ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ, ಪುನೀತ್ ಕುಟುಂಬದ ವೈದ್ಯ ರಮಣ್ ರಾವ್ ಅವರ ಕ್ಲಿನಿಕ್, ಮನೆಗೆ ಪೊಲೀಸರು ಭದ್ರತೆ ನೀಡಿದ್ದಾರೆ.
ಶನಿವಾರ ಮತ್ತೊಬ್ಬ ಅಭಿಮಾನಿ ವೈದ್ಯ ರಮಣ್ ರಾವ್ ಅವರನ್ನು ಬಂಧಿಸಿ, ಪುನೀತ್ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಎರಡನೇ ದೂರನ್ನು ದಾಖಲಿಸಿದ್ದಾರೆ. ವೈದ್ಯ ರಮಣ್ ರಾವ್ ಪುನೀತ್ ಅವರಿಗೆ ಯಾವ ರೀತಿ ಚಿಕಿತ್ಸೆ ನೀಡಿದ್ದಾರೆ, ವಿಕ್ರಮ್ ಆಸ್ಪತ್ರೆಗೆ ಕರೆದು ಕೊಂಡು ಹೋಗುವಂತೆ ತಡವಾಗಿ ಏಕೆ ಹೇಳಿದರು, ಪುನೀತ್ ಅವರು ಹುಷಾರು ತಪ್ಪಲು ನಿಜವಾದ ಕಾರಣ ಏನು ಎಂದು ಅರುಣ್ ಕುಮಾರ್ ಎಂದು ಹೇಳಿಕೊಂಡಿರುವ ಅಭಿಮಾನಿ ಗುರುವಾರದ ಠಾಣೆಗೆ ನೀಡಿರುವ ದೂರಿನಲ್ಲಿ ಪ್ರಶ್ನಿಸಿದ್ದಾರೆ.
ಕೆಲ ಅಭಿಮಾನಿಗಳು ಪುನೀತ್ ಅವರ ಸಾವಿನಿಂದ ಬೇಸತ್ತು ವೈದ್ಯರ ಮನೆ, ಕ್ಲಿನಿಕ್ ಮುಂದೆ ಪ್ರತಿಭಟನೆ ನಡೆಸುವ ಮಾಹಿತಿ ಪೊಲೀಸರಿಗೆ ದೊರೆತಿದೆ. ಹೀಗಾಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ರಮಣ್ ರಾವ್ ಅವರಿಗೆ ಭದ್ರತೆ ಒದಗಿಸಿದ್ದಾರೆ.
ಈ ಬಗ್ಗೆ ವೈದ್ಯ ರಮಣ್ ರಾವ್ ಪ್ರತಿಕ್ರಿಯಿಸಿ, ಪುನೀತ್ ಆಸ್ಪತ್ರೆಗೆ ಬಂದಾಗ ಆರೋಗ್ಯವಾಗಿಯೇ ಇದ್ದರು. ಅನುಮಾನ ಬೇಡ ಎಂದು ಇಸಿಜಿ ಮಾಡಿದೆವು. ಅದರಲ್ಲಿ ಲಘುಹೃದಯಾಘಾತದ ಲಕ್ಷಣಗಳು ಕಂಡ ಬಂದಿದ್ದರಿಂದ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವ ಸಲಹೆ ನೀಡಿದೆವು ಎಂದು ಹೇಳಿದ್ದಾರೆ. ಪುನೀತ್ ನನ್ನ ಮಗನಿದ್ದಂತೆ. ನಮ್ಮ ಸಂಬಂಧ 35 ವರ್ಷಗಳಿಗಿಂತ ಹಳೆಯದು. ನನ್ನ ಮಗನ ಆರೋಗ್ಯ ವಿಚಾರದಲ್ಲಿ ನನ್ನಿಂದ ಯಾವುದೇ ರೀತಿಯ ಲೋಪವಾಗಿಲ್ಲ ಎಂದು ತಿಳಿಸಿದ್ದಾರೆ.
Police Protection to Dr Ramana Rao
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಸಮಾಧಿಗೆ ಹಾಲು-ತುಪ್ಪ ವಿಧಿವಿಧಾನ ಕಾರ್ಯ
Discussion about this post