Udupi news: ದಕ್ಷಿಣ ಕನ್ನಡದ ಜನ ದೈವಗಳನ್ನು ಎಷ್ಟು ನಂಬುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ದೈವವನ್ನು ನಂಬುವವರು ತಪ್ಪು ಮಾಡುವ ಮುನ್ನ ಸಾವಿರ ಬಾರಿ ಯೋಚಿಸುತ್ತಾರೆ. ಶಿವನ ಗಣಗಳೆಂದೇ ಹೇಳುವ ದೈವಗಳಿಗಾಗಿಯೇ, ಕೋಲ ನಡೆಸಲಾಗುತ್ತದೆ. ಇದನ್ನು ನೇಮ ಅಂತಲೂ ಹೇಳುತ್ತಾರೆ.
ಆ ದೈವವನ್ನು ನಂಬಿದವರಿಗೆ ಎಂದಿಗೂ ಮೋಸವಾಗುವುದಿಲ್ಲ. ಅದೇ ರೀತಿ ಉಡುಪಿಯಲ್ಲಿ ನಡೆದ ನೇಮದಲ್ಲಿ ದೈವ ಏನು ನುಡಿದಿತ್ತೋ, ಅದರಂತೆ ನಡೆದಿದೆ. ಉಡುಪಿಯಲ್ಲಿ ಕಳೆದ ವರ್ಷ ಶರತ್ ಶೆಟ್ಟಿ ಎಂಬುವವರ ಕೊಲೆ ನಡೆದಿತ್ತು. ಯೋಗೀಶ್ ಆಚಾರ್ಯ ಎಂಬುವವ ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ.
ಹೀಗಾಗಿ ಶರತ್ ಕುಟುಂಬಸ್ಥರು ಕೋಲ ಸೇವೆ ಕೊಟ್ಟು, ಅಪರಾಧಿಗೆ ಶಿಕ್ಷೆ ಕೊಡಿಸುವಂತೆ ದೈವದ ಮೊರೆ ಹೋಗಿದ್ದರು. ಈ ವೇಳೆ ದೈವ, ಅಪರಾಧಿ ಎಲ್ಲೇ ಇದ್ದರೂ, ತಾನಾಗಿಯೇ ಬಂದು ಶರಣಾಗುತ್ತಾನೆ. ಈ ಸಾವಿಗೆ ನಾನು ನ್ಯಾಯ ಕೊಡಿಸುತ್ತೇನೆ ಎಂದು ನುಡಿದಿತ್ತು.
ಪೊಲೀಸರು ಅಪರಾಧಿಯ ಹುಡುಕಾಟದಲ್ಲಿದ್ದರೂ ಕೂಡ ಅಪರಾಧಿಯನ್ನು ಹುಡುಕಲು ಆಗಿರಲಿಲ್ಲ. ಆದರೆ ಅಪರಾಧಿ ಯೋಗೀಶ್ ತಾನಾಗಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಆತನನ್ನು ಕೋರ್ಟ್ಗೆ ಕರೆದೊಯ್ದು ವಿಚಾರಣೆ ನಡೆದಿದ್ದು, ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿ, ಬಳಿಕ ಆತನಿಗೆ ಕೊಲೆ ಮಾಡಲು ಪ್ರೇರೇಪಿಸಿದವರನ್ನು ಮತ್ತು ಇವನು ತಲೆಮರೆಸಿಕೊಳ್ಳಲು ಸಹಾಯ ಮಾಡಿದವರನ್ನು ಕೂಡ ಬಂಧಿಸಲಾಗುವುದು ಎಂದಿದ್ದಾರೆ.
ಆನ್ಲೈನ್ನಲ್ಲಿ ಭೇಟಿಯಾದ ಯುವತಿಯನ್ನು ವಿವಾಹವಾದ ಯುವಕ, ಬಳಿಕ ಹೊರಬಿತ್ತು ವಿಚಿತ್ರ ಸತ್ಯ
ಈ ಜನಾಂಗದವರು ತಮ್ಮವರು ಯಾರಾದರೂ ಮರಣ ಹೊಂದಿದರೆ ಖುಷಿಯಾಗಿ ನೃತ್ಯ ಮಾಡುತ್ತಾರೆ
Discussion about this post