Hubli News: ಹುಬ್ಬಳ್ಳಿ: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಈ ಹತ್ಯೆ ಆಗಿದೆ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿರುವ ಜೋಶಿ, ಇದನ್ನು ತೀವ್ರವಾಗಿ ಖಂಡನೆ ಮಾಡುವೆ. ಪೊಲೀಸರು ಸಹ ಸರ್ಕಾರದ ಪ್ರತಿನಿಧಿಯಂತೆ ವರ್ತನೆ ಮಾಡುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡನೆ ಮಾಡುತ್ತೇವೆ ಎಂದಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದು, ನಿನ್ನೆ ಕಾಂಗ್ರೆಸ್ ಪಾರ್ಟಿ ಮುಖ್ಯ ಮಂತ್ರಿ, ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಿದ್ದಿರಿ. ನಮಗೆ ನಾಚಿಕೆ ಇಲ್ವಾ ಅಂತ ನಮ್ಮನ್ನಾ ಕೇಳತ್ತಾರೆ. ನೀವೆಂತಾ ನಾಚಿಗೇಡಿ ಇದ್ದಿರಿ..? ಸಿದ್ದರಾಮಯ್ಯ ಅವರಗಿಂತ ದೊಡ್ಡ ಪಿಕ್ ಪಾಕೇಟ್ ಮಾಡೋರು ಸಿಗೋದೆ ಇಲ್ಲ. ಪಿಕ್ ಪಾಕೇಟ್ ಮಾಡಿ ಬಸ್ ನಿಲ್ದಾಣದಲ್ಲಿ ಓಡಿಹೋಗುವವರ ತರ ಸಿದ್ದರಾಮಯ್ಯ ಇದ್ದಾರೆ.. ರಾಜ್ಯದಲ್ಲಿನ ಬೆಲೆ ಏರಿಕೆ ಹಣ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ.. ಯಾರ ನಾಚೀಕೆ, ಮಾನ, ಮರ್ಯಾದೆ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ.. ಇದು ದುರಹಂಕಾರದ ಪರಮಾವಧಿ. ನಾನು ಗ್ರಾಹಕ ಸಚಿವ ಇಲ್ಲಿಗೆ ಬಂದು ಅವು ಮಾತನಾಡುತ್ತೆವೆ ಅವಕ್ಕೆ ಸ್ವಲ್ಪ ಬುದ್ಧಿಯಾದ್ರು ಇರಬೇಕು. ಕಳ್ಳತನ, ಸುಳ್ಳತನ, ಹಗಲು ದರೋಡೆ ಮಾಡಿತ್ತಿರಿ. ಮತ್ತೆ ನಾವು ಸಾಚಾ ಅಂತ ಹೇಳ್ತೀರಿ ಎಂದು ಜೋಶಿ ಹೇಳಿದ್ದಾರೆ.
ನಾ ನಿನ್ನಾ ಮರೆಯಲಾರೇ ಎಂದು ವ್ಯಂಗ್ಯವಾಗಿ ಹಾಡಿದ ಜೋಶಿ
ಪೇಗಾಸಸ್ ವಿಚಾರದಲ್ಲಿ ಸದನ ಹಾಳು ಮಾಡಿದರು.. ಈಗ ಅದೇನು ಆಯಿತು.? ಬೆಲೆ ಏರಿಕೆ ಬಗ್ಗೆ ನಾನು ಸದನದಲ್ಲಿ ಚರ್ಚೆಗೆ ಸಿದ್ಧ ಅಂತ ಹೇಳಿದೆ ಆದರೆ ಯಾರು ಕಾಂಗ್ರೆಸ್ ಸಂಸದರು ಮಾತನಾಡಲಿಲ್ಲ.ಕರ್ನಾಟಕದಲ್ಲಿ ಹಾಲಿನಿಂದ ಆಲ್ಕೋಹಾಲ್ ವರಿಗೆ ಬೆಲೆ ಏರಿಕೆ ಇವರ ಮಿಸ್ ಮ್ಯಾನೇಜ್ಮೆಂಟ್ ಕಾರಣ ಎಂದು ಹೇಳಿದ ಜೋಶಿ, ಬಳಿಕ ರಾಜ್ಯ ಸರ್ಕಾರ ವಿರುದ್ಧ ನಾ ನೀನ ಮರೆಯಲಾರೆ ಅಂತ ಹಾಡಿನ ಮೂಲಕ ವ್ಯಂಗ್ಯವಾಡಿದ್ದಾರೆ.
ಇದು ಸಿಎಂ ಸಿದ್ದರಾಮಯ್ಯನವರ ಮರ್ಯಾದೆ ಗೇಡಿತನಕದ ಪರಮಾವಧಿ. ಡಿಕೆ ಶಿವಕುಮಾರ್ , ಸಿದ್ದರಾಮಯ್ಯ ಒಳಗೊಳಗೆ ಬಡಿದಾಡಿತ್ತಾರೆ ಹೊರಗೆ ಏನೇನೋ ಮಾತನಾಡುತ್ತಾರೆ. ಮೀಸಲಾತಿಯಿಂದ ಸೆಕೆಂಡ್ ಗ್ರೆಡ್ ವ್ಯಕ್ತಿಗಳು ಅಧಿಕಾರ ವ್ಯವಸ್ಥೆ ಬರ್ತಾರೆ ಅಂತ ನೆಹರು ಪತ್ರ ಬರೆದಿದ್ದಾರೆ. ಈ ಹಿಂದೆ ಇಂದಿರಾಗಾಂಧಿ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಿರಿವ ಸಿದ್ದರಾಮಯ್ಯ. ಈಗ ಅಲ್ಲಿ ಹೋಗಿ ಬಿದ್ದಿರಿ.. ಮುಸ್ಲಿಂ ಸಮುದಾಯದಲ್ಲಿ ಸಹ ಅಸ್ಪೃಶ್ಯರು ಇದ್ದಾರೆ ಅವರ ಗಣತಿ ಯಾಕೆ ಮಾಡಿಲ್ಲ. ಯಾಕಿಷ್ಟು ತಲೆ ಕಟ್ಟಿರುವು ತರ ಸಿದ್ದರಾಮಯ್ಯ ವರ್ತನೆ ಮಾಡತ್ತಾರೆ. ಬಂದೋಬಸ್ತಗೆ ಹೋಗಿದ್ದ ಎಎಸ್ಪಿ ಮೇಲೆ ಹೊಡೆಯಲು ಹೋಗತ್ತಾರೆ. ದಪ್ಪ ಚರ್ಮದವರಿಗೆ ಏನು ಹೇಳಬೇಕು. ಪಾಕಿಸ್ತಾನಕ್ಕೆ ಎಷ್ಟು ಜನ ಕಳುಹಿಸಲಾಗಿದೆ ಉತ್ತರ ನೀಡಿ ಎಂದು ಜೋಶಿ ಕೇಳಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ಪಾಕಿಸ್ತಾನದಲ್ಲಿ ಸಂಭ್ರಮಿಸಿದ್ದಾರೆ.. ಸ್ವಲ್ಪನಾದರು ಮರ್ಯಾದೆ ಬೇಕಲ್ವಾ ದೇಶ ಭದ್ರತೆ ವಿಚಾರದಲ್ಲಿ. ಇವರು ಪಾಕಿಸ್ತಾನದ ಹೀರೋ ಆಗಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾತು ಸಹ ಕೇಳಲ್ವಾ. ಪಾಕಿಸ್ತಾನದ ಜಿಂದಾಬಾದ್ ಎನ್ನಲು ನೂರಾರು ಕಾರಣ ಅಂತೆ?. ಇದು ದೇಶ ದ್ರೋಹ ಅಲ್ವಾ ನೀವು ಯಾರನ್ನು ಬೆಂಬಲಿಸಿತ್ತಿರಾ?. ನಿಮ್ಮ ಕಾರ್ಯಕ್ರಮದಲ್ಲಿ ಬಂದು ಧಿಕ್ಕಾರ ಕೂಗಿದವರು, ಮಂಗಳೂರು ಕುಕ್ಕರ್ ಬಾಂಬ್ ವಿಚಾರದಲ್ಲಿ ನಿಮ್ಮ ಗುಪ್ತಚರ ಇಲಾಖೆ ಏನು ಮಾಡಿತು. ಭಯೋತ್ಪಾದಕರು, ಅವರಿಗೆ ಬೆಂಬಲ ನೀಡುವವರ ಮನೆ ಹೊಕ್ಕು ಹೊಡೆಯುತ್ತೆವೆ. ಪಹಲ್ಗಾಮ್ ಬಗ್ಗೆ ಬಹಳಷ್ಟು ದುಃಖ. ಪ್ರಧಾನಿ, ಗೃಹ ಸಚಿವರು, ಈ ವಿಚಾರದಲ್ಲಿ ಮನಸ್ಸಿಗೆ ಸಾಕಷ್ಟು ನೋವು ಮಾಡಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಏನು ಶಿಕ್ಷೆ ನೀಡಬೇಕೋ ಅದನ್ನು ಮಾಡೇ ಮಾಡ್ತೀವಿ. ಹಿಂದೂ ಭಯೋತ್ಪಾದಕತೆ ಅರ್ಥವೇನು?. ಇದು ಬಹಳಷ್ಟು ಅತೀಯಾಗಿದೆ..ನೀವು ದೇಶಕ್ಕೆ ಅನ್ಯಾಯ ಮಾಡಬೇಡಿ ಎಂದು ಜೋಶಿ ಹೇಳಿದ್ದಾರೆ.
Discussion about this post