Sandalwood News: 100 ಜನರಿಗೆ ಮೋಸ ಮಾಡಿದ ಮತ್ತು ಇಂದಿರಾನಗರದಲ್ಲಿರುವ ಸ್ಪಾ ಓನರ್ಗೆ ಬೆದರಿಸಿ, 15 ಲಕ್ಷ ರೂಪಾಯಿಗಾಗಿ ಬೆದರಿಸಿರುವ ಆರೋಪದಡಿ, ಕನ್ನಡದ ನಿರೂಪಕಿ ದಿವ್ಯಾ ವಸಂತಾಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ನ್ಯೂಸ್ ಸಿಇಓ ಮತ್ತು ದಿವ್ಯವಸಂತ, ಈಕೆಯ ಸಹೋದರ ಸಂದೇಶ್ ಸೇರಿ ಹಲವು ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ದಿವ್ಯ ವಸಂತಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ ನ್ಯೂಸ್ ಸಿಇಓ ರಾಜಾನುಕುಂಟೆ ವೆಂಕಟೇಶ್ ಮತ್ತು ದಿವ್ಯ ವಸಂತಾ ಸಹೋದರ ಸಂದೇಶ್ ಅರೆಸ್ಟ್ ಆಗಿದ್ದು, ಬಂಧಿತರಿಂದ 3 ಫೋನ್ ಜಪ್ತಿ ಮಾಡಲಾಗಿದೆ.
ಮೊದಲು ದಿವ್ಯಾ ವಸಂತ್ ಕನ್ನಡ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. 15 ಸಾವಿರ ಸಂಬಳಕ್ಕೆ ದುಡಿಯುತ್ತಿದ್ದ ದಿವ್ಯಾ ವಸಂತಾ, ನಟಿಯೊಬ್ಬರು ಪ್ರೆಗ್ನೆಂಟ್ ಆದ ಸುದ್ದಿಯನ್ನು, ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಹೇಳಿ, ಹಲವರ ಟೀಕೆಗೆ ಗುರಿಯಾಗಿದ್ದರು. ಬಳಿಕ ಆಕೆಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಆಗ ಆಕೆಗೆ ವಾರಕ್ಕೆ 7ರಿಂದ 8 ಸಾವಿರ ಸಂಬಳ ಸಿಗುತ್ತಿತ್ತು.
ಹೀಗೆ ದುಡ್ಡಿನ ಆಸೆಯಲ್ಲಿದ್ದ ಈಕೆಗೆ ಸಿಕ್ಕಿದ್ದು, ರಾಜಾನುಕುಂಟೆ ವೆಂಕಟೇಶ್. ಆತನ ಯುಟ್ಯೂಬ್ ಚಾನೆಲ್ನಲ್ಲಿ ಈಕೆ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಳು. ಬಳಿಕ ಇಬ್ಬರೂ ಸೇರಿ, ಹನಿಟ್ರ್ಯಾಪ್ ಮಾಡಲು ಆರಂಭಿಸಿದ್ದಾರೆ. ಹಲವರಿಗೆ ಕಾಲ್ ಮಾಡಿ, ಮೆಸೆಜ್ ಮಾಡಿ ಅವರೊಂದಿಗೆ ಸ್ನೇಹ ಬೆಳೆಸಿ, ಬಳಿಕ ಹನಿಟ್ರ್ಯಾಪ್ ಮಾಡಿ, ಹಣ ಪೀಕುವುದು ಇವರಿಬ್ಬರ ಕೆಲಸವಾಗಿತ್ತು.
ಅಲ್ಲದೇ. ಇವರಿಬ್ಬರು ಸೇರಿ, ಈ ಕೆಲಸಕ್ಕೆ ದಿವ್ಯಾ ಸಹೋದರ ಸಂದೇಶ್ ಅವರನ್ನು ಬಳಸಿಕೊಂಡಿದ್ದರು. ಬಳಿಕ ಇನ್ನೊಂದಿಷ್ಟು ಜನರನ್ನು ಇವರ ಕಚಡಾ ಕೆಲಸಕ್ಕೆ ಸೇರಿಸಿಕೊಂಡು, ವಾಟ್ಸಪ್ ಗ್ರೂಪ್ ಮಾಡಿ, ಅದರಲ್ಲಿ ಹೇಗೆ ಹನಿಟ್ರ್ಯಾಪ್ ಮಾಡಬೇಕು ಎಂದು ಚರ್ಚಿಸುತ್ತಿದ್ದರು,
ಕೊನೆಗೆ ಸ್ಪಾ ಓನರ್ನನ್ನು ಹನಿಟ್ರ್ಯಾಪ್ಗೆ ಬೀಳಿಸಿ, ನಿಮ್ಮ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಸುದ್ದಿ ಹಬ್ಬಿಸುತ್ತೇವೆ. 15 ಲಕ್ಷ ರೂಪಾಯಿ ಕೊಡಿ ಎಂದು, ಹೆದರಿಸಿದ್ದಾರೆ. ಆಗ ಸ್ಪಾ ಓನರ್ ಪೊಲೀಸರಿಗೆ ಈ ಬಗ್ಗೆ ಕಂಪ್ಲೆಂಟ್ ಕೊಟ್ಟಿದ್ದಾರೆ. ಇದೀಗ ಮಾಡಬಾರದ ಕೆಲಸ ಮಾಡಿ ದಿವ್ಯಾ ವಸಂತ ಓಡಿ ಹೋಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಜಿ.ಬಿ.ನಗರ ಪೊಲೀಸರು, ಈಕೆಗಾಗಿ ಹುಡುಕಾಟ ನಡೆಸಿದ್ದಾರೆ.
Discussion about this post