Political News: ಪ್ರಜ್ವಲ್ ಪೆನ್ಡ್ರೈವ್ ಕೇಸ್ಗೆ(Prajwal Pen drive case) ಸಂಬಂಧಿಸಿದಂತೆ, ಮಹಿಳೆಯೋರ್ವಳನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ(H.D.Revanna) ಕಿಡ್ನ್ಯಾಪ್ ಮಾಡಿದ್ದಾರೆಂಬ ಆರೋಪದಡಿ, ಎಸ್ಐಟಿ ರೇವಣ್ಣರನ್ನು ಬಂಧಿಸಿತ್ತು. ಆದರೆ ಇಂದು ವೀಡಿಯೋವೊಂದರಲ್ಲಿ ಹೇಳಿಕೆ ಕೊಟ್ಟಿರುವ ಸಂತ್ರಸ್ತೆ, ನಾನು ಆರಾಮವಾಗಿದ್ದೇನೆ, ನಾಲ್ಕು ದಿನ ಸಂಬಂಧಿಕರ ಮನೆಯಲ್ಲಿದ್ದು ಹೋಗೋಣವೆಂದು ಬಂದಿದ್ದೆ. ಅದು ನನ್ನ ಮಗನಿಗೆ ಗೊತ್ತಿಲ್ಲದೇ, ಆತ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದಾನೆ. ನನಗೆ ಯಾರಿಂದಲೂ ತೊಂದರೆಯಾಗಿಲ್ಲವೆಂದು ಹೇಳಿದ್ದಾಳೆ.
ಭವಾನಿ ಅಕ್ಕ, ರೇವಣ್ಣ, ಪ್ರಜ್ಜಣ್ಣ ನನಗೇನೂ ತೊಂದರೆ ಕೊಡಲಿಲ್ಲ. ನನ್ನನ್ನು ಚೆನ್ನಾಗಿಯೇ ನೋಡಿಕೊಂಡು ಕಳಿಸಿದ್ದಾರೆ. ಹರಿದಾಡುತ್ತಿರುವ ಮೊಬೈಲ್ ವೀಡಿಯೋಗೂ ನನಗೂ ಸಂಬಂಧವಿಲ್ಲ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಲಿಲ್ಲ. ಸಂಬಂಧಿಕರ ಮನೆಯಲ್ಲಿ ಇದ್ದೆ ನಾನು. ಟಿವಿ ನೋಡಿದಾಗಲೇ, ಇಂಥ ಸುದ್ದಿ ಓಡಾಡುತ್ತಿರುವುದು ಗೊತ್ತಾಗಿದೆ. ನನ್ನ ಮಗನಿಗೂ ಹೇಳುವುದಿಷ್ಟೇ, ಇನ್ನೆರಡು ದಿನದಲ್ಲಿ ನಾನು ಬರುತ್ತೇನೆ. ಚೆನ್ನಾಗಿದ್ದೇನೆ ಎಂದಿದ್ದಾಳೆ.
ಅಲ್ಲದೇ, ಪೊಲೀಸರು ನಮ್ಮ ಮನೆ ಮುಂದೆ ಬಂದು ತೊಂದರೆ ಕೊಡಬೇಡಿ. ಮಕ್ಕಳು ಇರುತ್ತಾರೆ ಅವರು ಭಯಪಟ್ಟುಕೊಳ್ಳುತ್ತಾರೆ. ನಾವು ಕೂಲಿ ಮಾಡಿ, ನಮ್ಮಷ್ಟಕ್ಕೆ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿ. ನಮಗೆ ಯಾರಿಂದಲೂ ತೊಂದರೆಯಾಗಿಲ್ಲ. ತೊಂದರೆಯಾದರೆ ನಾವೇ ಬಂದು ಕಂಪ್ಲೆಂಟ್ ಕೊಡುತ್ತೇವೆ. ನಾನು ಸೇಫ್ ಆಗಿದ್ದೇನೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲಾ. ನಾನು ಇನ್ನೆರಡು ದಿನದಲ್ಲೇ ಮನೆಗೆ ಬರುತ್ತೇನೆ ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾಳೆ.
ಪ್ರಜ್ವಲ್ ಪೆನ್ಡ್ರೈವ್ ಕೇಸ್ಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚಿಸಿದ್ದು, ಈಗಾಗಲೇ ಈ ಬಗ್ಗೆ ತನಿಖೆ ಶುರುವಾಗಿದೆ. ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ, ಭಾರತಕ್ಕೆ ಬರುವುದನ್ನೇ ಕಾಯುತ್ತಿರುವ ಎಸ್ಐಟಿ, ಪ್ರಜ್ವಲ್ ಭಾರತಕ್ಕೆ ಆಗಮಿಸಿದಂತೆ, ಬಂಧಿಸಲು ಸಜ್ಜಾಗಿದೆ. ಈಗಾಗಲೇ ಕಿಡ್ನ್ಯಾಪ್ ಕೇಸ್ ವಿಚಾರವಾಗಿ ರೇವಣ್ಣರನ್ನು ಎಸ್ಐಟಿ ಬಂಧಿಸಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ.
Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..
Discussion about this post