ಶ್ರೀನಗರ: ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನಚಕಮುಕಿಯಲ್ಲಿ ಹೈಬ್ರಿಡ್ ಭಯೋತ್ಪಾದಕನ್ನು ಹೊಡೆದುರಳಿಸಿದ ಘಟನೆ ಶ್ರೀನಗರಿಂದ 50 ಕಿ.ಮೀ ದೂರದಲ್ಲಿರುವ ಬಾರಾಮುಲ್ಲಾ ಜಿಲ್ಲೆಯಲ್ಲಿ ಸಂಭವಿಸಿದೆ.
ಮೃತಪಟ್ಟ ಭಯೋತ್ಪಾದಕನನ್ನು ಜಾವೀದ್ ಅಹ್ಮದ್ ಯಾನಿ ಎಂದು ಗುರುತಿಸಲಾಗಿದ್ದು, ಈತ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಪ್ರದೇಶಕ್ಕೆ ಸೇರಿದವನಾಗಿದ್ದಾನೆ ಎನ್ನಲಾಗಿದೆ. ಈತನ ಗುರಿ ಅಂಗಡಿ ಮಾಲೀಕನನ್ನು ಕೊಲ್ಲುವುದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜಾವಿದ್, ಈ ತಿಂಗಳ ಆರಂಭದಲ್ಲಿ ಇಬ್ಬರು ಬಿಹಾರಿ ನಾಗರೀಕರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕ ಗುಲ್ಜಾರ್ ನ ಸಹಾಯಕನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಾವಿದ್ ನಿಂದ ಪಿಸ್ತೂಲ್, ಮ್ಯಾಗ್ಜೀನ್, ಗ್ರೇನ್ ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಚ್ತೀಚೆಗೆ ಶ್ರೀನಗರದಲ್ಲಿ ವಲಸಿಗರನ್ನು ಗುರಿಯಾಗಿಸಿಕೊಂಡು ದಾಳಿಯಾಯಿತು. ಯಾವುದೇ ಪೊಲೀಸ್ ಪ್ರಕರಣದಲ್ಲಿ ಗುರುತಿಸಿಕೊಳ್ಳದ ವ್ಯಕ್ತಿಗಳಾದ ಈ ಹೈಬ್ರೀಡ್ ಭಯೋತ್ಪಾದಕರು ಈ ಕೃತ್ಯ ಎಸಗಿದ್ದರು. ಆನಂತರ, ಹೈಬ್ರಿಡ್ ಭಯೋತ್ಪಾದಕರು ಮೂಲ ಭಯೋತ್ಪಾದಕರ ಸಹಚರರಾಗಿದ್ದು, ಇಂಥ ದಾಳಿಗಳನ್ನು ನಡೆಸುತ್ತಿದ್ದಾರೆ ಎನ್ನುವುದನ್ನು ಪೊಲೀಸರು ಗುರುತಿಸಿದ್ದರು.ಈ ಮೃತ ಜಾವೀದ್ ಕೂಡ ಹೈಬ್ರೀಡ್ ಭಯೋತ್ಪಾದಕನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಕ್ಟೋಬರ್ 17ರಂದು, ಇಬ್ಬರು ಬಿಹಾರಿ ವಲಸೆ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡಿನ ಮಳೆಗೆರೆದು ಹತ್ಯೆಮಾಡಿದ್ದರು. ಈ ತಿಂಗಳಲ್ಲಿ 11ಕ್ಕೂ ಹೆಚ್ಚು ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲಾಗಿದೆ.
Jammu Kashmir police shot dead Terroist
ಇದನ್ನೂ ಓದಿ: Screening of women: 30 ವರ್ಷಗಳಲ್ಲಿ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಮಹಿಳೆಯರ ತಪಾಸಣೆ
Discussion about this post