ಹೈದರಾಬಾದ್: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿಯುಂಟಾಗಿತ್ತು. ರಾತ್ರಿ ಸುಮಾರು 8:30 ರಿಂದ 11:00 ಗಂಟೆ ಅವಧಿಯಲ್ಲಿ 10ರಿಂದ 12 ಸೆಂಮೀಯಷ್ಟು ಮಳೆಯಾಗಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ಹೆಚ್ಚಿನ ಪ್ರಮಾಣದ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ಇಬ್ಬರು ವ್ಯಕ್ತಿಗಳು ಈ ಭಾರಿ ಪ್ರವಾಹದಿಂದಾಗಿ ಕೊಚ್ಚಿಹೋಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ರೆಸ್ಟೊರೆಂಟ್ ಒಂದರಲ್ಲಿ ಕುಳಿತಿದ್ದ ಗ್ರಾಹಕರ ಮೊಣಕಾಲಿನವರೆಗೂ ನೀರು ನಿಂತಿದ್ದ ದೃಶ್ಯ ಅದರಲ್ಲಿದೆ. ಸಾರ್ವಜನಿಕರು ಹಂಚಿಕೊಂಡ ವಿಡಿಯೋಗಳಲ್ಲಿ ನೀರು ತುಂಬಿದ ರಸ್ತೆಗಳು ಹಾಗೂ ಅರ್ಧಕ್ಕೂ ಹೆಚ್ಚು ಮುಳುಗಿದ ವಾಹನಗಳು ನೀರಿನಲ್ಲಿ ತೇಲುತ್ತಿದ್ದ ದೃಶ್ಯಗಳು ಹಳೆಯ ನಗರ ಪ್ರದೇಶದಲ್ಲಿ ಕಂಡುಬಂದವು.
ಚಿಂತಲಕುಂಟ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯು ಮಳೆನೀರಿನಲ್ಲಿ ಕೊಚ್ಚಿಹೋದರೂ ನಂತರ ಯಾವುದೇ ಅಪಾಯವಿಲ್ಲದೇ ಸುರಕ್ಷಿತ ಸ್ಥಿತಿಯಲ್ಲಿಯೇ ಪತ್ತೆಯಾದ. ಪ್ರವಾಹದಲ್ಲಿ ಕೊಚ್ಚಿಹೋದ ಇನ್ನಿಬ್ಬರು ಇನ್ನೂ ಪತ್ತೆಯಾಗಿಲ್ಲವೆಂದು ವನಸ್ಥಲಿಪುರಮ್ ಪೋಲೀಸರು ತಿಳಿಸಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಗಳನ್ನು ಪ್ರಾರಂಭಿಸಲಾಗಿದ್ದು ಅವರಿಬ್ಬರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಹಿರಿಯ ಪೋಲೀಸ್ ಅಧಿಕಾರಿ ಕೆ.ಪುರುಷೋತ್ತಮ್ ತಿಳಿಸಿದ್ದಾರೆ. ಸರೂರ್ನಗರದ ಲಿಂಗೋಜಿಗೂಡ ಪ್ರದೇಶದಲ್ಲಿ ಅತಿಹೆಚ್ಚು, ಅಂದರೆ 13 ಸೆಂಮೀ ಮಳೆಯಾಗಿದೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಿಂದಿನ ವರ್ಷ ಇದೇ ಸಮಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯ ಭೀಕರತೆಯನ್ನು ನೆನಪಿಸಿಕೊಂಡಡಿದ್ದಾರೆ. ಇಷ್ಟೆಲ್ಲಾ ಆದರೂ ನಗರಾಡಳಿತವು ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಹಿಡಿಶಾಪ ಹಾಕಿದರು.
#WATCH | Telangana: Rainwater entered a restaurant in Old City after incessant rains lashed Hyderabad, yesterday pic.twitter.com/ACLKd1Vb19
— ANI (@ANI) October 9, 2021
#WATCH | Telangana: People struggle to cross a heavily waterlogged road after rain lashed several parts of Vanasthalipuram, Hyderabad. “Two persons have been washed away after nullahs overflowed due to heavy rains. Rescue team searching for them,” said K Purushottam, ACP (08.10) pic.twitter.com/4RiAhA0EY2
— ANI (@ANI) October 9, 2021
#WATCH | Telangana: Lanes, roads submerged following incessant rainfall in Hyderabad. Visuals from the Old city. (08.10) pic.twitter.com/5XCGtsmIwt
— ANI (@ANI) October 8, 2021
Hyderabad Rain Life Affected Flood on Streets
ಇದನ್ನೂ ಓದಿ: ಹೈದರಾಬಾದ್: ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಆತ್ಮಹತ್ಯೆ
ಇದನ್ನೂ ಓದಿ: ನ 2 ರಿಂದ 3 ದಿನಗಳ ಕಾಲ ಹೂಡಿಕೆದಾರರ ಸಮಾವೇಶ
Discussion about this post