ಢಾಕಾ: ಪಶ್ಚಿಮ ಬಂಗಾಳದಂತೆಯೇ ಬಾಂಗ್ಲಾದೇಶದಲ್ಲೂ ನವರಾತ್ರಿ ಸಂಭ್ರಮ ಜೋರು. ಇಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೂ ದುರ್ಗಾ ಪೂಜೆಯನ್ನು ವೈಭವದಿಂದ ಮಾಡುತ್ತಾರೆ. ಇದಕ್ಕೆ ಮುಸ್ಲಿಮರು ಸಹಕರಿಸುತ್ತಾರೆ. ಆದರೆ ಕೋಮು ಸೌಹಾರ್ದವನ್ನು ಕಡಿಸುವಂತಹ ಕೆಲಸ ಈಗ ನಡಿದಿದೆ. ಹಿಂದು ದೇಗುಲ ಮತ್ತು ದುರ್ಗಾ ಪೆಂಡಾಲ್ ಮೇಲೆ ದಾಳಿ ನಡೆದಿದೆ. ಇದಕ್ಕೆದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಲ್ಪಸಂಖ್ಯಾತರಿಗೆ ಸೂಕ್ತ ಭದ್ರತೆ ಇಲ್ಲ ಎಂದು ಟೀಕಿಸಿದ್ದಾರೆ. ಈ ಮಧ್ಯೆ, ಪ್ರಧಾನಿ ಶೇಖ್ ಹಸೀನಾ ದಾಳಿಕೋರರ ವಿರುದ್ಧ ಗುಡುಗಿದ್ದು, ದುರುಳರನ್ನು ಬೇಟೆಯಾಡದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಯಾವ ಧರ್ಮದ ಮೇಲೆ ದಾಳಿ ನಡೆದಿದೆ ಎಂಬುದು ಮುಖ್ಯವಲ್ಲ. ದಾಳಿಕೋರರನ್ನು ಹಿಡಿದು ಶಿಕ್ಷಿಸುವುದೇ ಸರ್ಕಾರ ಕರ್ತವ್ಯ. ಹೀಗಾಗಿ ಕಾಮಿಲ್ಲಾ ಘಟನೆ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು. ದುರುಳರನ್ನು ಸುಮ್ಮನೆ ಬಿಡುವುದಿಲ್ಲ. ಈಗ ತಂತ್ರಜ್ಞಾನ ವಿಪರೀತಿ ಬೆಳೆದಿದೆ ಅದರ ಮೂಲಕ ದಾಳಿಕೋರರನ್ನು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಹಸೀನಾ ಹೇಳಿದ್ದಾರೆ.
ದುರ್ಗಾ ಪೂಜೆಯ ಸಂಭ್ರಮವನ್ನು ಹಾಳುಗೆಡವಿದ ದಾಳಿಕೋರರ ವಿರುದ್ಧ ಬಾಂಗ್ಲಾ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ. ಅಲ್ಪಸಂಖ್ಯಾತರ ಆಚರಣೆಗಳಿಗೆ ಅಭದ್ರತೆ ಉಂಟಾಗಿದೆ. ಸರ್ಕಾರ ಕ್ರಮ ವಹಿಸಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ದಾಳಿ ನಡೆದಿದ್ದು ಎಲ್ಲಿ- ಹೇಗೆ?
ಹಾಜಿಗಂಜ್ನ ಕಾಮಿಲ್ಲಾದ ದುರ್ಗಾ ಪೂಜೆಯ ಪೆಂಡಾಲ್ಗೆ ಗುರುವಾರ ನುಗ್ಗಿದ ದಾಳಿಕೋರರು, ದೊಂಬಿ ನಡೆಸಿ ಮೂರ್ತಿಯನ್ನು ಹಾಳುಗೆಡವಿದ್ದಾರೆ. ದೇವಸ್ಥಾನದ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಹಿಂಸಾಚಾರದ ವೇಳೆ ಗುಂಡು ಹಾರಿಸಿದ್ದರಿಂದ ಇಬ್ಬರು ಮತ್ತು ಗಂಭೀರವಾಗಿ ಗಾಯಗೊಂಡ ಕಾರಣ ಇನ್ನಿಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದುರ್ಗಾ ಪೆಂಡಾಲ್ ಸೇರಿದಂತೆ 22 ಜಿಲ್ಲೆಗಳಲ್ಲಿನ ಪ್ರಮುಖ ದೇವಾಲಯಗಳಿಗೆ ಸರ್ಕಾರ ಭದ್ರತೆಯನ್ನು ಕಲ್ಪಿಸಿದೆ. ಅರೆಸೇನಾ ಪಡೆಯನ್ನು ನಿಯೋಜಿಸಿದೆ.
Those Who Attacked Hindu Temples Will Be Hunted Down
ಇದನ್ನು ಓದಿ: ನಾರ್ವೆಯ ಕಾಂಗ್ಸ್ಬರ್ಗ್ನಲ್ಲಿ ಬಿಲ್ಲು-ಬಾಣಗಳಿಂದ ದಾಳಿ ನಡೆಸಿ 5 ಜನರ ಹತ್ಯೆ, ಶಂಕಿತನ ಬಂಧನ
ಇದನ್ನು ಓದಿ: ಹಿಂದೂ ದೇವಾಲಯ ಹಾನಿಗೆ ಯತ್ನ: ಶೀಘ್ರ ಕ್ರಮಕ್ಕೆ ತಾಕೀತು
Discussion about this post