ಬೆಂಗಳೂರು: ಜನಪ್ರಿಯ ತಮಿಳು ನಟ ಸೂರ್ಯ ನಾಯಕನಾಗಿ ನಟಿಸಿರುವ “ಜೈ ಭೀಮ್” ಚಿತ್ರವು ಮತ್ತೊಂದು ವಿವಾದ ಸುಳಿಯಲ್ಲಿ ಸಿಲುಕಿದ್ದು ವಣ್ಣಿಯಾರ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ವಣ್ಣಿಯಾರ್ ಸಂಘವು ನವೆಂಬರ್ 15ರಂದು ಸೂರ್ಯ, ಜ್ಯೋತಿಕಾ, ಚಿತ್ರದ ನಿರ್ದೇಶಕ ಟಿಜೆ ಜ್ಞಾನವೇಲ್, ಹಾಗೂ ಅಮೆಝಾನ್ ಪ್ರೈಮ್ ವಿಡಿಯೋಗೆ ಕಾನೂನಾತ್ಮಕ ನೋಟೀಸ್ ನೀಡಿದ್ದು ಇವರಿಂದ ವಣ್ಣಿಯಾರ್ ಸಮುದಾಯದ ಘನತೆ-ಗೌರವಗಳಿಗೆ ಕುಂದು ಉಂಟಾಗಿದೆಯೆಂದು ಆರೋಪಿಸಲಾಗಿದೆ. ಇದಲ್ಲದೇ, ನಟ ಸೂರ್ಯರಿಗೆ ಬೆದರಿಕೆಯ ಕರೆಗಳು ಬಂದಿದ್ದು ತಮಿಳುನಾಡು ಸರಕಾರವು ಚೆನ್ನೈನ ಟಿ ನಗರದಲ್ಲಿರುವ ನಟನ ಮನೆಗೆ ಐವರು ಶಸ್ತ್ರಸಜ್ಜಿತ ಪೋಲೀಸರ ತಂಡದಿಂದ ರಕ್ಷಣೆ ನೀಡಿದೆ.
ವಣ್ಣಿಯಾರ್ ಸಂಘವು ನೀಡಿರುವ ನೋಟೀಸ್ನಲ್ಲಿ “ಜೈ ಭೀಮ್’ ಚಿತ್ರದ ಕೆಲವು ದೃಶ್ಯಗಳಿಂದ ಸಮುದಾಯದ ಗೌರವಕ್ಕೆ ಚ್ಯುತಿಯಾಗಿದೆಯೆಂದು ಹೇಳಲಾಗಿದೆ. ಸಾರ್ವಜನಿಕ ಕ್ಷಮಾಯಾಚನೆಯ ಜೊತೆಗೆ 5 ಕೋಟಿ ರೂಪಾಯಿಗಳ ಪರಿಹಾರಕ್ಕೂ ಸಮುದಾಯವು ಆಗ್ರಹಿಸಿದೆ. ವಣ್ಣಿಯಾರ್ ಸಮುದಾಯವು ನಟ ಸೂರ್ಯರಿಗೆ ಬಹಿರಂಗ ಬೆದರಿಕೆಗಳನ್ನೂ ಹಾಕಿದ್ದು ಪಟ್ಟಾಲಿ ಮಕ್ಕಳ ಕಚ್ಚಿ ಪಕ್ಷದ ನಾಗಪಟ್ಟಿನಮ್ ಜಿಲ್ಲಾ ಕಾರ್ಯದರ್ಶಿ ಸೀತಾಮಲ್ಲಿ ಪಳನಿ ಸಾಮಿ ನಟ ಸೂರ್ಯರ ಮೇಲೆ ದಾಳಿ ಮಾಡುವವರಿಗೆ 1 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿದ್ದಾರೆ.
ಸೂರ್ಯ ಹಾಗೂ ಜ್ಯೋತಿಕಾರ 2D ಪ್ರೊಡಕ್ಷನ್ಸ್ ಸಂಸ್ಥೆಯು ನಿರ್ಮಿಸಿರುವ ಹಾಗೂ ಟಿಜೆ ಜ್ಞಾನವೇಲ್ ನಿರ್ದೇಶಿಸಿರುವ ಜೈ ಭೀಮ್ ಚಿತ್ರವು ಇರುಳಾರ್ ಸಮುದಾಯದ ಸದಸ್ಯರನ್ನು ಬಂಧನದಲ್ಲಿಟ್ಟು ತೀವ್ರವಾಗಿ ಹಿಂಸಿಸಿದ ಘಟನೆಯ ಸುತ್ತಾ ನಡೆಯುವ ಕತೆಯನ್ನು ಹೊಂದಿದೆ. ಸದ್ಯ ಈ ಚಿತ್ರವು ಅಮೆಝಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶಿತವಾಗುತ್ತಿದೆ.
Tamil Superstar Suriya’s House gets police protection after receiving legal notice and threats from Vanniyar community
ಇದನ್ನೂ ಓದಿ: ಮದುವೆಯ ನಂತರ ಬದುಕನ್ನು ನೋಡುವ ದೃಷ್ಟಿಯೇ ಬದಲಾಗಿದೆ: ತಮಿಳು ನಟ ಸೂರ್ಯ
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ
Discussion about this post