Dubai News: ದುಬೈನಲ್ಲಿ ನೆಲೆಸಿರುವ ಭಾರತೀಯ ಬಾಲಕನೊಬ್ಬ, ದುಬೈಗೆ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರ ಕಳೆದು ಹೋದ ಗಡಿಯಾರವನ್ನು ಹಿಂದಿರುಗಿಸಿ, ಪ್ರಾಮಾಣಿಕತೆ ಮೆರೆದಿದ್ದಾನೆ.
ಮೊಹಮ್ಮದ್ ಅಯಾನ್ ಎಂಬಾತ, ತನ್ನ ತಂದೆಯೊಂದಿಗೆ ದುಬೈನ ಪ್ರವಾಸಿ ತಾಣವೊಂದಕ್ಕೆ ಭೇಟಿ ನೀಡಿದಾಗ, ಅಲ್ಲಿ ನೆಲಕ್ಕೆ ಬಿದ್ದ ಗಡಿಯಾರವನ್ನು ತೆಗೆದುಕೊಂಡು, ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾನೆ. ಬಳಿಕ ವಾಚನ್ನು ಮಾಲೀಕರ ಕೈಗೆ ತಲುಪಿಸಲಾಗಿದೆ. ಈ ಕಾರಣಕ್ಕೆ ದುಬೈ ಪೊಲೀಸರು ಅಯಾನ್ಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡಿ, ಗೌರವಿಸಿದ್ದಾರೆ.
ದುಬೈಗೆ ಪ್ರವಾಸಕ್ಕೆಂದು ಬಂದಿದ್ದ ವ್ಯಕ್ತಿ ಆ ಪ್ರವಾಸಿ ಸ್ಥಳದಲ್ಲಿ ವಾಚ್ ಕಡೆದುಕೊಂಡಿದ್ದು, ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಬಳಿಕ ಆತ ತನ್ನ ಊರಿಗೆ ಮರಳಿದ್ದು, ಇದೀಗ ಬಾಲಕನ ಕೈಗೆ ಸಿಕ್ಕಿದ್ದ ವಾಚನ್ನು ಆತನಿಗೆ ತಲುಪಿಸಲಾಗಿದೆ. ಬಾಲಕನ ಕೆಲಸಕ್ಕೆ ಮತ್ತು ದುಬೈ ಪೊಲೀಸರಿಗೆ ನೆಟ್ಟಿಗರು ಶ್ಲಾಘಿಸಿದ್ದಾರೆ.
Prajwal case: ರೇವಣ್ಣ, ಪ್ರಜ್ಜಣ್ಣ ನನಗೇನೂ ಮಾಡಿಲ್ಲ, ನಾನು ಆರಾಮಾಗಿದ್ದೇನೆ, ನೆಂಟರ ಮನೆಯಲ್ಲಿದ್ದೇನೆ: ಸಂತ್ರಸ್ತೆ
National News: ಕುರ್ಕುರೆ ತಂದಿಲ್ಲವೆಂದು ಗಂಡನಿಗೆ ಡಿವೋರ್ಸ್ ಕೊಡಲು ಮುಂದಾದ ಪತ್ನಿ
Discussion about this post