Movie News: ಉಮಾಪತಿ ಶ್ರೀನಿವಾಸ್ ಮತ್ತು ನಟ ದರ್ಶನ್ ಕೆಲ ತಿಂಗಳ ಹಿಂದೆ ಜಗಳವಾಡಿದ್ದು, ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ದರ್ಶನ್ ನನಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ ಅಂತಾ ಉಮಾಪತಿ ಶ್ರೀನಿವಾಸ್ ಹೇಳಿದ್ದರು. ನನಗೆ ಕಚಡಾ ಅಂತಾ ಹೇಳಿದ್ದ ಅಂತಲೂ ಹೇಳಿದ್ದರು.
‘ನೀನು ಗಂಡಸೇ ಆಗಿದ್ರೆ’.. ಪ್ರದೀಪ್ ಈಶ್ವರ್ಗೆ ಸ್ವಪಕ್ಷಿಯರಿಂದಲೇ ಸವಾಲ್
ಇದೀಗ ಉಮಾಪತಿ ಮಾಧ್ಯಮದ ಮುಂದೆ ಇನ್ನೊಂದು ಸತ್ಯ ಹೇಳಿದ್ದು, ಕೋಡಿಶ್ರೀ ಬಳಿ ಹೋದಾಗ, ಅವರೊಂದು ಭವಿಷ್ಯ ನುಡಿದಿದ್ದರಂತೆ. ಉಮಾಪತಿ ಶ್ರೀನಿವಾಸ್ (Umapati Shrinivas) ಮತ್ತು ಅವರ ತಂದೆ, ಕೋಡಿಶ್ರೀಗಳ ಬಳಿ ಹೋದಾಗ, ನನ್ನ ಮಗ ತುಂಬ ಕೋಪಿಷ್ಠ, ಯಾರಾದರೂ ಬೈದರೆ, ತಿರುಗಿಸಿ ಸರಿಯಾಗಿ ಬೈದು ಗಲಾಟೆ ಮಾಡಿಕೊಳ್ಳುತ್ತಾನೆ. ಸ್ವಲ್ಪ ಬುದ್ಧಿ ಹೇಳಿ ಎಂದು ಹೇಳಿದ್ದರು.
ನಿಮ್ಮ ಮೊಬೈಲನ್ನು ಹೇಗೆ ಹ್ಯಾಕ್ ಮಾಡ್ತಾರೆ ಗೊತ್ತಾ ಈ ಖದೀಮರು
ಅದಕ್ಕೆ ಉಮಾಪತಿ ಶ್ರೀನಿವಾಸ್ಗೆ ಅಂದೇ ಮುನ್ನೆಚ್ಚರಿಕೆ ಕೊಟ್ಟಿದ್ದ ಕೋಡಿಶ್ರೀ, ನಿಮಗೆ ಯಾರಾದರೂ ಬೈದರೆ, ಸುಮ್ಮನಿರಿ. ಅದಕ್ಕೆ ಪ್ರತಿಕ್ರಿಯಿಸಬೇಡಿ. ಹಾಗೇನಾದರೂ ಪ್ರತಿಕ್ರಿಯಿಸಿದರೆ, ನಿಮಗೇ ತೊಂದರೆ. ಆದರೆ ನೀವು ಪ್ರತಿಕ್ರಿಯಿಸದೇ, ಸುಮ್ಮನಿದ್ದರೆ, ದೇವರು ನಿಮ್ಮ ಪರವಾಾಗಿರುತ್ತಾನೆ. ಬೈದವರನ್ನು ದೇವರೇ ನೋಡಿಕೊಳ್ಳುತ್ತಾನೆ ಅಂತಾ ಹೇಳಿದ್ದರು.
ದರ್ಶನ್ ಅರೆಸ್ಟ್ ಕೇಸ್: ಪೋಲೀಸ್ ಕಮಿಷನರ್ ಹೇಳಿದ್ದೇನು?
ಇದೀಗ ಕೋಡಿಶ್ರೀ ನುಡಿದ ಭವಿಷ್ಯ ಸತ್ಯವಾಗಿದೆ. ದರ್ಶನ್ (Darshan Thoogudeepa Shrinivas) ಮತ್ತು ಉಮಾಪತಿ ಶ್ರೀನಿವಾಸ್ ನಡುವೆ ಮನಸ್ತಾಪವಿದ್ದು, ದರ್ಶನ್ ನನಗೆ ಮಾಡಿದ್ದ ಅವಮಾನಕ್ಕೆ ಸರಿಯಾಗಿ ಶಿಕ್ಷೆಯಾಗಿದೆ ಎಂದು ಉಮಾಪತಿ ಶ್ರೀನಿವಾಸ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ, ರೇಣುಕಾಸ್ವಾಮಿ ಕುಟುಂಬಕ್ಕೆ, ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
Discussion about this post