ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಹತ್ವದ ವಿಚಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕಿಂತ ಮುಂಚೆ ವಿಷಯಕ್ಕೆ ಸಂಬಂಧಿಸಿದ ಪ್ರತಿಯೊಬ್ಬರ ಅನಿಸಿಕೆಯನ್ನು ಕೇಳುತ್ತಾರೆ. ಅವರಲ್ಲಿ ಪ್ರತಿಯೊಬ್ಬರ ಅಭಿಪ್ರಾಯವನ್ನು ಕೇಳುವ ತಾಳ್ಮೆ ಅಪಾರವಾಗಿದೆ. ಮೌಲಿಕವಾದ ಸಲಹೆಯನ್ನು ಅವರು ಗೌರವಿಸುತ್ತಾರೆ. ಹೀಗಾಗಿ ಅವರು ನಿರಂಕುಶವಾದಿಯಲ್ಲ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಹೇಳಿದ್ದಾರೆ.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಅವಧಿಯೂ ಸೇರಿದಂತೆ ಅವರು ಸಾಂವಿಧಾನಿಕ ಹುದ್ದೆಯಲ್ಲಿ 20 ವರ್ಷ ಪೂರೈಸಿರುವ (ಅಕ್ಟೋಬರ್ 7ಕ್ಕೆ) ನಿಮಿತ್ತ ಸಾಂಸದ್ ಟಿವಿ ನಡೆಸಿದ ಸಂದರ್ಶನದಲ್ಲಿ ಅಮಿತ್ ಷಾ ಈ ಮಾನ್ನಾಡಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಜರುಗುವ ಸಚಿವ ಸಂಪುಟ ಸಭೆ ಪ್ರಜಾಸತ್ತಾತ್ಮಕವಾಗಿ ಇರುತ್ತದೆ. ಈ ರೀತಿ ಸಂಪುಟ ಸಭೆ ಹಿಂದೆ ನಡೆದಿಲ್ಲ ಎಂದು ಮೋದಿಯವರನ್ನು ಟೀಕಿಸುವವರೂ ಹೇಳುತ್ತಾರೆ ಎಂದು ಅಮಿತ್ ಷಾ ಹೇಳಿದ್ದಾರೆ.
ದೇಶದ ನಾಯಕರ ಪೈಕಿ ಹೆಚ್ಚು ಪ್ರಜಾಸತಾತ್ಮಕವಾಗಿ ಚಿಂತಿಸುವವರು ಮೋದಿ. ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಾರೆಂಬುದು ವಿರೋಧಿ ಸಿದ್ಧಾಂತವನ್ನು ಬೆಂಬಲಿಸುವವರು ಮಾಡುವ ಆರೋಪ. ಅವರಲ್ಲಿ ಸಾರ್ವಧಿಕಾರಿಯ ಧೋರಣೆ ಇಲ್ಲ ಎಂದಿದ್ದಾರೆ. ಯಾವುದೇ ವಿಷಯದಲ್ಲಿ ಶಿಸ್ತನ್ನು ಮೆಚ್ಚುವ ಪ್ರಧಾನಿ, ಒಮ್ಮೊಮ್ಮೆ ರಿಸ್ಕ್ ತೆಗೆದುಕೊಳ್ಳುತ್ತಾರೆ. ಆದರೆ, ತಮ್ಮ ಅಭಿಪ್ರಾಯವನ್ನು ಯಾರ ಮೇಲೂ ಹೇರುವುದಿಲ್ಲ. ಅಧಿಕಾರಕ್ಕಾಗಷ್ಟೆ ಚುನಾಯಿತರಾಗಿ ಬಂದಿಲ್ಲ, ದೇಶ ಕಟ್ಟುವುದು ತಮ್ಮ ಧ್ಯೇಯವೆಂದು ಅವರು ಅನೇಕ ಸಾರಿ ಹೇಳಿದ್ದಾರೆ ಎಂದು ಷಾ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮುಖಬೆಲೆಯ ನೋಟು ಅಮಾನ್ಯ ಮಾಡಿದ ನಿರ್ಧಾರ, 2020ರ ಮಾರ್ಚ್ನಲ್ಲಿ ಕೋವಿಡ್ ಕಾರಣಕ್ಕೆ ದೇಶವ್ಯಾಪಿ ಲಾಕ್ಡೌನ್ ಘೋಷಣೆ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಿರ್ಧಾರ, ರೈತರ ಪ್ರತಿಭಟನೆ ವಿಷಯದಲ್ಲಿ ಪ್ರಧಾನಿ ಮೋದಿಯವರದ್ದು ಸರ್ವಾಧಿಕಾರದ ಧೋರಣೆ ಎಂದು ಪ್ರತಿಪಕ್ಷಗಳ ಅನೇಕ ನಾಯಕರು ಆರೋಪಿಸಿದ್ದಾರೆ.
Narendra Modi is not Autocrat or Dictator says BJP Leader Union Home Minister Amit Shah
ಇದನ್ನೂ ಓದಿ: ನರೇಂದ್ರ ಮೋದಿಯವರ ಆಡಳಿತ ಸಾಧನೆ, ಪತ್ರದ ಮೂಲಕ ಶುಭಾಶಯ ಅಭಿಯಾನ
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರು ದೇಶ ಕಂಡ ಅಪ್ರತಿಮ ನಾಯಕ
Discussion about this post