ವಾಷಿಂಗ್ಟನ್: 1971ರ ಭಾರತ- ಪಾಕ್ ಯುದ್ಧದ ಸಂದರ್ಭದಲ್ಲಿ ಪಶ್ಚಿಮ ಪಾಕಿಸ್ತಾನವನ್ನು ತಾನು ರಕ್ಷಿಸಿದ್ದಾಗಿ ಅಮೆರಿಕ ಹೇಳಿಕೊಂಡಿತ್ತು. ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸಿನ್ಗೆ ಅವರ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ಈ ಮಾತನ್ನು ಹೇಳಿದ್ದರು ಎಂಬ ವರ್ಗೀಕೃತ ಗೌಪ್ಯ ದಾಖಲೆ ಬಾಂಗ್ಲಾ ವಿಮೋಚನಾ ಚಳವಳಿಯ 50ನೇ ವರ್ಷದ ಮಹೋತ್ಸವದ ವೇಳೆ ಬಹಿರಂಗ ಆಗಿದೆ.
1971ರ ಡಿಸೆಂಬರ್ನಲ್ಲಿ ಸೋತ ಪಾಕ್ ಸೇನೆಯ 93,000 ಸೈನಿಕರು ಭಾರತಕ್ಕೆ ಶರಣಾದರು. ಪೂರ್ವ (ಬಾಂಗ್ಲಾದೇಶ) ಮತ್ತು ಪಚ್ಚಿಮ (ಪಾಕಿಸ್ತಾನ) ಎರಡೂ ಗಡಿಯಲ್ಲಿ ಭಾರತೀಯ ಸೇನೆ ದಿಗ್ವಿಜಯ ಸಾಧಿಸಿತು. ಡಿಸೆಂಬರ್ 16ರಂದು ಈ ಕುರಿತು ಒಪ್ಪಂದ ಏರ್ಪಿಟಿತು. ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಎ.ಎ.ಕೆ. ನಿಯಾಜಿ, ಭಾರತದ ಪೂರ್ವ ಕಮಾಂಡನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜೆ.ಎಸ್.ಅರೋರಾ ಮುಂದೆ ತಮ್ಮ ಶಸ್ತ್ರವನ್ನು ಇರಿಸಿ ಶರಣಾಗತಿ ಪತ್ರಕ್ಕೆ ಸಹಿ ಮಾಡಿದರು. ಈ ಸಂದರ್ಭದಲ್ಲಿ ರಿಚರ್ಡ್ ನಿಕ್ಸಿನ್ಗೆ ದೂರವಾಣಿ ಕರೆ ಮಾಡಿದ್ದ ಕಿಸ್ಸಿಂಜೆರ್, ‘ಅಭಿನಂದನೆಗಳು ಅಧ್ಯಕ್ಷರೆ, ನೀವು ಪಶ್ಚಿಮ ಪಾಕಿಸ್ತಾನವನ್ನು ರಕ್ಷಿಸಿದಿರಿ’ ಎಂದು ಹೇಳಿದ್ದರು.
ಆದರೆ, ಬಾಂಗ್ಲಾ ವಿಮೋಚನೆಯ ಹೋರಾಟದಲ್ಲಿ ಅಮೆರಿಕ ವಹಿಸಿದ ಪಾತ್ರವನ್ನು ರಾಜತಾಂತ್ರಿಕ ವೈಫಲ್ಯವೆಂದೇ ಜಾಗತಿಕ ವಲಯದ ವಿಶ್ಲೇಷಿಸಿದೆ. ಈ ಯುದ್ಧಕ್ಕೂ ಎಂಟೂವರೆ ತಿಂಗಳು ಮುಂಚೆ ಪಶ್ಚಿಮ ಪಾಕ್ ಅಧ್ಯಕ್ಷ ಜನರಲ್ ಯಾಹ್ಯಾ ಖಾನ್ ವಿಶ್ವಸಂಸ್ಥೆಯಲ್ಲಿ ರಹಸ್ಯ ಸಭೆಯಲ್ಲಿ ಹೇಳಿದ್ದನ್ನು ಪೂರ್ಣವಾಗಿ ಅಮೆರಿಕ ನಂಬಿತು. ಪೂರ್ವ ಪಾಕಿಸ್ತಾನದಲ್ಲಿ ದಂಗೆಯ ಬಗ್ಗೆ ಖಾನ್ ತಪ್ಪಾದ ಅಭಿಪ್ರಾಯ ನೀಡಿದ್ದರು ಮತ್ತು ಇದನ್ನು ಹತ್ತಿಕ್ಕಲು ಪಾಕ್ ಸೇನೆ ಸಮರ್ಥವಾಗಿದೆ ಎಂದು ಆ ಸಭೆಯನ್ನು ನಂಬಿಸಿದ್ದರು. ಆದರೆ, ಭಾರತ ಬಾಂಗ್ಲಾ ವಿಮೋಚನಾ ಹೋರಾಟವನ್ನು ಭಾರತ ಬಹಳ ಅಚ್ಚುಕಟ್ಟಾಗಿ ನಿವರ್ಹಿಸಿತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಪೂರ್ವ ಪಾಕಿಸ್ತಾನದಲ್ಲಿ ಉಂಟಾಗಿರುವ ಆಂತರಿಕ ಕ್ಷೋಭೆ, ಪಶ್ಚಿಮ ಪಾಕಿಸ್ತಾನದ ಅಧಿಕಾರಿದ ಹಪಾಹಪಿತನ, ಸೇನಾ ದೌರ್ಜನ್ಯ, ಇದರಿಂದ ಭಾರತಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ನಿರಾಶ್ರಿತರಾಗಿ ಬರುತ್ತಿರುವ ಬಿಕ್ಕಟ್ಟನ್ನು ವಿಶ್ವ ನಾಯಕರಿಗೆ ಪುರಾವೆ ಸಹಿತ ಪತ್ರದಲ್ಲಿ ವಿವರಿಸಿದರು. ಮುಜಬಿರ್ ರೆಹಮಾನ್ ನೇತೃತ್ವದಲ್ಲಿ ನಡೆಯುತ್ತಿದ್ದ ಬಾಂಗ್ಲಾ ವಿಮೋಚನಾ ಹೋರಾಟಕ್ಕೆ ಬೆಂಬಲ ನೀಡಿ, ಪಶ್ಚಿಮ ಪಾಕಿಸ್ತಾನದ ಸೇನೆಯನ್ನು ಭಾರತೀಯ ಸೇನೆ ಬಗ್ಗು ಬಡಿಯಿತು.
How US “Saved West Pakistan” As India Liberated Bangladesh
ಇದನ್ನು ಓದಿ: ಡಿಸೆಂಬರ್ 16ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬಾಂಗ್ಲಾಕ್ಕೆ ಭೇಟಿ
ಇದನ್ನೂ ಓದಿ: ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆಯಲು ಕಾರಣರಾದ ಪಾಕಿಸ್ತಾನ ಮಾಜಿ ಯೋಧಗೆ ಭಾರತದ ಪದ್ಮಶ್ರೀ ಗೌರವ
Discussion about this post