ಮುಂಬೈ: ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿ ಮಾದಕವಸ್ತು ಸೇವನೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕವಸ್ತು ನಿಯಂತ್ರಣ ದಳ (ಎನ್ಸಿಬಿ) ವಿರುದ್ಧ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ನಟ ಸುಶಾಂತ್ ಸಿಂಗ್ ರಜಫೂತ್ ಕಟುಂಬದವರನ್ನು ಕೋರ್ಟ್ನಲ್ಲಿ ಪ್ರತಿನಿಧಿಸುತ್ತಿರುವ ವಕೀಲ ವಿಕಾಸ್ ಸಿಂಗ್ ಟೀಕಾಪ್ರಹಾರ ಮಾಡಿದ್ದಾರೆ.
‘ಎನ್ಸಿಬಿ ಪ್ರಚಾರ ಪ್ರಿಯವಾಗಿದೆ. ಯಾವ ಪ್ರಕರಣ ಹೆಚ್ಚು ಪ್ರಮುಖವಾಗಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳಬೇಕು ಎಂಬುದನ್ನು ಆಯ್ದುಕೊಳ್ಳುತ್ತಿದೆ’ ಎಂದು ವಿಕಾಸ್ ಆಪಾದಿಸಿದ್ದಾರೆ.
‘ಪಾರ್ಟಿಗಳಲ್ಲಿ ಭಾಗಿಯಾಗುವ ಸೆಲೆಬ್ರಟಿಗಳ ಮಕ್ಕಳನ್ನು ಎನ್ಸಿಬಿ ಗುರಿಯಾಗಿರಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಡ್ರಗ್ಸ್ ಜಾಲದ ದೊಡ್ಡ ತಿಮಿಂಗಲಗಳ ತಂಟೆಗೆ ಹೋಗುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದ್ದಾರೆ. ದೆಹಲಿಯಲ್ಲಿ ಪ್ರಭಾವಿ ವ್ಯಕ್ತಿಗಳು ಭಾಗಹಿಸುವ ಡ್ರಗ್ಸ್ ಪಾರ್ಟಿಗಳ ಮೇಲೂ ಎನ್ಸಿಬಿ ದಾಳಿ ನಡೆಸಬೇಕು. ಬಾಲಿವುಡ್ ಅನ್ನು ಮಾತ್ರ ಗುರಿಯಾಗಿಟ್ಟುಕೊಳ್ಳಬಾರದು ಎಂದು ವಿಕಾಸ್ ಹೇಳಿದ್ದಾರೆ.
ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್ ಪಾತ್ರದ ಬಗ್ಗೆ ಎನ್ಸಿಬಿ ಕೂಡ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಆರೋಪಿಯಾಗಿದ್ದಾರೆ. ತನಿಖೆ ವೇಳೆ ರಿಯಾ ಮತ್ತು ಸುಶಾಂತ್ ಡ್ರಗ್ಸ್ ವ್ಯಸನಿಗಳಾಗಿದ್ದರು ಎಂಬ ಮಾಹಿತಿ ಕೇಳಿಬಂದಿರು ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಇದು ದೀಪಿಕಾ ಪಡುಕೋಣೆ ಸೇರಿ ಅನೇಕ ಖ್ಯಾತ ನಟ-ನಟಿಯರಿಗೂ ಸುತ್ತಿಕೊಂಡಿದೆ. ಈ ಪ್ರಕರಣದಲ್ಲಿ ವಿಕಾಸ್, ಸುಶಾಂತ್ರ ತಂದೆ ಕೆ.ಕೆ. ಸಿಂಗ್ ಪರವಾಗಿ ವಕಾಲತ್ತು ವಹಿಸಿದ್ದಾರೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವಿಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 8 ಜನರನ್ನು ಅಕ್ಟೋಬರ್ 2ರಂದು ಎನ್ಸಿಬಿ ಬಂಧಿಸಿತ್ತು. ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದ್ದು, ನಾಲ್ಕು ವಾರಗಳ ಬಳಿಕ ಆರ್ಯನ್ ಆರ್ಥರ್ ರೋಡ್ ಜೈಲಿನಿಂದ ಶನಿವಾರ ಬಿಡುಗಡೆಯಾಗಿದ್ದಾರೆ.
Lawyer of Sushant singh Rajput Slams NCB over Aryan Khan Case 16318
ಇದನ್ನೂ ಓದಿ: ಆರ್ಯನ್ ಖಾನ್ಗೆ ಜಾಮೀನು ಸಿಕ್ಕ ತಕ್ಷಣ ಶಾರೂಖ್ ಅತ್ತುಬಿಟ್ಟಿದ್ದರು
Discussion about this post