ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ ಬುಧವಾರದಿಂದ ನಡೆಯುತ್ತಿದ್ದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಶುಕ್ರವಾರ ಮುಕ್ತಾಯವಾಗಿದ್ದು, ತತಕ್ಷಣದ ಪಾವತಿ ಸೇವೆಯ (ಐಎಂಪಿಎಸ್) ಮಿತಿಯನ್ನು 2 ಲಕ್ಷ ರೂಪಾಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾವ ಮಂಡನೆಯಾಗಿದೆ. ಜತೆಗೆ ರೆಪೊ ದರ ಶೇ. 4 ಮತ್ತು ರಿವರ್ಸ್ ರೆಪೊ ದರವನ್ನು ಶೇ. 3.35 ರಲ್ಲೇ ಮುಂದುವರಿಸಲು ಎಂಪಿಸಿಯ ಆರು ಸದಸ್ಯರ ಸಭೆಯಲ್ಲಿ 5-1ರ ಬಹುಮತದ ನಿರ್ಣಯ ಕೈಗೊಳ್ಳಲಾಗಿದೆ. ಇದು ಕಳೆದ ಎಂಟು ಅವಧಿಯಿಂದ ಬದಲಾವಣೆ ಆಗಿಲ್ಲ. ಮಾಜಿರ್ನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್ಎ್) ಮತ್ತು ಬ್ಯಾಂಕ್ಗಳ ಬಡ್ಡಿ ದರವನ್ನು ಶೇ. 4.25ರಲ್ಲೇ ಸಭೆ ಸ್ಥಿರಗೊಳಿಸಿದೆ. 2021-22ನೇ ಸಾಲಿನ ಹಣದುಬ್ಬರದ ಪ್ರಮಾಣವನ್ನು ಶೇ. 5.3ಕ್ಕೆ ಇಳಿಸಲಾಗಿದ್ದು, ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದರವನ್ನು ಶೇ. 9.5ಕ್ಕೆ ಎತ್ತರಿಸಲಾಗಿದೆ.
ಹಣಕಾಸು ವಂಚನೆ ತಡೆಯಲು “ರೆಗ್ಯುಲಟರಿ ಸ್ಯಾಂಡ್ಬಾಕ್ಸ್ ಸ್ಕೀಂ’, ಬ್ಯಾಂಕಿಂಗ್ಯೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್ಬಿಎ್ಸಿ) ಗ್ರಾಹಕರ ಕುಂದುಕೊರತೆ ನಿವಾರಿಸಲು ಆಂತರಿಕ ಒಂಬುಡ್ಸ್ಮನ್ ವ್ಯವಸ್ಥೆಯನ್ನು ಪರಿಚಯಿಸಲು ಎಂಪಿಸಿ ಸಭೆ ನಿರ್ಧರಿಸಿದೆ. ಜಿಎಸ್ಎಪಿ ಕಾರ್ಯಕ್ರಮದಲ್ಲಿ ಸರ್ಕಾರಿ ಬಾಂಡ್ಗಳ ಖರೀದಿ ಸ್ಥಗಿತಗೊಳಿಸಲು ತೀರ್ಮಾನಿಸಿದೆ. ಕಳೆದ ಎರಡು ತ್ರೈಮಾಸಿಕದಿಂದ 2.20 ಲಕ್ಷ ಕೋಟಿ ಮೌಲ್ಯದ ಬಾಂಡ್ಗಳನ್ನು ಖರೀದಿಸಲಾಗಿದ್ದು, ಇದು ಹಣದಹರಿವೆಗೆ (ಲಿಕ್ವಿಡಿಟಿ) ಸಾಕು. ಅಗತ್ಯ ಬಿದ್ದರೆ ಮತ್ತೆ ಖರೀದಿ ಆರಂಭಿಸಲಾಗುವುದು ಎಂದು ಆರ್ಬಿಐ ತಿಳಿಸಿದೆ. ವಿಆರ್ಆರ್ಆರ್ 14 ದಿನದ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದ್ದು, ಇದರ ಅವಧಿಯನ್ನು 28 ದಿನಕ್ಕೆ ಹಿಗ್ಗಿಸಲು ನಿರ್ಧರಿಸಿದೆ. ಮುಂದಿನ ಎರಡು ತಿಂಗಳಿಗೆ ಹರಾಜಿನ ಮೊತ್ತ 1ರಿಂದ 2 ಲಕ್ಷ ಕೋಟಿ ರೂ.ಗೆ ನಿಗದಿ ಮಾಡಿದೆ. ಸಣ್ಣ ಬ್ಯಾಂಕ್ಗಳಿಗೆ 10 ಸಾವಿರ ಕೋಟಿ ರೂಪಾಯಿವರೆಗೆ ನೀಡುವ ಎಸ್ಎಲ್ಟಿಆರ್ಒ ಸಾಲ ಯೋಜನೆಯನ್ನು ಮೂರು ವರ್ಷ ವಿಸ್ತರಿಸಲು ಎಂಪಿಸಿ ಸಮಿತಿ ನಿರ್ಧರಿಸಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣದುಬ್ಬರ ಅಧಿಕವಾಗಿರಲು ಇಂಧನ ತೈಲ ಧಾರಣೆಯೇ ಪ್ರಮುಖ ಕಾರಣ. ಆದ್ದರಿಂದ ತೈಲದ ಮೇಲೆ ವಿಧಿಸಲಾಗಿರುವ ಅಪರೋಕ್ಷ ತೆರಿಗೆಗಳನ್ನು ಸರ್ಕಾರ ತಗ್ಗಿಸಬೇಕು. ಇದರಿಂದ ಸಾಮಾನ್ಯ ಜನರ ಬದುಕು ಸುಗಮವಾಗುತ್ತದೆ. ಖಾದ್ಯ ತೈಲದ ಬೆಲೆ ಕೂಡ ಹೆಚ್ಚಳವಾಗಿರುವುದು ಕಳವಳಕಾರಿ ಬೆಳವಣಿಗೆ ಎಂದಿದ್ದಾರೆ.
ಕೋವಿಡ್-19 ಸಂಕಷ್ಟದಿಂದ ತತ್ತರಿಸಿರುವ ಆಥಿರ್ಕತೆ ರ್ಪೂಣವಾಗಿ ಚೇತರಿಸಿಕೊಳ್ಳದ ಕಾರಣ ಬಡ್ಡಿ ದರ ಕಡಿತದ ಬಗ್ಗೆ ಆರ್ಬಿಐ ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಹಣದುಬ್ಬರದ ದರ ಕೊಂಚ ಇಳಿಕೆ
2021-22ನೇ ಆಥಿರ್ಕ ಸಾಲಿನಲ್ಲಿ ಒಟ್ಟಾರೆಯಾಗಿ ಈ ಮೊದಲು ಅಂದಾಜಿಸಿದ್ದ ಶೇ. 5.7ರ ಹಣದುಬ್ಬರದ ಪ್ರಮಾಣವನ್ನು ಆರ್ಬಿಐ ಶೇ. 5.3ಕ್ಕೆ ತಗ್ಗಿಸಿದೆ. ಮೂರನೇ ತೆಮಾಸಿಕದಲ್ಲಿ ಹಣದುಬ್ಬರ ಪ್ರಮಾಣ ಇಳಿಕೆಯಾಗುವ ನೀರಿಕ್ಷೆಯನ್ನು ವ್ಯಕ್ತಪಡಿಸಿದೆ. ಹಣದುಬ್ಬರ ದರ ಶೇ. 4ರೊಳಗೆ ಇರುವುದು ಉತ್ತಮ ಎಂಬುದು ಆರ್ಬಿಐ ಸಲಹೆ.
ಶೇ. 9.5 ಜಿಡಿಪಿ ಬೆಳವಣಿಗೆ
ದೇಶದ ಒಟ್ಟು ಆಂತರಿಕ ಉತ್ಪನ್ನ ದರವನ್ನು (ಜಿಡಿಪಿ) ಶೇ. 9.5ಕ್ಕೆ ಆರ್ಬಿಐ ಹೆಚ್ಚಿಸಿದೆ. ಪ್ರಸಕ್ತ ಹಣಕಾಸು ಸಾಲಿನ ಎರಡನೇ ತೆಮಾಸಿಕದಲ್ಲಿ ಇದು ಶೇ. 7.9ರಷ್ಟು ಇರಲಿದೆ ಎಂದು ಹೇಳಿದೆ. ಜುಲೈನಿಂದ ಆರಂಭವಾಗಿ ಸೆಪ್ಟೆಂಬರ್ಗೆ ಕೊನೆಗೊಂಡಿರುವ ಈ ತೆಮಾಸಿಕದ ವರದಿ ಇನ್ನಷ್ಟೆ ಬರಬೇಕಿದೆ. ಕರೊನಾ ಸಾಂಕ್ರಾಮಿಕದ 2ನೇ ಅಲೆ ವೇಳೆ ಎಲ್ಲ ಕ್ಷೇತ್ರಗಳು ನೆಲಕಚ್ಚಿದ್ದವು. ಈಗ ಪರಿಸ್ಥಿತಿ ಸುಧಾರಿಸಿದ್ದು, ನಿರಂತರ ವಹಿವಾಟು ನಡೆಯುತ್ತಿರುವ ಕಾರಣ ಜಿಡಿಪಿ ಬೆಳವಣಿಗೆ ಕಾಣುತ್ತಿದೆ ಎಂದು ಆರ್ಬಿಐ ತಿಳಿಸಿದೆ.
ಐಎಂಪಿಎಸ್ ಮಿತಿ ಹೆಚ್ಚಳ
ದಿನದ 24 ತಾಸಿನಲ್ಲೂ ಗ್ರಾಹಕರ ಬ್ಯಾಕ್ ಖಾತೆಯಿಂದ ಖಾತೆಗೆ ಹಣ ವರ್ಗಾಯಿಸುವ ಐಎಂಪಿಎಸ್ ಮಿತಿಯನ್ನು 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಲು ಎಂಪಿಸಿ ಸಭೆಯಲ್ಲಿ ಪ್ರಸ್ತಾವ ಮಂಡನೆಯಾಗಿದೆ. ಎಸ್ಎಂಎಸ್ ಮತ್ತು ಐವಿಆರ್ಎಸ್ ಮೂಲಕ ಐಎಂಪಿಎಸ್ ಸೇವೆಯನ್ನ ಪಡೆಯಲು ಕನಿಷ್ಠ 5 ಸಾವಿರ ರೂಪಾಯಿಗಳ ವರ್ಗಾವಣೆ ಕಡ್ಡಾಯ ಎಂದು ಆರ್ಬಿಐ ತಿಳಿಸಿದೆ.
IMPS limit Raised from 2 lakhs to 5 lakhs MPC keeps repo rate steady
ಇದನ್ನೂ ಓದಿ: Opinion: ವಯಸ್ಸಾದ ಮಾತ್ರಕ್ಕೆ ಭಾರ ಎನಿಸಬೇಕೆ? ಹಿರಿಯ ನಾಗರಿಕರ ನೆಮ್ಮದಿಗೆ ಕಿರಿಯರು ಏನು ಮಾಡಬಹುದು?
ಇದನ್ನೂ ಓದಿ: ರಾಜ್ಯಗಳಿಗೆ 40 ಸಾವಿರ ಜಿಎಸ್ಟಿ ಪರಿಹಾರ ಬಿಡುಗಡೆ
Discussion about this post