National Political News: ಭಾರತ- ಪಾಕಿಸ್ತಾನ ಕದನ ವಿರಾಮ ಘೋಷಣೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಪಂಜಾಬ್ನ ಅದಂಪುರ ವಾಯುನೆಲೆಗೆ ಭೇಟಿ ನೀಡಿದ್ದು, ಸೈನಿಕರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ.
ಪಾಕಿಸ್ತಾನ ಪಹಲ್ಗಮ್ ದಾಳಿ ಬಳಿಕ, ಭಾರತೀಯ ಸೇನೆ ಆಪೇರಷನ್ ಸಿಂಧೂರ್ ನಡೆಸುವ ಮೂಲಕ ಪಾಕಿಗಳಿಗೆ ತಕ್ಕ ಉತ್ತರ ನೀಡಿತ್ತು. ಇದಾದ ಬಳಿಕ ಇದೀಗ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಕದನ ವಿರಾಮ ಏರ್ಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು.
ಇದಾದ ಬಳಿಕ ಇಂದು ಬೆಳಿಗ್ಗೆ ಪಂಜಾಬ್ನ ಅದಂಪುರ ಸೈನಿಕರಿಗೆ ಪ್ರಧಾನಿ ಮೋದಿ ಸರ್ಪೈಸ್ ನೀಡಿದ್ದಾರೆ. ಅಲ್ಲದೇ ಅವರ ಜತೆ ಸಂವಾದ ನಡೆಸಿದ್ದಾರೆ. ಪ್ರಧಾನಿಗಳ ಸರ್ಪೈಸ್ಗೆ ಫುಲ್ ಖುಷ್ ಆಗಿರುವ ಸೈನಿಕರು, ಅವರ ಜತೆ ಸೆಲ್ಪಿ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ.
ಪ್ರಧಾನಿ ಮೋದಿ ಕೂಡ ಈ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ, ಬಹಳ ವಿಶೇಷ ಅನುಭವ ಎಂದು ಬರೆದಿದ್ದಾರೆ.
Discussion about this post