Special Story: ಯಾವುದೇ ಮನುಷ್ಯನಾಗಲಿ ತನ್ನ ಕುಟುಂಬಸ್ಥರು ಅಥವಾ ಗೆಳೆಯ ಗೆಳತಿ, ಅಥವಾ ತನಗಿಷ್ಟವಾದ ಯಾವುದೇ ವ್ಯಕ್ತಿ ಸತ್ತರೂ. ಆ ಸಾವನಿಂದ ನೋವಿಗೀಡಾಗುತ್ತಾನೆ. ಕಣ್ಣೀರು ಹಾಕುತ್ತಾನೆ. ದುಃಖ ಪಡುತ್ತಾನೆ. ಆ ನೋವು ಹಲವು ದಿನಗಳವರೆಗೂ ಅವನಿಗೆ ಕಾಡುತ್ತಿರುತ್ತದೆ. ಇನ್ನು ಒಬ್ಬರ ಸಾವನ್ನಾ ಯಾರಾದರೂ ಸಂಭ್ರಮಿಸಿದರೆ, ಅಂಥವರನ್ನು ಮನುಷ್ಯತ್ವ ಇಲ್ಲದವರು ಅಂತಾ ನಾವು ಕರಿಯುತ್ತೇವೆ.
ಆದ್ರೆ ಕೆಲವರು ತಮ್ಮ ಗೆಳೆಯ-ಗೆಳತಿಯ ಸಾವನ್ನ ಸಂಭ್ರಮಿಸುತ್ತಾರೆ. ಅವರು ಸತ್ತರೆಂದು ಖುಷಿ ಪಡುತ್ತಾರೆ. ಅವರ ಹೆಣವನ್ನು ಮುಂದಿಟ್ಟುಕೊಂಡು ನೃತ್ಯ ಮಾಡುತ್ತಾರೆ. ಹಾಡು ಹಾಡುತ್ತಾರೆ. ಇದೇನಪ್ಪಾ ವಿಚಿತ್ರಾ..? ಸತ್ತಾಗ ಯಾರಾದ್ರೂ ಹೀಗೆ ಮಾಡ್ತಾರಾ..? ಇವರಿಗೆ ಮನುಷ್ಯತ್ವ ಇಲ್ವಾ ಅಂತಾ ನೀವು ಕೇಳಬಹುದು. ಆದ್ರೆ ಇವರಿಗೆ ಮನುಷ್ಯತ್ವ ಇರುವ ಕಾರಣಕ್ಕೆನೇ ಇವರು, ತಮ್ಮ ಗೆಳೆಯ ಗೆಳತಿ ಸತ್ತಾಗ ಸಂಭ್ರಮಿಸುತ್ತಾರೆ. ಹಾಗಾದ್ರೆ ಹೀಗೆ ಸಾವನ್ನ ಸಂಭ್ರಮಿಸುವವರು ಯಾರು..? ಯಾಕೆ ಇವರು ಹೀಗೆ ಮಾಡ್ತಾರೆ..? ಇವೆಲ್ಲ ವಿಚಾರದ ಜೊತೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ..
ಹುಟ್ಟಿದವನು ಸಾಯಲೇಬೇಕು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಈ ಸತ್ಯವನ್ನು ಅರಿತು ಕೂಡ ನಾವು ನಮ್ಮವರನ್ನ ಕಳೆದುಕೊಳ್ಳೋಕ್ಕೆ ಇಷ್ಟಪಡಲ್ಲ. ಆದ್ರೆ ಕೆಲ ಸಮುದಾಯದವರು ತಮ್ಮ ಗೆಳೆಯ, ಗೆಳತಿ ಅಥವಾ ತಾವೇ ಯಾವಾಗ ಮರಣ ಹೊಂದುತ್ತೇವೋ ಎಂದು ಕಾಯುತ್ತಿರುತ್ತಾರೆ. ಅದು ಯಾರೆಂದರೆ, ಮಂಗಳಮುಖಿಯರು (transgender).
ಹೌದು ಮಂಗಳಮುಖಿಯರಲ್ಲಿ ಕೇವಲ ಒಂದು ಪರ್ಸೆಂಟ್ ಜನರಷ್ಟೇ ವಿದ್ಯೆ ಕಲಿತು ಉನ್ನತ ಸ್ಥಾನದಲ್ಲಿ ಬದುಕುತ್ತಿದ್ದಾರೆ. ಆದ್ರೆ ಉಳಿದ ಮಂಗಳಮುಖಿಯರು ಹದಗೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಮತ್ತು ಈ ಸಮಾಜ ಮಂಗಳಮುಖಿಯರನ್ನ ತಮ್ಮಲ್ಲಿ ಒಬ್ಬರು ಅಂತಾ ಎಂದಿಗೂ ನೋಡಿಲ್ಲ. ಬದಲಾಗಿ ಮಂಗಳಮುಖಿಯರನ್ನ ನೋಡಿ ಹೆದರಿಕೊಳ್ಳುವವರೇ ಹೆಚ್ಚು. ಅಲ್ಲದೇ ಅವರನ್ನ ಕೀಳಾಗಿಯೂ ನೋಡುತ್ತಾರೆ. ಹಾಗಾಗಿ ಮಂಗಳಮುಖಿಯರ ಪರಿಸ್ಥಿತಿ ಅವರಿಗಷ್ಟೇ ಗೊತ್ತು. ಈ ಕಾರಣಕ್ಕೆ ಈ ನರಕದಿಂದ ಮುಕ್ತಿ ಹೊಂದಿ ಯಾವಾಗ ತಾವು, ತಮ್ಮ ಗೆಳೆಯ, ಗೆಳತಿಯರು ಈ ಲೋಕ ಬಿಟ್ಟು ಹೋಗುತ್ತೇವೋ ಎಂದು ಅವರು ಕಾಯುತ್ತಿರುತ್ತಾರೆ.
ಓರ್ವ ಮಂಗಳಮುಖಿಗೆ ತನ್ನ ಸಾವು ಹತ್ತಿರಬಂದಿದೆ ಎಂದು ಯಾವಾಗ ಗೊತ್ತಾಗುತ್ತದೆಯೋ, ಆಗ ಆಕೆ ಅನ್ನವನ್ನ ತ್ಯಜಿಸಿಬಿಡುತ್ತಾಳೆ. ನೀರಿನ ಸೇವನೆಯನ್ನಷ್ಟೇ ಮಾಡುತ್ತಾಳೆ. ಮತ್ತು ಅರ್ಧನಾರೇಶ್ವರ ಅಂದ್ರೆ ಶಿವನನ್ನು ಆರಾಧಿಸುತ್ತಾಳೆ. ಯಾವ ಮನುಷ್ಯನಿಗೂ ಮಂಗಳಮುಖಿಯ ಜನ್ಮವನ್ನ ನೀಡಬೇಡ ಎಂದು ಬೇಡುತ್ತಾಳೆ. ಹೀಗೆ ಪ್ರಾರ್ಥಿಸುತ್ತ ಜೀವ ತ್ಯಾಗ ಮಾಡುತ್ತಾಳೆ.
ಇನ್ನು ಮಂಗಳಮುಖಿಯರನ್ನ ಸೂರ್ಯಾಸ್ತದ ನಂತರ ಅಂದ್ರೆ ರಾತ್ರಿ ಸಮಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗತ್ತೆ. ಹಿಂದೂ ಧರ್ಮದ ಪ್ರಕಾರ ಸೂರ್ಯಾಸ್ತದ ಮೊದಲೇ ಅಂತ್ಯಸಂಸ್ಕಾರ ಮಾಡಬೇಕು ಎಂಬ ಪದ್ಧತಿ ಇದೆ. ಆದ್ರೆ ಮಂಗಳಮುಖಿ ಯಾವುದೇ ಜಾತಿ, ಧರ್ಮದವಳಾಗಿರಲಿ, ಆಕೆಯ ಅಂತ್ಯ ಸಂಸ್ಕಾರವನ್ನ ಸೂರ್ಯಾಸ್ತದ ಬಳಿಕವೇ ಮಾಡಲಾಗತ್ತೆ. ಆಕೆಯ ಮೃತದೇಹವನ್ನ ಯಾರಿಗೂ ಕಾಣಿಸದಂತೆ ಗುಟ್ಟಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ, ಅಂತ್ಯಸಂಸ್ಕಾರ ಮಾಡಲಾಗತ್ತೆ. ಈ ವೇಳೆ ಮಂಗಳಮುಖಿಯರಷ್ಟೇ ಅಲ್ಲಿ ಉಪಸ್ಥಿತರಿರುತ್ತಾರೆ. ಮತ್ತು ಮೃತದೇಹದ ಮೇಲೆ ಬರೀ ಬಿಳಿ ವಸ್ತ್ರವನ್ನಷ್ಟೇ ಹಾಕಲಾಗತ್ತೆ. ಹೂವಿನ ಹಾರವೆಲ್ಲ ಹಾಕುವುದಿಲ್ಲ.
ಯಾಕೆ ಹೀಗೆ ಮಾಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರ, ಮಂಗಳಮುಖಿಯ ಮೃತದೇಹವನ್ನ ಸಾಮಾನ್ಯ ಮನುಷ್ಯ ನೋಡಿದರೆ, ಆತ ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಹುಟ್ಟುತಾನೆಂದು ಹೇಳಲಾಗತ್ತೆ. ಹಾಗಾಗಿ ಅಂಥ ನರಕ ಯಾತನೆ ಯಾರೂ ಅನುಭವಿಸುವುದು ಬೇಡವೆಂಬ ಕಾರಣಕ್ಕೆ, ಮಂಗಳಮುಖಿಯ ಅಂತ್ಯಸಂಸ್ಕಾರವನ್ನು ಗುಟ್ಟಾಗಿ ಮಾಡಲಾಗತ್ತೆ. ಇನ್ನು ಮಂಗಳ ಮುಖಿಯರನ್ನ ಸುಡಲಾಗುವುದಿಲ್ಲ. ಬದಲಾಗಿ ಹೂಳಲಾಗತ್ತೆ. ಅಂತ್ಯಸಂಸ್ಕಾರದ ಬಳಿಕ ಉಳಿದ ಮಂಗಳಮುಖಿಯರು ಶುದ್ಧವಾಗಿ, ಸತ್ತವರ ಹೆಸರಿನಲ್ಲಿ ದಾನ ಧರ್ಮವನ್ನು ಮಾಡುತ್ತಾರೆ. ಯಾಕಂದ್ರೆ ಆ ಮರಣ ಹೊಂದಿದ ಮಂಗಳಮುಖಿ ಮುಂದಿನ ಜನ್ಮದಲ್ಲಿ ಯಾವುದಾದರೂ ಒಂದು ಲಿಂಗದಲ್ಲಿ ಜನಿಸಲಿ ಎಂದು.
ಇನ್ನು ಮಂಗಳಮುಖಿಯ ಶಾಪಕ್ಕೆ ಯಾರೂ ಗುರಿಯಾಗಬಾರದೆಂದು ಹೇಳಲಾಗತ್ತೆ. ಯಾಕಂದ್ರೆ ಮಂಗಳಮುಖಿಯ ಹಾರೈಕೆ ಎಷ್ಟು ಒಳ್ಳೆಯದೋ, ಆಕೆಯ ಶಾಪ ಅದಕ್ಕಿಂತ ಕೆಟ್ಟದು. ಅದಕ್ಕೆ ಮಂಗಳ ಮುಖಿಯ ಶಾಪಕ್ಕೆ ಯಾರೂ ಗುರಿಯಾಗಬಾರದು ಅಂತಾ ಹೇಳಲಾಗತ್ತೆ. ಇನ್ನು ಮಂಗಳಮುಖಿಯನ್ನ ಮದುವೆ, ಗೃಹಪ್ರವೇಶ, ನಾಮಕರಣ ಸಮಾರಂಭವಿದ್ದಾಗ ಕರೆಯಲಾಗತ್ತೆ. ಯಾಕಂದ್ರೆ ಅವರು ಬಂದು ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಎಲ್ಲ ಒಳ್ಳೆಯದಾಗತ್ತೆ ಅನ್ನೋ ನಂಬಿಕೆ ಇದೆ. ಇನ್ನು ಚಿಕ್ಕ ಮಕ್ಕಳಿಗೆ ಮಂಗಳಮುಖಿಯರಿಂದ ದೃಷ್ಟಿ ತೆಗೆಸಲಾಗತ್ತೆ. ಇದರಿಂದ ಪುಟ್ಟ ಮಕ್ಕಳಿಗೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ, ದೃಷ್ಟ ದೋಷವೆಲ್ಲ ತಾಗುವುದಿಲ್ಲವೆಂದು ಹೇಳಲಾಗತ್ತೆ.
ಸಾಮಾನ್ಯ ಯುವಕನನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯನ್ನಾಗಿ ಮಾಡಿದ ಚಾಣಕ್ಯರ ಚಾಣಾಕ್ಷತನದ ರೋಚಕ ಕಥೆ
ಚಾಣಕ್ಯರ ಜಾತಕ ನೋಡಿ ಜ್ಯೋತಿಷಿಗಳು ಹೇಳಿದ್ದೇನು? ಹಲ್ಲು ಮುರಿದುಕೊಂಡು ಭವಿಷ್ಯ ಬದಲಿಸಿಕೊಂಡ ಕೌಟಿಲ್ಯ
Discussion about this post