ಚಿಕ್ಕಮಗಳೂರು: ಜಿಲ್ಲೆಯ ಕೊಟ್ಟಿಗೆಹಾರ ಬಳಿಯ ಮಾಗುಂಡಿ ಸಮೀಪದ ಭದ್ರಾನದಿ ಸೇತುವೆಯಿಂದ ಯುವಕನೊಬ್ಬ ನದಿಗೆ ಹಾರಿದ ಘಟನೆ ಬಾಳೆಹೊನ್ನೂರಿನ ಸಮೀಪ ನಡೆದಿದೆ.
ಗಬ್ಗಲ್ ಸಮೀಪದ ಬೀರ್ಗೂರು ಗ್ರಾಮದ ಸದಾನಂದ ನಾಯಕ್ ಎಂಬುವವರು ಶುಕ್ರವಾರ ಸೇತುವೆಯ ಮೇಲೆ ತಮ್ಮ ತ್ರಿಚಕ್ರ ವಾಹನ ವನ್ನು ನಿಲ್ಲಿಸಿ ನದಿಗೆ ಹಾರಿದ್ದನ್ನು ಸ್ಥಳೀಯರು ಗಮನಿಸಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮಾಗುಂಡಿ ಸೇತುವೆಯ ಅರ್ಧಭಾಗ ಬಾಳೆಹೊನ್ನೂರು ಠಾಣೆಗೆ ಸೇರಿದ್ದು, ಇನ್ನರ್ಧ ಭಾಗ ಬಾಳೂರೂ ಠಾಣೆಗೆ ಸೇರಿರುವುದರಿಂದ ಕಾರ್ಯಾಚರಣೆಯನ್ನು ಯಾವ ಠಾಣೆಯ ಅಧಿಕಾರಿಗಳೂ ಸಹ ನಡೆಸಿಲ್ಲ. ಶನಿವಾರ ಮಧ್ಯಾಹ್ನವಾದರೂ ನದಿಯಲ್ಲಿ ಕಾರ್ಯಚರಣೆ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

























Discussion about this post