ಜೋಧ್ಪುರ: ಬಾರ್ಮೇರ್-ಜೋಧ್ಪುರ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಟ್ಯಾಂಕರ್-ಬಸ್ ಡಿಕ್ಕಿ ದುರಂತದಲ್ಲಿ ಕನಿಷ್ಠ 11 ಜನ ಪ್ರಯಾಣಿಕರು ಸಜೀವ ದಹನವಾಗಿರುವ ದುರದೃಷ್ಟಕರ ಘಟನೆ ವರದಿಯಾಗಿದೆ.
ಪ್ರಯಾಣಿಕರೊಬ್ಬರ ಪ್ರಕಾರ ಬಲೋತ್ರಾ ನಿಲ್ದಾಣದಿಂದ ಬೆಳಿಗ್ಗೆ 9:55ಕ್ಕೆ ಹೊರಟಿದ್ದ ಈ ಖಾಸಗಿ ಬಸ್ 25 ಜನ ಪ್ರಯಾಣಿಕರನ್ನು ಹೊಂದಿತ್ತು. ಎದುರಿನಿಂದ ಬಂದ ಟ್ಯಾಂಕರ್ ಒಂದು ಬಸ್ಗೆ ಡಿಕ್ಕಿ ಹೊಡೆದಾಗ ಈ ಭೀಕರ ಅಪಘಾತ ಸಂಭವಿಸಿ ಬಸ್ಗೆ ಬೆಂಕಿ ಹತ್ತಿಕೊಂಡಿತು.
ಘಟನೆ ನಡೆದ ನಂತರ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಪೋಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಧಾವಿಸಿದರು. ಪಚಪದರಾ ಶಾಸಕ ಮದನ್ ಪ್ರಜಾಪತ್ ಹಾಗೂ ರಾಜ್ಯದ ಪರಿಸರ ಹಾಗೂ ಅರಣ್ಯಖಾತೆ ಸಚಿವ ಸುಖರಾಮ್ ಬಿಷ್ಣೋಯ್ ಘಟನಾಸ್ಥಳದಲ್ಲಿ ಉಪಸ್ಥಿತರಿದ್ದರು. ರಕ್ಷಣಾಕಾರ್ಯವು ಮುಂದುವರೆದಿದ್ದು ಇದರಿಂದಾಗಿ ದೊಡ್ಡ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಲ್ಲಿಯವರೆಗೂ 10 ಜನರನ್ನು ರಕ್ಷಿಸಲಾಗಿದ್ದು ಉಳಿದ ಪ್ರಯಾಣಿಕರ ಮಾಹಿತಿಯಿಲ್ಲವೆಂದು ಪೋಲೀಸರು ತಿಳಿಸಿದ್ದಾರೆ.
Tanker collides with a private passenger bus in Rajasthan that catches fire killing 11 people
ಇದನ್ನೂ ಓದಿ: ಲಗೇಜ್ ಸಮೇತ ಪರಾರಿಯಾದ ಬಸ್ ಚಾಲಕ…!
ಇದನ್ನೂ ಓದಿ: ಭಾರತ ಪ್ರಯಾಣಿಕರ ಮೇಲೆ ಕೋವಿಡ್ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಅಮೆರಿಕ
Discussion about this post