ನವದೆಹಲಿ: ಸ್ವಚ್ಛತಾ ಅಭಿಯಾನದ ಬಗ್ಗೆ ಕಣ್ಣೆತ್ತಿಯೂ ನೋಡದ ಮತ್ತು ನಾಗರಿಕ ಸೌಕರ್ಯಗಳನ್ನು ಗಮನಿಸದ ನಗರಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ಮೇಯರ್ಗಳ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಸ್ವಚ್ಛತೆಯನ್ನು ಸಾಧಿಸಿರುವಂತಹ ನಗರಗಳಿಗೆ ಪ್ರಶಸ್ತಿ ನೀಡುವ ಪರಿಪಾಠ ಇದೆ. ಇದೇ ರೀತಿ ಈ ಕಾರ್ಯದಲ್ಲಿ ಅನನ್ಯ ಸೇವೆ ಸಲ್ಲಿಸಿರುವವರನ್ನೂ ಗೌರವಿಸಬೇಕು ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಸೂಚಿಸಿದ್ದಾರೆ.
ನದಿ ದಡದಲ್ಲಿರುವ ನಗರಗಳಲ್ಲಿ ಸ್ಥಳಿಯರನ್ನು ತೊಡಗಿಸಿಕೊಂಡು ಒಂದು ಪರ್ಯಂತ ನದಿ ಉತ್ಸವವನ್ನು ಆಚರಿಸುವಂತೆ ಮತ್ತು ನಗರದ ವೈಭವವನ್ನು ಸಾರಲು ಅದರ ಸಂಸ್ಥಾಪನಾ ದಿನವನ್ನೂ ಆಚರಿಸುವಂತೆ ಅವರು ಮೇಯರ್ಗಳಿಗೆ ಸಲಹೆ ನೀಡಿದ್ದಾರೆ. ಹಲವಾರು ರಾಜ್ಯಗಳ ಒಟ್ಟು 120 ಮೇಯರ್ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ವಾರಣಾಸಿಯಲ್ಲಿ (ಕಾಶಿ)ಯ ಅಭಿವೃದ್ಧಿ ಕಾರ್ಯಗಳು ಇಡೀ ದೇಶದ ಅಭಿವೃದ್ಧಿಗೆ ಮಾರ್ಗಸೂಚಿಯಾಗಬಹುದು ಎಂದು ಸಹ ಅವರು ಅಭಿಪ್ರಾಯಪಟ್ಟಿದ್ದಾರೆ
“ನವ ನಗರ ಭಾರತ’ ಎಂಬ ಥೀಮ್ ಮೇಲೆ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ದೇಶದ ವಿವಿಧೆಡೆಗಳಿಂದ 120ಕ್ಕೂ ಹೆಚ್ಚು ಮೇಯರ್ಗಳು ಭಾಗಿಯಾಗಿದ್ದರು. ಡಿಸೆಂಬರ್ 13ರಂದು ಕಾಶಿ ವಿಶ್ವನಾಥಧಾಮ ಕಾರಿಡಾರ್ ಉದ್ಘಾಟನೆ ಮಾಡಿದ್ದ ಪ್ರಧಾನಿ ಮೋದಿ, ಬಿಜೆಪಿ ಆಡಳಿತವಿರುವ 12 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಜತೆ ಕಾಶಿಯಲ್ಲಿ ಸಭೆ ನಡೆಸಿದ್ದರು. ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟನೆಯ ಅಂಗವಾಗಿ ಸ್ಥಳಿಯ ಆಡಳಿತ ಒಂದು ತಿಂಗಳ ಪರ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ: ಈ ಸಿಂಪಲ್ ಟ್ರಿಕ್ ಬಳಸಿ ಯಾವುದೇ ಥರ್ಡ್ ಪಾರ್ಟಿ ಆಪ್ಗಳಿಲ್ಲದೆ ಜಾಹಿರಾತು ಬ್ಲಾಕ್ ಮಾಡಿ
(PM Narendra Modi says in Mayors conference that development in Varanasi can be a roadmap to India)
Discussion about this post