ನವದೆಹಲಿ: ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲ್ಯಾಘಿಸಿ ನಿರ್ಣಯವೊಂದನ್ನು ಅನುಮೋದಿಸಿದೆ. ಮುಂಬರುವ 5 ರಾಜ್ಯಗಳ ಚುನಾವಣೆಗಳನ್ನು ಎದುರಿಸುವ ಕಾರ್ಯತಂತ್ರಗಳ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಸುದೀರ್ಘವಾಗಿ ಚರ್ಚಿಲಾಗಿದೆಯಲ್ಲದೇ ಪಕ್ಷವನ್ನೂ ದೇಶಾದ್ಯಂತ ಬಲಪಡಿಸುವ ಹೊಸ ಗುರಿಗಳನ್ನು ಹಾಕಿಕೊಳ್ಳಲಾಗಿದೆ.
ಭಾನುವಾರ ನಡೆದ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು “ಪಕ್ಷದ ಕಾರ್ಯಕರ್ತರು ಪಕ್ಷ ಮತ್ತು ದೇಶದ ಜನತೆಯ ನಡುವೆ ಒಂದು ನಂಬಿಕೆಯ ಸೇತುವೆಯಾಗಿ ಕೆಲಸ ಮಾಡಬೇಕಲ್ಲದೆ ಪಕ್ಷ ನಂಬಿರುವ ಮಾರ್ಗದರ್ಶಕ ತತ್ವಗಳಾದ ಸೇವೆ, ಸಂಕಲ್ಪ, ಹಾಗೂ ತ್ಯಾಗ ಮನೋಭಾವಗಳನ್ನು ಹೊಂದಿ ಜನರೊಡನೆ ಬಾಂಧವ್ಯ ಬೆಳೆಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಸೇವೆ, ಸಂಕಲ್ಪ, ಹಾಗೂ ಸಮರ್ಪಣೆಗಳ ತಳಹದಿಯ ಮೇಳೆ ಕಟ್ಟಲಾಗಿರುವ ಪಕ್ಷವಾಗಿದ್ದು ಯಾವುದೇ ವ್ಯಕ್ತಿ ಅಥವಾ ಕುಟುಂಬದ ಸುತ್ತ ಸುತ್ತುವ ಪಕ್ಷವಲ್ಲ ಎಂದರು. ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ಜನರ ಸಂಪೂರ್ಣ ವಿಶ್ವಾಸ ಗೆಲ್ಲುವ ಆತ್ಮವಿಶ್ವಾಸವನ್ನು ಮೋದಿ ತಮ್ಮ 50 ನಿಮಿಷಗಳ ಭಾಷಣದಲ್ಲಿ ವ್ಯಕ್ತಪಡಿಸಿದರೆಂದು ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದರು. ಇತ್ತೀಚೆಗೆ ನಡೆದ 2 ಉಪಚುನಾವಣೆಗಳಲ್ಲಿ ಪಕ್ಷ ಸೋತರೂ ಸಾಧನೆ ಉತ್ತಮವಾಗಿತ್ತೆಂದು ಪ್ರಧಾನಿ ಮೋದಿಯವರು ಅಭಿಪ್ರಾಯಪಟ್ಟರೆಂದು ಮತ್ತೊಬ್ಬ ಹಿರಿಯ ನಾಯಕರು ತಿಳಿಸಿದರು.
ನಾವೆಲ್ಲರೂ ದೇಶದಲ್ಲೆಡೆ ಬಿಜಿಪೆಯ ಕಡೆ ಜನತೆಯ ಮನ ವಾಲುತ್ತಿರುವುದನ್ನು ಉಪೇಕ್ಷಿಸುತ್ತಿದ್ದೇವೆ. ಎಲ್ಲೆನಾಬಾದ್ ಕ್ಷೇತ್ರವು ಭಾರತ ರಾಷ್ಟ್ರೀಯ ಲೋಕದಳ ಪಕ್ಷವು ಬಲಿಷ್ಠವಾಗಿರುವ ಕ್ಷೇತ್ರವಾಗಿದ್ದು ಅಲ್ಲಿ ಕಳೆದ ಚುನಾವಣೆಯಲ್ಲಿ 45,000 ಮತಗಳನ್ನು ಪಡೆದಿದ್ದ ಪಕ್ಷವು ಈ ಬಾರಿ 59,000 ಮತಗಳನ್ನು ಗಳಿಸಿದೆ. ರೈತರ ತೀವ್ರ ವಿರೋಧದ ನಡುವೆಯೂಈ ಸಾಧನೆ ಮಾಡಿರುವುದ ಸಾಮಾನ್ಯವಲ್ಲವೆಂದು ತಿಳಿಸಿದ ಅವರು ಇದರರ್ಥವೇನೆಂದರೆ ದೇಶದ ಸಾಮಾನ್ಯ ಜನರು ನಮ್ಮ ರೈತ ಕಾಯಿದೆಗಳನ್ನು ವಿರೋಧಿಸುತ್ತಿಲ್ಲವೆಂಬುದು ಗೊತ್ತಾಗುತ್ತದೆಂದು ಅವರು ಅಭಿಪ್ರಾಯಪಟ್ಟರು.
Modi says the people are in favour of Farmers Bills as shown by their increased support to the pary in bypolls
ಇದನ್ನೂ ಓದಿ: ತೈಲ ಬೆಲೆ ಇಳಿಸಲು ಕೇಂದ್ರ ತೀರ್ಮಾನಿಸಿದ ಬಿಜೆಪಿ ಆಡಳಿತದ 10 ರಾಜ್ಯಗಳಿಂದ ಮಹತ್ವದ ಘೋಷಣೆ
ಇದನ್ನೂ ಓದಿ: Sindagi by-election: 30 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲುವು
Discussion about this post