ಮಾನ ಜನಾಂಗವನ್ನೇ ಕಂಗೆಡಿಸಿದ್ದ ಏಡ್ಸ್ ಕುರಿತು ಜಾಗೃತಿ ಮೂಡಿಸಲು 1988ರಿಂದ ಡಿಸೆಂಬರ್ ೧ ರಂದು ವಿಶ್ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. ಅಸಮಾನತೆಯೊಂದಿಗೆ ಏಡ್ಸ್ ಅನ್ನು ಕೊನೆಗೊಳಿಸಿ ಎಂಬುದು ಈವರ್ಷದ ವಿಶ್ವ ಏಡ್ಸ್ ದಿನದ ಉದ್ದೇಶವಾಗಿದೆ. ಕೆಂಪು ರಿಬ್ಬನ್ ಕಟ್ಟಿಕೊಂಡು ಹಲವು ಸಂಘಸಂಸ್ಥೆಗಳು, ಕಾರ್ಯಕರ್ತರು ಜನ ಜಾಗೃತಿ ಮೂಡಿಸುವ ಕಾರ್ಯ ನೆರವೇರಿಸುತ್ತಾರೆ. ಆರೋಗ್ಯ ಸೇವೆಗಳಲ್ಲಿ ಎಲ್ಲರಿಗೂ ಸಮಾನವಾದ ಪ್ರವೇಶ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಮಟ್ಟ ಬಲಪಡಿಸುವುದನ್ನು ತಿಳಿಸುವ ವಿಶ್ವ ಏಡ್ಸ್ ದಿನದ ಮುಖ್ಯ ಉದ್ದೇಶವಾಗಿದೆ. ಎಚ್ಐವಿ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಅಗತ್ಯ ಒತ್ತು ನೀಡುವುದು, ಎಚ್ಐವಿ ಅಥವಾ ಏಡ್ಸ್ಗೆ ಒಳಗಾಗುವ ಜನ ಸಮುದಾಯವನ್ನು ತಲುಪುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತದೆ.
ವಿಶ್ವ ಏಡ್ಸ್ ದಿನದಂದು ರಾಜ್ಯದ ಹಲವು ಗಣ್ಯರು ಏಡ್ಸ್ ನಿವಾರಣೆಗೆ ಶ್ರಮಿಸುವಂತೆ ಕರೆ ನೀಡಿದ್ದಾರೆ. ಈ #WorldAIDSday ಯಂದು ನಾವು ಒಗ್ಗೂಡೋಣ, ಅಸಮಾನತೆಗಳನ್ನು ಕೊನೆಗಾಣಿಸಲು, ಏಡ್ಸ್ ಅನ್ನು ಕೊನೆಗಾಣಿಸಲು ಮತ್ತೊಮ್ಮೆ ಬದ್ಧರಾಗೋಣ. ಈ ಗುರಿಗಳನ್ನು ಸಾಧಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಮಾನವ ಜನಾಂಗವನ್ನು ಕಾಡುತ್ತಿರುವ ಎಚ್ಐವಿ/ಏಡ್ಸ್ ಬಗ್ಗೆ ಸಮಾಜದಲ್ಲಿ ಹೆಚ್ಚು ಜಾಗೃತಿ ಅಗತ್ಯ. ಈ #WorldAIDSDay ಸಂದರ್ಭದಲ್ಲಿ ಹೊಸ ಪ್ರಕರಣಗಳನ್ನು ಕಡಿಮೆ ಮಾಡಲು ಅರಿವು ಮೂಡಿಸುವ ಪಣ ತೊಡೋಣ. ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳ ಬಗ್ಗೆ ಅರಿಯೋಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮೂಲಕ ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.
ವಿಶ್ವ ಏಡ್ಸ್ ದಿನ 2021. ಎಚ್.ಐ.ವಿ ಸೋಂಕಿತ ಜನರಿಗೆ ಭರವಸೆ ಮತ್ತು ಬೆಂಬಲ ತೋರಿಸಲು ಹಾಗೂ ಏಡ್ಸ್ ಬಗ್ಗೆ ಅರಿವು ಮೂಡಿಸಲು ಈ ದಿನ ಆಚರಿಸಲಾಗುತ್ತದೆ. ಘೋಷವಾಕ್ಯ “ಅಸಮಾನತೆಗಳನ್ನು ಕೊನೆಗೊಳಿಸಿ, ಏಡ್ಸ್ನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ ಕೂ ಮಾಡಿದೆ.
ಇದನ್ನೂ ಓದಿ: ಐದರಿಂದ ಎಂಟನೆಯ ತರಗತಿಯ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಔಷಧವಿಜ್ಞಾನ ಪ್ರಬಂಧ ಸ್ಪರ್ಧೆ
Discussion about this post