ಡಿಸೆಂಬರ್ ೧೦ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆದ ಚುನಾವಣೆಯಲ್ಲಿ ಜಿಲ್ಲೆ ಯಲ್ಲಿ ಶೇ.೯೯.೭೧ ರಷ್ಟು ಮತದಾನವಾಗಿದ್ದು, ಶಾಂತಿ ಯುತವಾಗಿ ಚುನಾವಣೆ ನಡೆದಿದೆ. ಡಿಸೆಂಬರ್ ೧೫ರಂದು ಹೊರಬೀಳುವ ಫಲಿತಾಂಶ ಏನಾಗಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಲೆಕ್ಕದಲ್ಲಿ ಸ್ಪರ್ಧಿಸಿರುವ ಸಂಖ್ಯೆ ೫, ಆದರೂ ಸ್ಪರ್ಧೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದ್ದು, ಉಳಿದ ಮೂರು ಅಭ್ಯರ್ಥಿಗಳು ಒಂದು ಅಂಕಿಗೆ ತೃಪ್ತಿಪಟ್ಟುಕೊಳ್ಳ ಬೇಕಾಗಿದೆ. ಭಾರತೀಯ ಜನತಾ ಪಕ್ಷದಿಂದ ಹಾಲಿ ವಿಧಾನ ಪರಿಷತ್ ಸದಸ್ಯ ಹಾಗೂ ಪರಿಪತ್ ಉಪಸಭಾಪತಿ ಪ್ರಾಣೇಶ್ ಕಣದಲ್ಲಿದ್ದಾರೆ, ಕಾಂಗ್ರೆಸ್ನಿಂದ ಕಳೆದ ಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡಿದ್ದ, ವಿಧಾನ ಪರಿಷತ್ ಮಾಜಿ ಸದಸ್ಯ ಗಾಯತ್ರಿ ಶಾಂತೇಗೌಡ ಕಣದಲ್ಲಿದ್ದರು. ಫಲಿತಾಂಶಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಮೊಗಸಾಲೆಯಲ್ಲಿ ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು ವಿಜಯಮಾಲೆ ಯಾರ ಕೊರಳಿಗೆ ಬೀಳಬಹುದೆಂಬ ಕುತೂಹಲ ಇದೆ.
ಏನೇನು ಲೆಕ್ಕಚಾರ ?
ತಮ್ಮ ಕೈಯಲ್ಲಿರುವ ಪರಿಷತ್ ಸ್ಥಾನವನ್ನು ಉಳಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸಿದ್ದು ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಕಳೆದಬಾರಿ ಸ್ಪರ್ಧಿಸಿದಾಗ ಯಾವುದೇ ಗೊಂದಲವಿಲ್ಲದೆ, ಒಳ್ಳೆ ಅಭ್ಯರ್ಥಿ ಎಂಬ ಚರ್ಚೆ ಇತ್ತು ಹಾಗೂ ಬಿಜೆಪಿ ಒಮ್ಮತದಿಂದ ಚುನಾವಣೆ ನಡೆಸಿತ್ತು. ಈ ಚುನಾವಣೆಯಲ್ಲಿ ಪ್ರಾಣೇಶ್ ಬಗ್ಗೆ ಚುನಾಯಿತ ಪ್ರತಿನಿಧಿಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಕ್ಷೇತ್ರಗಳಿಗೆ ಭೇಟಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದ್ದು ಆಡಳಿತವಿರೋಧಿ ಅಲೆಯೂ ಗೋಚರಿಸುತ್ತಿದೆ
ಬಿಜೆಪಿ ನಂಬಿರುವುದು ಆಡಲಿತ ಪಕ್ಷವೆಂದು, ಜಿಲ್ಲೆಯಲ್ಲಿ ನಾಲ್ವರು ಶಾಸಕರನ್ನು ಹೊಂದಿರುವುದು ಹಾಗೂ ಕಾಂಗ್ರೆಸ್ಸಿಗಿಂತ ಹೆಚ್ಚಿನ ಮತದಾರರನ್ನು ಹೊಂದಿದ್ದು ಕನಿಷ್ಠ ೩೦೦ ಮತಗಳ ಅಂತರದಿಂದ ಗೆಲುವು ಸಾಧಿಸುವ ಉತ್ಸಾಹದಲ್ಲಿರುವುದು ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ ಕಾಂಗ್ರೆಸ್ ವಿಚಾರಕ್ಕೆ ಬಂದರೆ ಕಳೆದಬಾರಿ ಗಾಯತ್ರಿಶಾಂತೇಗೌಡ ವಿರೋಧಿ ಅಲೆ ಪಕ್ಷದಲ್ಲಿ ಗೋಚರಿಸಿದ್ದು, ಅದು ಈ ಬಾರಿ ಕಂಡುಬಂದಿಲ್ಲ ಒಗ್ಗಟ್ಟಾಗಿ ಎಲ್ಲಾ ಮುಖಂಡರು ತಮ್ಮ ಸ್ವಂತ ಚುನಾವಣೆಯ ರೀತಿಯಲ್ಲಿ ತೆಗೆದುಕೊಂಡು ಪ್ರಾರಂಭದಿಂದಲೂ ಒಗ್ಗಟ್ಟಿನ ಮಂತ್ರ ಜಪಿಸಿದ್ದು ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತ ಹಾಗೂ ಶಾಸಕ ಎಸ್.ಎಲ್.ಭೋಜೇಗೌಡ ಸೇರಿದಂತೆ ಬಹುತೇಕ ಮುಖಂಡರು ಬೆಂಬಲ ಘೋಷಿಸಿ ಮತ ಹಾಕಿಸುವಲ್ಲಿ ಶ್ರಮಿಸಿರುವುದು ಕಂಡುಬಂದಿದ್ದು ಬಯಲು ಭಾಗದಲ್ಲಿ ಹೆಚ್ಚಿನ ಒಲವು ಕಂಡುಬಂದಿರುವುದು ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿದೆ
ಹಣದ ಹೊಳೆ: ಆಣೆ-ಪ್ರಮಾಣ, ಅಡ್ಡಮತದಾನ
ಚುನಾವಣೆಯಲ್ಲಿ ಹಣದ ಹೊಳೆಯೇ ಹರಿದಿತ್ತು, ಮತದ ಖಾತರಿಗಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ, ಹೊರನಾಡಿನ ಅನ್ನಪೂರ್ಣೇಶ್ವರಿ ಹಾಗೂ ಸ್ಥಳೀಯ ಘಟಾನುಘಟಿ ದೇವರುಗಳ ಮೇಲೆ ಪ್ರಮಾಣ ಮಾಡಿದ್ದು ಕೆಲವರು ಇಬ್ಬರೂ ಅಭ್ಯರ್ಥಿಗಳಿಗೆ ಮತಚಲಾಯಿಸಿ ಪ್ರಮಾಣ ಮಾಡಿ ಗೌರವನೀಡಿದ್ದು, ಇನ್ನು ಕೆಲವರು ಅಡ್ಡಮತದಾನ ಮಾಡಿ ಕಾಣಿಕೆಯನ್ನು ಸಲ್ಲಿಸಿದ್ದಾರಂತೆ.
ರೆಸಾರ್ಟ್ ರಾಜಕಾರಣ
ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಮತದಾರರನ್ನು ಅಡ್ಡ ಮತದಾನ ಮಾಡುವುದನ್ನು ತಡೆಯುವ ಸಲುವಾಗಿ ರೆಸಾಟ್ಗಳಲ್ಲಿ ಇಟ್ಟಿದ್ದು, ಮತದಾನದ ಬೆಳಗ್ಗೆ ಕರೆದುಕೊಂಡು ಬಂದಿದ್ದು ಹಲವು ಪಂಚಾಯ್ತಿಗಳಲ್ಲಿ ಮಧ್ಯಾಹ್ನದ ಬಳಿಕ ಮತದಾನವಾಗಿದ್ದು ಕಂಡುಬಂತು.
ಮಹಿಳಾ ಮತದಾರರೆ ಹೆಚ್ಚು
೨೪೧೭ ಮತದಾರರು ಇರುವ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳಲ್ಲಿ ಕೇವಲ ಏಳು ಮಂದಿ ಮತದಾನದಿಂದ ಚಲಾಯಿಸದಿದ್ದು, ೨೪೦೦ ಮಂದಿ ಮತಗಳ ಚಲಾವಣೆಯಾಗಿದೆ, ದಾಖಲೆಯ ಶೇ.೯೯.೭೧ ಮತದಾನವಾಗಿದ್ದು ಅದರಲ್ಲಿ ೧೧೩೩ ಪುರುಷರು ಹಾಗೂ ೧೨೭೭ ಮಹಿಳಾ ಮತದಾರರು ಹಕ್ಕನ್ನು ಚಲಾಯಿಸಿದ್ದಾರೆ.
ಬೆಟ್ಟಿಂಗ್ ದಂಧೆ:
ಕಾಂಗ್ರೆಸ್, ಬಿಜೆಪಿ ಪಕ್ಷಗಳ ಸಮಬಲದ ಸೆಣಸಾಟಕ್ಕೆ ವೇದಿಕೆ ಕಲ್ಪಿಸಿದ ವಿಧಾನಪರಿಷತ್ ಚುನಾವಣೆಯ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ದಂಧೆ ಕೋರರನ್ನು ಕಾರ್ಯಪ್ರವೃತ್ತರನ್ನಾಗಿಸಿದೆ. ಎರಡು ಪಕ್ಷಗಳ ನಾಯಕರು ತಂತ್ರಗಳನ್ನು ರೂಪಿಸಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದರು. ನಾಯಕರುಗಳ ಪರ-ವಿರೋಧಗಳ ಹೇಳಿಕೆಗಳನ್ನು ಆಧರಿಸಿ ಎರಡು ಪಕ್ಷಗಳಲ್ಲಿರುವ ಕೆಲ ಬೆಟ್ಟಿಂಗ್ ದಂಧೆ ಕೋರರು ಲಕ್ಷಾಂತರ ರೂಪಾಯಿಗಳ ಹಣಹೂಡಿಕೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರೆಲ್ಲರ ಬಂಡವಾಳ ಮಂಗಳವಾರ ಚುನಾವಣಾ ಫಲಿತಾಂಶ ಬಂದನಂತರ ಬಯಲಾಗಲಿದೆ..
Council battle curiosity
Discussion about this post