ಲೈಂಗಿಕ ಕಿರುಕುಳಕ್ಕೆ ಈಡಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಮನಕಲುಕುವ ಪತ್ರವೊಂದನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿಯ ಗರ್ಭ ಮತ್ತು ಸಮಾಧಿ- ಈಎರಡೇ ಜಾಗಗಳಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿರಲು ಸಾಧ್ಯ ಎಂದು ಯುವತಿ ಪತ್ರದಲ್ಲಿ ಅತ್ಯಂತ ದುಃಖದಲ್ಲಿ ಉಲ್ಲೇಖಿಸಿದ್ದಾಳೆ. ಈ ಪತ್ರದ ಸಾರ ಕಲ್ಲು ಮನಸ್ಸಿನವರನ್ನೂ ಕರಗಿಸುವಂತಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲೇ ಈ ಘಟನೆ ನಡೆದಿರುವುದು. ‘ದಯವಿಟ್ಟು ಲೈಂಗಿಕ ಕಿರುಕುಳವನ್ನು ನಿಲ್ಲಿಸಿ’ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೇ ಮಹಿಳೆಯರನ್ನು ಗೌರವಿಸುವುದು ಹೇಗೆಂಬುದನ್ನು ಮಕ್ಕಳಿಗೆ ಕಲಿಸುವಂತೆ ಪೋಷಕರಿಗೆ ಮನವಿಯನ್ನೂ ಮಾಡಿದ್ದಾಳೆ.
ಮನವಿ
ಯಾವುದೇ ತುರ್ತು ಪರಿಸ್ಥಿತಿಯಿದ್ದಲ್ಲಿ ಫೋನ್ ಕರೆ ಮಾಡುವ ಮೂಲಕ ಅತ್ಯಂತ ಬೇಗ ವೈದ್ಯರನ್ನು ಸಂಪರ್ಕಿಸಬೇಕು. ನೀವು ಈ ಸಹಾಯವಾಣಿಯನ್ನು ಬಳಸಬಹುದು. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104
ಎಲ್ಲ ಪೋಷಕರೂ ನಿಮ್ಮ ಮಕ್ಕಳಿಗೆ ಹೆಣ್ನುಮಕ್ಕಳನ್ನು ಗೌರವಿಸುವುದನ್ನು ಕಲಿಸಿ, ದಯವಿಟ್ಟು ನಿಮ್ಮ ಸಂಬಂಧಿಕರನ್ನು ಅಥವಾ ಶಿಕ್ಷಕರನ್ನು ನಂಬುವುದನ್ನು ನಿಲ್ಲಿಸಿ. ತಾಯಿಯ ಗರ್ಭ ಮತ್ತು ಸಮಾಧಿ ಮಾತ್ರ ಹೆಣ್ಣುಮಕ್ಕಳಿಗೆ ನಿಜವಾದ ಸುರಕ್ಷಿತ ಸ್ಥಳ ಎಂದು ಯುವತಿ ಪತ್ರದಲ್ಲಿ ಬರೆದಿರುವುದು ಮನಕಲುಕುತ್ತಿದೆ.
ವಿದ್ಯಾರ್ಥಿನಿಗೆ ಈಹಿಂದೆ ಆಕೆ ಕಲಿಯುತ್ತಿದ್ದ ಶಾಲೆಯಲ್ಲಿ ಕೈಂಗಿಕ ಕಿರುಕುಳ ಆಗಿತ್ತು ಎಂದು ಹೇಳಲಾಗಿದೆ. ಶಾಲೆಯನ್ನು ಬದಲಿಸಿದರೂ ಸಹ ಲೈಂಗಿಕ ಕಿರುಕುಳದಿಂದ ಆಕೆ ಪಾರಾಗಲು ಸಾಧ್ಯವಾಗಲಿಲ್ಲ. ಅಲ್ಲದೇ ಲೈಂಗಿಕ ಕಿರುಕುಳದಿಂದ ಉಂಟಾದ ಹಿಂಸೆಯನ್ನು ಒಬ್ಬಂಟಿಯಾಗಿ ಆಕೆ ಅನುಭವಿಸಿದ್ದಳು. ತನ್ನ ಸ್ನೇಹಿತೆಯರ ಜೊತೆ ಇತ್ತೀಚಿಗೆ ಬೆರೆಯುತ್ತಿರಲಿಲ್ಲ. ಈ ಘಟನೆಗಳು ಆಕೆಯ ಮನಸ್ಸನ್ನು ತೀವ್ರ ಪ್ರಮಾಣದಲ್ಲಿ ಖಿನ್ನತೆಗೆ ಒಳಪಡಿಸಿತ್ತು ಎಂದು ಹೇಳಲಾಗಿದೆ. ಅಲ್ಲದೆ ವಿದ್ಯಾರ್ಥಿನಿ ಲೈಂಗಿಕ ಕಿರುಕುಳದ ನೋವಿನಿಂದ ಕೆಟ್ಟ ಕನಸುಗಳನ್ನು ಕಾಣುತ್ತಿದ್ದಳು, ನಿದ್ರೆಯಲ್ಲೂ ಕನವರಿಸುತ್ತಿದ್ದಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಾಯಿಗಳ ಮೇಲೆ ಮಂಗಗಳ ಸೇಡು!
Discussion about this post