ಹೈದರಾಬಾದ್: ಸಮಂತಾ ರುತ್ ಪ್ರಭು ಜತೆ ವಿವಾಹ ವಿಚ್ಛೇದನ ಘೋಷಿಸಿದ ಒಂದು ತಿಂಗಳ ಬಳಿಕ ತೆಲುಗಿನ ಸ್ಟಾರ್ ನಟ ನಾಗಚೈತನ್ಯ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಮತ್ತೆ ಸಂದೇಶದ ಮೂಲಕ ಕಾಣಿಸಿಕೊಂಡಿದ್ದಾರೆ.
ನಾಗಚೈತನ್ಯ ಅವರು ಟ್ವಿಟರ್ನಲ್ಲಿ ಸಕ್ರಿಯರಾಗಿದ್ದರೂ ಅಕ್ಟೋಬರ್ 2ರ ಬಳಿಕ ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರಲಿಲ್ಲ.
ಹಾಲಿವುಡ್ ನಟ ಮ್ಯಾಥ್ಯೂ ಮೆಕನೌಘೆ ಅವರ ಆತ್ಮಚರಿತ್ರೆ ‘ಗ್ರೀನ್ಲೈಟ್ಸ್’ ಪುಸ್ತಕ ಓದುತ್ತಿರುವುದಾಗಿ ನಾಗಚೈತನ್ಯ ಪೋಸ್ಟ್ ಮಾಡಿದ್ದಾರೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ನಾಗ ಚೈತನ್ಯ ಅವರ ಪೋಸ್ಟನ್ನು ಲೈಕ್ ಮಾಡಿದ್ದಾರೆ.
‘ಜೀವನಕ್ಕೊಂದು ಪ್ರೀತಿಯ ಪತ್ರ… ಜೀವನ ಪಯಣವನ್ನು ಹಂಚಿಕೊಂಡಿದ್ದಕ್ಕಾಗಿ ಮ್ಯಾಥ್ಯೂ ಮೆಕನೌಘೆ ಅವರಿಗೆ ಧನ್ಯವಾದಗಳು. ಈ ಓದು ನನ್ನ ಪಾಲಿಗೆ ಗ್ರೀನ್ಲೈಟ್ ಆಗಿರಲಿದೆ. ನಮನಗಳು ಸರ್!’ ಎಂಬ ಸಂದೇಶದ ಜತೆಗೆ ಪುಸ್ತಕದ ಮುಖಪುಟದ ಚಿತ್ರವನ್ನು ನಾಗಚೈತನ್ಯ ಹಂಚಿಕೊಂಡಿದ್ದಾರೆ.
ನವೆಂಬರ್ 23ರಂದು ನಾಗಚೈತನ್ಯ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅನೇಕರು ಅವರ ಇನ್ಸ್ಟಾಗ್ರಾಂ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೇ ಶುಭಾಶಯವನ್ನೂ ಕೋರಿದ್ದಾರೆ.
ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರು ಅಕ್ಟೋಬರ್ 2ರಂದು ವಿವಾಹ ವಿಚ್ಛೇದನ ಘೋಷಿಸಿಕೊಂಡಿದ್ದರು.
ಇನ್ನಷ್ಟು ಸುದ್ದಿಗಳು…
Kangana Ranaut: ಕಂಗನಾ ವಿರುದ್ಧ ದೇಶದ್ರೋಹದ ದೂರು ದಾಖಲಿಸಿದ ಯುವ ಕಾಂಗ್ರೆಸ್ ಘಟಕ
ಪಿಆರ್ಕೆ 2ನೇ ಇನ್ನಿಂಗ್ಸ್ ಆರಂಭ; ಉತ್ತಮ ಸಿನಿಮಾ ನಿರ್ಮಾಣದ ಭರವಸೆ
Discussion about this post