ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮೂರು ದಿನಗಳಿಂದ ಮಳೆ ತೀವ್ರವಾಗಿದ್ದು, ಪ್ರವಾಹಕ್ಕೆ ಸಿಲುಕಿ ಅನೇಕ ಸೇತುವೆಗಳು, ಕಟ್ಟಡಗಳು, ರಸ್ತೆಗಳು ಕೊಚ್ಚಿಹೋಗಿವೆ. ಪ್ರವಾಸಿಗರು ಇದ್ದಲ್ಲೆ ಸಿಲುಕಿಕೊಂಡಿದ್ದಾರೆ. ಮಳೆಯ ಕಾರಣದಿಂದ ಎರಡು ಪ್ರತ್ಯೇಕ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜತೆ ದೂರವಾಣಿಯಲ್ಲಿ ಮಾತನಾಡಿದ್ದು, ರಾಜ್ಯದಲ್ಲಿ ಮಳೆ ಪರಿಸ್ಥಿತಿ, ವಿಕೋಪ ಸನ್ನಿವೇಶದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಕೇಂದ್ರದಿಂದ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ ಎಂದು ಉತ್ತರಾಖಂಡದ ಸಚಿವ ಅಜಯ್ ಭಟ್ ತಿಳಿಸಿದ್ದಾರೆ. ದೆಹಲಿಯಲ್ಲಿರುವ ಉತ್ತರಾಖಂಡದ ರಾಜ್ಯಪಾಲ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುಮರ್ಮಿತ್ ಸಿಂಗ್ ಪ್ರಧಾನಿ ಮೋದಿಯವರನ್ನು ಸೋಮವಾರ ಭೇಟಿ ಮಾಡಿದ್ದರು. ರಾಜ್ಯದಲ್ಲಿ ಭಾರಿ ಇಲ್ಲವೆ ಸಾಧಾರಣೆ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ರಾಜ್ಯದಲ್ಲಿ ರೆಡ್ ಅಲರ್ಟ್ ಎಚ್ಚರಿಕೆ ಘೋಷಿಸಿದೆ.
ಚಾರ್ಧಾಮ್ ಯಾತ್ರೆ ತಾತ್ಕಾಲಿಕ ಸ್ಥಗಿತ
ವಿಪರೀತ ಮಳೆಯ ಕಾರಣ ರಾಜ್ಯ ಸರ್ಕಾರ ಚಾರ್ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಯಾತ್ರಿಗಳು ಹರಿದ್ವಾರ ಮತ್ತು ಋಷಿಕೇಶದಲ್ಲೆ ಇರುವಂತೆ ಸೂಚಿಸಿದೆ.
ಐವರು ಸಾವು
ಮಳೆಯಿಂದಾಗಿ ಪೌರಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೇಪಾಳ ಮೂಲದ ಮೂವರು ಕಾಮರ್ಮಿಕರು ಸಾವನ್ನಪ್ಪಿದ್ದು, ಇವರು ಹೋಟೆಲ್ ನಿರ್ಮಾಣ ಕಾಮಗಾರಿಯಲ್ಲಿ ದುಡಿಯುತ್ತಿದ್ದರು. ಇನ್ನಿಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಚಂಪಾವತ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕೊಚ್ಚಿ ಹೋದ ಕಾರಣ ಇಬ್ಬರು ಅಸುನೀಗಿದ್ದಾರೆ.
ಉತ್ತರಾಖಂಡದ ಹೆಗ್ಗುರುತಾದ ನೈನಿತಾಲ್ ಸರೋವಾರ ಕೋಡಿ ಬಂದಿದೆ. ಇದರಿಂದ ನೈನಿತಾಲ್ನ ರಸ್ತೆಗಳಲ್ಲಿ ಮಂಡಿಯುದ್ದ ನೀರು ನಿಂತಿದೆ. ಹಲ್ದ್ವಾನಿ ಜಿಲ್ಲೆ ಗೌಲಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೂ ಕೆಲವು ಬೈಕ್ ಸವಾರರು ಮುನ್ನುಗ್ಗಿದ್ದರಿಂದ ಸೇತುವೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ನೆರವಿವಾಗಿ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ.
Heavy Rains Lashes Uttarakhand PM Narendra Modi Discusses about Flood Situation
Heavy rain wreaks havoc in Nainital.
Our thoughts and prayers are with the people of #Uttarakhand.
I appeal to youth congress volunteers in all affected areas to lend a helping hand. Please stay safe. @IYCUttarakhand pic.twitter.com/QihXeG4XvG
— Srinivas BV (@srinivasiyc) October 19, 2021
#WATCH | An under construction bridge, over a raging Chalthi River in Champawat, washed away due to rise in the water level caused by incessant rainfall in parts of Uttarakhand. pic.twitter.com/AaLBdClIwe
— ANI (@ANI) October 19, 2021
ಇದನ್ನೂ ಓದಿ: ಕೇರಳದಲ್ಲಿ ಮಳೆಯಿಂದ ಭೂಕುಸಿತ, ಪ್ರವಾಹಕ್ಕೆ 27 ಮಂದಿ ಸಾವು
ಇದನ್ನೂ ಓದಿ: ಒಳಚರಂಡಿಗಳ ಕಾಂಕ್ರಿಟೀಕರಣದ ಜೊತೆ ಕೆರೆಗಳ ಒತ್ತುವರಿ ಬೆಂಗಳೂರಿನ ಮಳೆನೀರಿನ ಪ್ರವಾಹ ಸ್ಥಿತಿಗೆ ಕಾರಣ: ಸಿಎಜಿ ವರದಿ
Discussion about this post