ಕೋವಿಡ್ ಎರಡನೆ ಅಲೆಯ ಮಧ್ಯೆ ಬಿಡುಗಡೆಯಾದ ಸಲಗ ದೊಡ್ಡ ಯಶಸ್ಸು ಗಳಿಸಿತು. ಇದಕ್ಕೆ ಕಾರಣ, ಚಿತ್ರದ ನಿರ್ದೇಶನ ಜವಾಬ್ದಾರಿ ಹೊತ್ತಿದ್ದ, ನಾಯಕ ನಟರೂ ಆಗಿರುವ ದುನಿಯಾ ವಿಜಯ್. ತಮ್ಮ ಚಿತ್ರ ಬದುಕಿನ ಮೊದಲ ನಿರ್ದೇಶನ ಚಿತ್ರ ಸಲಗ, ಇದರಲ್ಲಿ ದುನಿಯ ವಿಜಯ್ ಗೆದ್ದುಬಿಟ್ಟರು.
ನಿರ್ದೇಶಕನಾಗಿ, ನಟನಾಗಿಯೂ ಗಳಿಸಿದ ಈ ಯಶಸ್ಸಿನ ಬೆನ್ನೆಲ್ಲೇ ದುನಿಯಾ ವಿಜಯ್ ಕಾಲಿವುಡ್ ಗೆ ಕಾಲಿಡುತ್ತಿದ್ದಾರೆ, ಟಾಲಿವುಡ್ ಗೆ ಹೋಗುತ್ತಿದ್ದಾರೆ ಅನ್ನೋದು ದೊಡ್ಡ ಸುದ್ದಿಯೂ ಆಗಿತ್ತು. ಟಾಲಿವುಡ್ ನಲ್ಲಿ ನಟ ನಂದಮೂರಿ ಬಾಲಕೃಷ್ಣರ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನೋದು ದೊಡ್ಡ ಬ್ರೇಕಿಂಗ್ ನ್ಯೂಸ್ ಆಗಿಹೋಗಿತ್ತು.
ಇದು ನಿಜನಾ ಸಾರ್, ಅಂತ ದುನಿಯಾ ವಿಜಯ್ ಅವರನ್ನು ಕೇಳಿದಾಗ, ನಿಜವನ್ನೂ ಒಪ್ಪಿಕೊಳ್ಳದೇ, ಸುದ್ದಿಯನ್ನು ತಳ್ಳಿಯೂ ಹಾಕದೇ ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ್ದರು.
ಆದರೆ, ಸೋಮವಾರ ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ದುನಿಯಾ ವಿಜಯ್ ತೆಲುಗಿನಲ್ಲಿ ನಟಿಸುತ್ತಿರುವುದನ್ನು ಖಚಿತಪಡಿಸಿದೆ. ‘ಟೀಮ್ ಎನ್ ಬಿ ಕೆ 107 ಚಿತ್ರಕ್ಕೆ ಸ್ಯಾಂಡಲ್ ವುಡ್ ಸೆನ್ಸೇಷನ್ ಸ್ಟಾರ್ ದುನಿಯಾ ವಿಜಯ್ ಅವರಿಗೆ ಸುಸ್ವಾಗತ’ ಎಂದು ತನ್ನ ಸಾಮಾಜಿಕ ಜಾಲ ತಾಣದ ಖಾತೆಯಲ್ಲಿ ಸಂಸ್ಥೆ ಶುಭಕೋರಿದೆ.
ಅಂದರೆ, ಬಾಲಕೃಷ್ಣ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ದುನಿಯಾ ವಿಜಯ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸಂಸ್ಥೆ ಘೋಷಣೆ ಮಾಡಿದಂತಾಗಿದೆ. ಈ ಚಿತ್ರವನ್ನು ಗೋಪಿಚಂದ್ ಮಲಿನೇನಿ ನಿರ್ದೇಶಿಸುತ್ತಿದ್ದಾರೆ. ಬಾಲಕೃಷ್ಣಗೆ ಶೃತಿಹಾಸನ್ ಜೋಡಿಯಾಗಿದ್ದಾರೆ. ಈ ಹೊಸ ಚಿತ್ರದ ಘೋಷಣೆ ನವೆಂಬರ್ ನಲ್ಲಿಯೇ ಆಗಿತ್ತು.
ಬಾಲ ಕೃಷ್ಣ ನಟನೆಯ ಹೆಸರಿಡದ ಈ ಚಿತ್ರದ ಕಥೆ, ನೈಜ ಘಟನೆಯಾಧಾರಿತವಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ರಾಯಲ ಸೀಮ ಸುತ್ತುಮುತ್ತ ಚಿತ್ರಿಕರಣ ನಡೆಯಲಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.
ಮಾತುಕತೆಯ ಹಂತದಲ್ಲಿದೆ ಎಂದು ಹೇಳಿಕೊಂಡಿದ್ದ ದುನಿಯಾ ವಿಜಯ್ ತಮ್ಮ ಇನ್ ಸ್ಟ್ರಾಗ್ರಾಮ್ ಖಾತೆಯಲ್ಲಿ ಮೈತ್ರಿ ಮೂವಿ ಮೇಕರ್ಸ್ ನ ಪೋಸ್ಟ್ ಅನ್ನು ಶೇರ್ ಮಾಡುವ ಮೂಲಕ ಗಾಳಿಸುದ್ದಿಯಲ್ಲ, ಅದು ನಿಜ ಸುದ್ದಿ ಎನ್ನುವುದನ್ನು ಸೋಮವಾರ ಖಚಿತಪಡಿಸಿದ್ದಾರೆ.
Duniya Vijay Will Act in Telegu Actor Nandamuri Balakrishna’s New Film as Villain
ಇದನ್ನೂ ಓದಿ: ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ನಟಿ ಅದಿತಿ ಪ್ರಭುದೇವ: ವರ ಯಾರು?
Discussion about this post