ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲೆಯ ರಂಗಭೂಮಿ ಕಲಾವಿದರು ಸೇರಿ ನಟಿಸಿದ
ಜಿ. ಸತೀಶ್ಶೌರ್ಯ ನಿರ್ದೇಶನದ ಯುಕ್ತಿ ನಾಟಕ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು.
ಕನ್ನಡ ಸಂಸ್ಕೃತಿ ಇಲಾಖೆ, ಕಲಾಸೇವಾ ಸಂಘ ಹಾಗೂ ದಿನ್ಮಾಹ ಕಲಾಸಂಘದ ಸಹಯೋಗದಲ್ಲಿ ನಾಟಕ ಪ್ರದರ್ಶನ ನಡೆಯಿತು. ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ ನಡೆದ ಸ್ವತ್ರಂತ್ರ ಹೋರಾಟ ಒಂದರ ನೈಜ ಘಟನೆ ಆಧರಿಸಿ ನಿರ್ದೇಶಕ ಜಿ. ಸತೀಶ್ಶೌರ್ಯ ಕಥೆ ಸಿದ್ದಪಡಿಸಿದ್ದರು.
ಅದರೊಟ್ಟಿಗೆ ಚಿಕ್ಕಮಗಳೂರು ಜಿಲ್ಲೆಯ ಅರಸ ಮಂಗರಸ ಎಂಬ ಅರಸನ ಕುರಿತಾಗಿ ನಾಟಕದಲ್ಲಿ ಅಭಿನಯದ ಮೂಲಕ ವಿವರ ನೀಡಲಾಯಿತು. ಕೇವಲ ಪುಸ್ತಕಗಳಲ್ಲಿ ಮಾತ್ರ ಇದ್ದ ಚಿಕ್ಕಮಗಳೂರಿನ ಅರಸ ಮಂಗರಸನ ಕುರಿತ ಹಲವು ವಿಷಯಗಳು ಮೊದಲ ಬಾರಿಗೆ ನಾಟಕ ರೂಪದಲ್ಲಿ ಪ್ರದರ್ಶನ ಮಾಡುವ ಮೂಲಕ ಪ್ರೇಕ್ಷಕರಿಗೆ ತಿಳಿಯುವಂತಾಯಿತು.
ನಾಟಕದಲ್ಲಿ ಪ್ರಾಚೀನ ಭಾರತದ ವೈದ್ಯಶಾಸ್ತ್ರ, ನಾಟಿ ಔಷದ ಎಲ್ಲಾ ವಿವರಗಳ ಬಗ್ಗೆ ಮಾಹಿತಿ ತಿಳಿಯಿತು ಸ್ವಾತಂತ್ರ ಹೋರಾಟ, ಭಾರತೀಯರ ಮೇಲಿನ ಬ್ರಿಟಿಷ್ ಅಧಿಕಾರಿಗಳ ದಬ್ಬಾಳಿಕೆ, ಹೋರಾಟದ ಕಿಚ್ಚು ಈ ಎಲ್ಲಾ ವಿಚಾರಗಳನ್ನು ಗಮದಲಿಟ್ಟುಕೊಂಡು ನಿರ್ದೇಶಕರು ಅದ್ಬುತವಾಗಿ ನಾಟಕವನ್ನು ನಿರ್ದೇಶಿಸಿದ್ದರು.
ಅಧ್ಯಕ್ಷತೆಯನ್ನು ಕಲಾ ಸೇವ ಸಂಘದ ಮೋಹನಗೌಡರು ವಹಿಸಿದ್ದರು. ಅತಿಥಿಗಳಾಗಿ ಡಾ. ಸಿ ರಮೇಶ್, ಕಲ್ಕಟೆ ನಾಗರಾಜರಾವ್, ರಂಗಕರ್ಮಿ ರಮೇಶ್ಬಂಗಾರ್, ರವಿಕುಮಾರ್, ಹುಣಸೇಮಕ್ಕಿ ಮಹೇಶ್, ಪ್ರತಿಭಾ, ಶ್ವೇತರಾಣಿ ಇದ್ದರು.
Yukti Drama
Discussion about this post