ಬೆಳಕಿನ ಹಬ್ಬದಲ್ಲಿ ಸಾಲು ಸಾಲು ಹಣತೆಯಂತೆಯೇ ಸಿಹಿ ತಿಂಡಿಗಳ ಸಾಲೂ ಇರುತ್ತದೆ. ವೈವಿಧ್ಯಮಯ ಈ ತಿನಿಸುಗಳು ಬಾಯಲ್ಲಿ ನೀರೂರಿಸುವುದು ದಿಟ. ಆದರೆ, ಮಧುಮೇಹಿಗಳು ಚಪಲ ಮಾಡದೆ ಇದರಿಂದ ದೂರವಿರಬೇಕು. ಅದಕ್ಕೆ ಇಲ್ಲಿದೆ ಒಂದಿಷ್ಟು ಟಿಪ್ಸ್.
ಭಾರತೀಯ ಮಧುಮೇಹಿಗಳಲ್ಲಿ ಟೈಪ್-2 ಸಕ್ಕರೆ ಕಾಯಿಲೆ ಪೀಡಿತರು ಹೆಚ್ಚು. ಇದು ಹೆಚ್ಚಾಗಿ ಜೀವನ ಶೈಲಿಯ ಅಶಿಸ್ತಿನಿಂದ ಬಂದಿರುವಂತಹದ್ದು, ಇಲ್ಲವೆ ಆನುವಂಶೀಯ ಬಳುವಳಿ. ಶಿಸ್ತಿನ ಜೀವನ, ಆಹಾರ ಪಥ್ಯ, ಒಂದಿಷ್ಟು ವ್ಯಾಯಮ ಮಾಡಿದರೆ ಟೈಪ್-2 ಸಕ್ಕರೆ ಕಾಯಿಲೆ ದೊಡ್ಡ ಸಮಸ್ಯೆ ಏನಲ್ಲ. ಆದರೆ, ಮನುಷ್ಯ ಮೂಲತಃ ಚಪಲ ಚಿತ್ತ. ಕಟ್ಟುನಿಟ್ಟಾಗಿ ಪಥ್ಯ ಮಾಡುವವರನ್ನು ಹಬ್ಬದ ಸಾಲಿನ ಸಿಹಿ ತಿನಿಸು ವಿಚಲಿತಗೊಳಿಸುತ್ತದೆ. ಒಂದು ಸಾರಿ ಶಿಸ್ತಿನಿಂದ ಹಿಂದೆ ಸರಿಸಿದರೆ ಮತ್ತೆ ಅದನ್ನು ಸರಿದಾರಿಗೆ ತರಲು ಬಹುದಿನಗಳು ಬೇಕು.
ಕಳೆದ ವರ್ಷದ ದೀಪಾವಳಿ ಸಾಲಿನಲ್ಲಿ ಮಧುಮೇಹಿಗಳಲ್ಲಿನ ಸಕ್ಕರೆ ಅಂಶದ ಸ್ಥಿರತೆ ಬಗ್ಗೆ ಬೀಟ್ಒ ಸಂಸ್ಥೆ ಅಧ್ಯಯನ ನಡೆಸಿದ್ದು, ದೀಪಾವಳಿಯ ಹಬ್ಬದ ವಾರದಲ್ಲಿ ಶೇ. 20ರಷ್ಟು ಸಕ್ಕರೆ ಅಂಶ ಏರಿಕೆ ಕಂಡಿರುವುದನ್ನು ಗಮನಿಸಿದೆ. 2019ರಲ್ಲಿ ಇದು ಶೇ. 24 ಇತ್ತು. ಹೀಗಾಗಿ ಈ ಸಾರಿ ದೀಪಾವಳಿ ಸಾಲಿನಲ್ಲಿ ಮಧುಮೇಹಿಗಳು ಜಾಗೃತವಾಗಿರುವಂತೆ ಬೀಟ್ಒ ಕೆಲವು ಸಲಹೆ ನೀಡಿದೆ.
ಮಧುಮೇಹಿಗಳನ್ನು ನಗರವಾರು ವರ್ಗೀಕರಣ ಮಾಡಿರುವ ಅಧ್ಯಯನಕಾರರು ದೆಹಲಿ, ಬೆಂಗಳೂರು, ಮುಂಬೈಗಳನ್ನು ಟೈರ್ 1 ಸಿಟಿ ಎಂದು ಗುರುತಿಸಿವೆ. ಈ ನಗರಗಳಲ್ಲಿ ಕ್ರಮವಾಗಿ ಶೇ. 11.2, ಶೇ.. 7.5, ಶೇ. 4.7ರಷ್ಟು ಸಕ್ಕರೆ ಪ್ರಮಾಣ ಏರಿಕೆ ಕಂಡಿದೆ.
ಪಥ್ಯ ಮತ್ತು ಜೀವನ ಶೈಲಿ ಮಧುಮೇಹಿಗಳ ಆರೋಗ್ಯ ಸ್ಥಿರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸ್ವಾದಿಷ್ಟವಾದ ಸಿಹಿ ತಿನಿಸುಗಳು ಹಬ್ಬದ ಸಾಲಿನಲ್ಲಿ ಕೈಬೀಸಿ ಕರೆಯುತ್ತಿರುತ್ತವೆ. ಆದರೆ, ಸ್ವನಿಯಂತ್ರಣದಿಂದ ಮಧುಮೇಹಿಗಳು ವಿಚಲಿತವಾಗಬಾರದು. ಆರೋಗ್ಯಕ್ಕಿಂತ ಮಹತ್ವದ್ದು ಬೇರೇನೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಬೀಟ್ ಒ ಸಂಸ್ಥೆಯ ಮಧುಮೇಹ ತಜ್ಞ ಡಾ. ಮುದಿತ್ ಸಭರವಾಲ್ ಹೇಳಿದ್ದಾರೆ.
ಮಧುಮೇಹಿಗಳು ಬಿಜಿ ಮಟ್ಟವನ್ನು ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಇದರಿಂದ ಅನ್ಯ ಕಾಯಿಲೆಗಳು ಬಿಗಡಾಯಿಸಿ ಆರೋಗ್ಯ ಸಂಕೀರ್ಣವಾಗುತ್ತದೆ. ವಿಶೇಷವಾಗಿ ಇನ್ಸುಲಿನ್ ತೆಗೆದುಕೊಳ್ಳುತ್ತಿರುವವರಂತೂ ಸಿಹಿ ತಿನಿಸುಗಳಿಂದ ದೂರವೇ ಇರಬೇಕು. ಸಕ್ಕರೆ ಅಂಶ ಹೆಚ್ಚಿದರೆ ದೇಹದಲ್ಲಿ ಪ್ರತಿರೋಧ ಶಕ್ತಿ ಕಡಿಮೆ ಆಗುತ್ತದೆ. ಕೋವಿಡ್ ಸೋಂಕಿರುವ ಈ ಸನ್ನಿವೇಶದಲ್ಲಿ ಈ ರೀತಿ ರೋಗನಿರೋಧಕ ಶಕ್ತಿಯನ್ನು ಹಾನಿ ಮಾಡುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಎಂದು ಸಭರವಾಲ್ ಸಲಹೆ ನೀಡಿದ್ದಾರೆ.
tips to control diabetes during festival season
ಇದನ್ನೂ ಓದಿ: ಆರೋಗ್ಯಕರ ಜೀರ್ಣಕ್ರಿಯೆ ನಿಮ್ಮದಾಗಬೇಕೇ? ಹಾಗಾದೆರೆ ಇಲ್ಲಿವೆ ಆಯುರ್ವೇದದ 9 ಸುಲಭೋಪಾಯಗಳು
Discussion about this post