ಕಾಲ ಕಾಲಕ್ಕೆ ಸಾಂಸ್ಥಿಕ ಚುನಾವಣೆ ನಡೆಸದ ರಾಜಕೀಯ ಪಕ್ಷಗಳ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಚುನಾವಣಾ ಆಯೋfಗಕ್ಕೆ ಸೂಚಿಸಿದೆ.
ನವದೆಹಲಿ: ದೇಶಕ್ಕೆ ಸಂವಿಧಾನ ಇರುವಂತೆ ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಅವುಗಳದ್ದೆ ಆದ ಸಂವಿಧಾನ ಇದೆ. ಪಕ್ಷದ ವಿವಿಧ ಹಂತದ ಪದಾಧಿಕಾರಿಗಳನ್ನು ಪ್ರಜಾಸತಾತ್ಮಕ ರೀತಿಯಲ್ಲಿ ಆಯ್ಕೆ ಮಾಡಿಬೇಕು ಎಂಬ ಆಶಯ ಅದರಲ್ಲೂ ಇದೆ. ಇದನ್ನು ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಒಪ್ಪುತ್ತವೆ. ಆದರೆ, ಇದು ವಾಸ್ತವದಲ್ಲಿ ಪಾಲನೆ ಆಗುವುದು ಬಹಳ ಅಪರೂಪ. ಹೀಗಾಗಿ ಸಾಂಸ್ಥಿಕ ಚುನಾವಣೆಗಳನ್ನು ನಡೆಸದ ರಾಜಕೀಯ ಪಕ್ಷಗಳ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಕೋರಿರುವ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ವಕೀಲ ಸಿ. ರಾಜಶೇಖರನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ರಾಜಕೀಯ ಪಕ್ಷಗಳ ಆಂತರಿಕ ಚುನಾವಣೆಯಲ್ಲಿ “ಮಾದರಿ” ಎನ್ನುವಂತಹ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆಯೆ ಎಂದು ಪ್ರಶ್ನಿಸಿದೆ.
“ವಿವಿಧ ಘಟಕಗಳ ಪದಾಧಿಕಾರಿಗಳ ಅಧಿಕಾರಾವಧಿ ಪಕ್ಷದಿಂದ ಪಕ್ಷಕ್ಕೆ ಭಿನ್ನವಾಗಿದೆ. ಈ ಸಂಬಂಧದ ಕಾನೂನು ಸಮಾನವಾಗಿಲ್ಲ. ಅಧಿಕಾರಾವಧಿ ಮುಗಿದ ನಂತರ ಮುಂದೇನು ಎಂಬ ಸ್ಪಷ್ಟತೆ ಇಲ್ಲ. ಅಧಿಕಾರಾವಧಿ ಮುಗಿದ ನಂತರವೂ ಅದೇ ಪದಾಧಿಕಾರಿಗಳು ಮುಂದುವರಿದಿರುವ ನಿದರ್ಶನ ಸಾಕಷ್ಟಿದೆ. ಇದು ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಅನುಮಾನ ಹುಟ್ಟಿಹಾಕುತ್ತದೆ’ ಎಂದು ಅರ್ಜಿದಾರರು ಜೂನ್ 14ರಂದು ನಡೆದ ವಿಚಾರಣೆ ವೇಳೆ ವಾದಿಸಿದ್ದರು.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮೊದಲ ಬಾರಿಗೆ ನೋಟಿಸ್ ನೀಡಿದ್ದ ಪೀಠ. ಏಳು ದಿನಗಳಲ್ಲಿ ಪ್ರತಿಕ್ರಿಯಿಸಿದಿದ್ದರೆ ಆಯೋಗದ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮವನ್ನು ಪ್ರತಿವಾದಿ ಜರುಗಿಸಬಹುದು ಎಂದು ಹೇಳಿತ್ತು. ಹೀಗಾಗಿ ರಾಜಶೇಖರನ್ ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಆಂತರಿಕ ಚುನಾವಣೆ ನಡೆದು ದಶಕಗಳೇ ಆಗಿವೆ. ಪಕ್ಷದ ಉನ್ನತಾಧಿಕಾರದ ಸಮಿತಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯೇ ನಿರ್ಣಯಕೈಗೊಳ್ಳುತ್ತಿದೆ. ಇದೇ ರೀತಿ ಅನೇಕ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳಲ್ಲೂ ಸಾಂಸ್ಥಿಕ ಚುನಾವಣೆಗಳು ನಡೆದಿಲ್ಲ.
ಇದನ್ನೂ ಓದಿ: Puneet passes away: ಪವರ್ ಕಳೆದು ಕೊಂಡ ಕರುನಾಡು: ಪುನೀತ್ ರಾಜ್ಕುಮಾರ್ ನಿಧನ
ಇದನ್ನೂ ಓದಿ: ACB Raids: ಎಸಿಬಿ ಬಲೆಗೆ ಕಡೂರು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್

























Discussion about this post