Life lesson: ಇಂದಿನ ಯುವ ಪೀಳಿಗೆಯವರು ಎಲ್ಲ ವಿಷಯಗಳಲ್ಲೂ ತುಂಬಾ ಮುಂದುವರೆದಿದ್ದಾರೆ. ಗ್ಯಾಜೆಟ್ಸ್ ಬಳಸುವ ವಿಷಯದಲ್ಲಿ, ತಿರುಗಾಡುವ ವಿಷಯದಲ್ಲಿ, ಹೀಗೆ ಹಲವಾರು ವಿಷಯಗಳನ್ನ ಪಟ್ ಅಂತಾ ಅರಿತುಕೊಳ್ತಾರೆ. ಇದಕ್ಕೆ ಕಾರಣ ಇಂಟರ್ನೆಟ್. ಸಾಮಾಜಿಕ ಜಾಲತಾಣದಲ್ಲಿ ನಮಗೆ ಬೇಕಾದ ಎಲ್ಲ ವಿಷಯಗಳ ಬಗ್ಗೆ ಪಟ್ ಅಂತಾ ತಿಳಿಸಿ ಕೊಡುವ ಸಾಮರ್ಥ್ಯವಿದೆ. ಹಾಗಾಗಿ ಇಂದಿನ ಯುವ ಪೀಳಿಗೆ ಎಲ್ಲದರಲ್ಲೂ ಮುಂದಿದೆ. ಆದ್ರೆ ಚಾಣಕ್ಯರ ಪ್ರಕಾರ, ಯುವ ಪೀಳಿಗೆಯವರು, ಅದರಲ್ಲೂ ಯುವಕರು 5 ವಿಷಯಗಳಿಂದ ದೂರವಿರಬೇಕು. ಇದರಿಂದ ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ 5 ವಿಷಯ ಅಂತಾ ತಿಳಿಯೋಣ ಬನ್ನಿ..
ಇದನ್ನು ಓದಿ: Pakistan: ಕುರಾನ್ಗೆ ಅವಮಾನಿಸಿದ್ದಾನೆಂದು ಆರೋಪಿಸಿ, ಪ್ರವಾಸಿಗನಿಗೆ ಸಜೀವ ದಹನ ಶಿಕ್ಷೆ
ಮೊದಲನೇಯ ವಿಷಯ, ಸೋಮಾರಿತನದಿಂದ ದೂರವಿರಬೇಕು. ಯವ್ವನದಲ್ಲಿ ಸೋಮಾರಿತನದಿಂದ ದೂರವಿದ್ದು, ಕಷ್ಟಪಟ್ಟು ದುಡಿದರೆ, ಮುಂದೊಂದು ದಿನ ಕೂತು ಉಣ್ಣಬಹುದು. ಅದೇ ನೀವು ಯವ್ವನದಲ್ಲಿ ಸೋಮಾರಿತನದಿಂದ ಇದ್ದಲ್ಲಿ, ದುಡಿಯದೇ, ಸಮಯ ವ್ಯರ್ಥ ಮಾಡುತ್ತಿದ್ದಲ್ಲಿ, ವೃದ್ಧಾಪ್ಯದಲ್ಲಿ ಹಣಕ್ಕಾಗಿ, ಊಟಕ್ಕಾಗಿ ಕೈ ಚಾಚಬೇಕಾಗುತ್ತದೆ. ಹಾಗಾಗಿ ವೃದ್ಧಾಪ್ಯದಲ್ಲಿ ಮಕ್ಕಳ ಎದುರಿಗೂ ಕೈ ಚಾಚದ ಹಾಗೆ ನೀವು ಆರಾಮಾಗಿರುವ ಹಾಗೆ, ಯವ್ವನದಲ್ಲಿ ದುಡಿಮೆ ಮಾಡಬೇಕು.
ಇದನ್ನು ಓದಿ: National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?
ಎರಡನೇಯ ವಿಷಯ, ನಿರ್ಲಕ್ಷ್ಯದಿಂದ ದೂರವಿರಿ. ದೊಡ್ಡವರ ಮಾತು ಕೇಳುವಾಗ, ಅಥವಾ ಕೆಲಸವಾಗಲಿ ಮಾಡುವಾಗ ಎಂದಿಗೂ ನಿರ್ಲಕ್ಷ್ಯದಿಂದಿರಬೇಡಿ. ಯಾಕಂದ್ರೆ ನೀವು ಮಾಡುವ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದ್ರೆ, ನೀವು ನಿಮ್ಮ ಗುರಿ ಮುಟ್ಟಲು ಸಾಧ್ಯವಿಲ್ಲ. ಅಂತೆಯೇ, ಹಿರಿಯರು, ನಿಮ್ಮ ಹಿತಚಿಂತಕರು ಹೇಳುವ ಮಾತನ್ನು ನೀವು ಕೇಳಿಸಿಕೊಳ್ಳದಿದ್ದಲ್ಲಿ, ನೀವು ಅವರ ಅನುಭವದ ಮಾತನ್ನ ನಿರ್ಲಕ್ಷ್ಯಿಸಿದಲ್ಲಿ, ಉದ್ಧಾರವಾಗಲು ಸಾಧ್ಯವಿಲ್ಲ.
ಇದನ್ನು ಓದಿ: Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ
ಮೂರನೇಯ ವಿಷಯ, ಕೆಟ್ಟ ಚಟ. ಚಟ ಇದ್ದವನು ಚಟ್ಟದ ಪಾಲು ಅನ್ನೋ ಗಾದೆ ಮಾತಿದೆ. ಅದು ಮದ್ಯಪಾನ, ಧೂಮಪಾನ, ಹೆಣ್ಣಿನ ಚಟ, ಹೀಗೆ ಯಾವುದೇ ಚಟವಾಗಿರಬಹುದು. ಇಂಥ ಚಟವನ್ನು ಮೈಗೂಡಿಸಿಕೊಂಡವನು, ಜೀವನದಲ್ಲೆಂದೂ ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಜೀವನ ಹಾಳು ಮಾಡುವ ಕೆಟ್ಟ ಚಟದಿಂದ ಇಂದಿನ ಯುವ ಪೀಳಿಗೆ ದೂರವಿರಬೇಕು ಅಂತಾ ಚಾಣಕ್ಯರು.
ಇದನ್ನು ಓದಿ: Recipe: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬೆಳ್ಳುಳ್ಳಿ ರಸಮ್
ನಾಲ್ಕನೇಯ ವಿಷಯ, ಕೆಟ್ಟ ಜನರ ಸಹವಾಸವನ್ನು ಬಿಡಬೇಕು. ನಾವು ಯಾರದ್ದಾದರೂ ಸಹವಾಸ ಮಾಡುವ ಮುನ್ನ ಅವರು ಕೆಟ್ಟವರೋ, ಒಳ್ಳೆಯವರೋ ಗೊತ್ತಾಗುವುದಿಲ್ಲ. ಆದ್ರೆ ಕೆಲ ದಿನಗಳಲ್ಲೇ ಅವರು ಎಂಥವರು ಅಂತಾ ತಿಳಿಯಬಹುದು. ಹಾಗಾಗಿ ನೀವು ಸಂಗ ಮಾಡಿರುವ ಗೆಳೆಯರು ಕೆಟ್ಟವರಾಗಿದ್ದಲ್ಲಿ, ಅಂಥವರ ಸಂಗ ಬಿಟ್ಟುಬಿಡಿ.
ಇದನ್ನು ಓದಿ: Life Lessons: ಜೀವನದಲ್ಲಿ ಯಶಸ್ವಿಯಾಗ ಬಯಸಿದರೆ ಈ 5 ಸೂತ್ರಗಳನ್ನು ಪಾಲಿಸಿ
ಐದನೇಯ ವಿಷಯ, ಕಾಮ. ನೀವು ವಿದ್ಯೆ ಕಲಿತು, ಉದ್ಯೋಗ ಮಾಡಿ, ಜೀವನದಲ್ಲಿ ಸೆಟಲ್ ಆದ ಬಳಿಕ, ಮದುವೆಯಾಗಿ, ನಿಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಿ. ಆದ್ರೆ ಅದಕ್ಕೂ ಮುನ್ನ, ಜೀವನದಲ್ಲಿ ಎಡವಬೇಡಿ. ಯಾಕಂದ್ರೆ, ಒಮ್ಮೆ ನಿಮ್ಮ ಹೆಸರು ಹಾಳಾದರೆ, ಅಥವಾ ಒಮ್ಮೆ ನೀವು ಕಾಮದಾಸೆಗೆ ಬಿದ್ರೆ, ಮತ್ತೆ ನೀವು ನಿಮ್ಮ ಗುರಿಯನ್ನು ಮುಟ್ಟಲು ಕಷ್ಟವಾಗುತ್ತದೆ.
ಇದನ್ನು ಓದಿ: Life Lesson: ಅಪ್ಪ ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ ಅಂತಾ ಹೇಳೋದ್ಯಾಕೆ ಗೊತ್ತಾ..?
Discussion about this post