಘಟನೆ ಬಗ್ಗೆ ತನಿಖೆ ನಡೆಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಪೂರ್ವ ಸೆಪ್ಪಾದ ಶಾಸಕ ತಪುಕ್ ಟಾಕು ಸರ್ಕಾರವನ್ನು ಆಗ್ರಹಿಸಿದ್ದಾರೆ.
2017ರಲ್ಲಿ ಅರುಣಾಚಲದ ಪಾಸಿಘಾಟ್ನಲ್ಲಿ ಸಿಯಾಂಗ್ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿತ್ತು. ನದಿಯ ಮೇಲ್ಪಾತ್ರದ ಸಿಯಾಂಗ್ನಿಂದ ಕ್ಸಿನ್ಜಿಯಾಂಗ್ ಪ್ರಾಂತ್ಯದ ತಕ್ಲಾಮಕನ್ ಮರುಭೂಮಿಗೆ ನೀರು ಒದಗಿಸಲು ಚೀನಾ 10,000 ಕಿ.ಮೀ. ಉದ್ದದ ಸುರಂಗ ನಿಮಿರ್ಸುತ್ತಿದ್ದ ಕಾರಣ ನದಿ ಕಲುಷಿತವಾಗಿದೆ ಎಂದು ಕಾಂಗ್ರೆಸ್ ಶಾಸಕ ನಿನೊಂಗ್ ಇರಿಂಗ್ ಆಪಾದಿಸಿದ್ದರು.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದೂ ಆಗ್ರಹಿಸಿದ್ದರು. ಆದರೆ, ಚೀನಾ ಈ ಆರೋಪವನ್ನು ಅಲ್ಲಗಳೆದಿತ್ತು.
Fish Dies in Arunalchal Pradesh River Due to Water Pollution
ಇದನ್ನೂ ಓದಿ: ಅರುಣಾಚಲ ಪ್ರದೇಶದ ಎಲ್ಎಸಿ ಸಮೀಪ ಭಾರತ-ಚೀನಾ ಸೈನಿಕರ ಸಂಘರ್ಷ
ಇದನ್ನೂ ಓದಿ: ಅರುಣಾಚಲದ ಎಲ್ಎಸಿಯಲ್ಲಿ ಶಸ್ತ್ರಾಸ್ತ್ರಗಳ ಸಂಖ್ಯೆ ಹೆಚ್ಚಳ

























Discussion about this post