ತಮ್ಮ ವೈವಾಹಿಕ ಜೀವನದ ದೊಡ್ಡ ನಿರ್ಧಾರವನ್ನು ಸಮಂತಾ ಹಾಗೂ ನಾಗಚೈತನ್ಯ ಇತ್ತೀಚೆಗೆ ಪ್ರಕಟಪಡಿಸಿ ಪರಸ್ಪರ ಒಪ್ಪಿ ವಿವಾಹ ಬಂಧನದಿಂದ ಹೊರಬಂದಿದ್ದರು. ಈ ಸಂಬಂಧ ತಮ್ಮ ಗೌರವಕ್ಕೆ ಚ್ಯುತಿ ಬರುವಂಥ ಮಾಹಿತಿಯನ್ನು ಪ್ರಸಾರ ಮಾಡಿದ ಕೆಲ ಯು-ಟ್ಯೂಬ್ ಚಾನಲ್ಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ದಕ್ಷಿಣಭಾರತದ ಜನಪ್ರಿಯ ನಟಿ ಸಮಂತಾ ರುಥ್ ಪ್ರಭು ಅವುಗಳ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದಾರೆಂದ ವರದಿಯಾಗಿದೆ.
ನಾಗಚೈತನ್ಯರೊಂದಿಗಿನ ತಮ್ಮ ವಿವಾಹ ಸಂಬಂಧದಿಂದ ಹೊರಬರುವ ವಿಷಯವನ್ನು ಬಹಿರಂಗಪಡಿಸಿದಾಗ ಅವರ ವೈಯಕ್ತಿಕ ಜೀವನದ ಮುಂದಿನ ನಡೆಗಳ ಬಗ್ಗೆ ಮಾಧ್ಯಮಗಳಲ್ಲಿ ಅನೇಕ ಊಹಾಪೋಹಗಳ ವರದಿಗಳು ಪ್ರಕಟವಾಗಲು ಪ್ರಾರಂಭವಾದವು. ಅನೇಕ ಯು-ಟ್ಯೂಬ್ ಚಾನಲ್ಗಳು ತಮ್ಮ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಸುದ್ದಿಯ ವರದಿ ಮಾಡಲು ಪ್ರಾರಂಭ ಮಾಡಿದವಲ್ಲದೇ ಕೆಲವು ಚಾನಲ್ಗಳು ತಮ್ಮ ಎಲ್ಲೆ ಮೀರಿದ ವರದಿಗಾರಿಕೆಯಿಂದ ಸಮಂತಾರ ಘನತೆಗೆ ಕುಂದು ತರುವಂತಹ ಊಹಾಪೋಹಗಳಿಂದ ಕೂಡಿದ ಇಲ್ಲಸಲ್ಲದ ವರದಿಗಳನ್ನು ಪ್ರಸಾರಮಾಡಿದ್ದವು.
ಸುಮನ್ ಟಿವಿ ಹಾಗೂ ತೆಲುಗು ಪಾಪ್ಯುಲರ್ ಟಿವಿ ಸೇರಿದಂತೆ ಇನ್ನೂ ಕೆಲವು ಚಾನಲ್ಗಳು ಇಂತಹ ಕೃತ್ಯದಲ್ಲಿ ತೊಡಗಿದ್ದು ಇವುಗಳ ಮೇಲೆ ಸಮಂತಾ ಮಾನನಷ್ಟ ಮೊಕದ್ದಮೆಗಳನ್ನು ಹೂಡಿದ್ದು ಸದ್ಯದಲ್ಲೇ ಇವರಿಗೆ ನೋಟೀಸ್ಗಳು ತಲುಪಲಿವೆಯೆಂದು ವರದಿ ತಿಳಿಸಿದೆ. ವೆಂಕಟರಾವ್ ಹೆಸರಿನ ಲಾಯರ್ ಮೇಲೆ ಸಹ ಸಮಂತಾ ಅವರ ವೈವಾಹಿಕ ಜೀವನ ಹಾಗೂ ಪ್ರೇಮ ವ್ಯವಹಾರಗಳ ಬಗ್ಗೆ ಮಾತನಾಡಿದ ಆರೋಪವಿದ್ದು ಅವರ ವಿರುದ್ಧ ಕೂಡ ಸಮಂತಾ ಕಾನೂನು ಕ್ರಮ ಕೈಗೊಂಡಿದ್ದಾರೆಂದು ವರದಿ ತಿಳಿಸಿದೆ.
ತಮ್ಮ ಮೇಲೆ ಮಾಡಲಾದ ಎಲ್ಲಾ ಆರೋಪಗಳನ್ನು ಸಮಂತಾ ಈಗಾಗಲೇ ನಿರಾಕರಿಸಿದ್ದು ತಮ್ಮ ಬೆಂಬಲಕ್ಕೆ ನಿಂತ ಚಾನಲ್ಗಳಿಗೆ ಟ್ವೀಟ್ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. ನನಗೆ ವಿವಾಹೇತರ ಪ್ರೇಮ ವ್ಯವಹಾರಗಳಿವೆಯೆಂದರು, ಮಕ್ಕಳಾಗುವುದು ಇಷ್ಟವಿರಲಿಲ್ಲ ಎಂದರು, ನನಗೆ ಗರ್ಭಪಾತಗಳಾಗಿವೆಯೆಂದರು, ಅಲ್ಲದೇ ನಾನೊಬ್ಬಳು ಅವಕಾಶವಾದಿಯೆಂದರು. ವಿಚ್ಛೇದನವೆಂಬುದು ಅತ್ಯಂತ ನೋವಿನ ವಿಚಾರವಾಗಿದ್ದು ಅದರೊಂದಿಗೆ ಇಂತಹ ಮಾತುಗಳನ್ನೂ ನಾನು ಕೇಳಬೇಕಾಯಿತು. ನನ್ನ ನೋವಿನಿಂದ ಹೊರಬರಲೂ ಸಮಯವನ್ನು ನೀಡದೇ ಒಂದರ ಹಿಂದೆ ಒಂದರಂತೆ ಮಿಥ್ಯಾರೋಪಗಳನ್ನು ಹೊರಿಸುತ್ತಲೇ ಹೋದರು. ಅದರೆ ಇದಾವುದೂ ನನ್ನನ್ನು ವಿಚಲಿತಳನ್ನಾಗಿಸವು. ನಾನು ಇದೆಲ್ಲವನ್ನೂ ಎದುರಿಸಿ ಇವುಗಳಿಂದ ಹೊರಬರುತ್ತೇನೆಂದು ಸಮಂತಾ ತಿಳಿಸಿದ್ದಾರೆ.
Samanta files defamation cases against some youtube channels who had published speculative content about her personal life
ಇದನ್ನೂ ಓದಿ: Viral: ನನಗೆ ಅಫೇರ್ ಇತ್ತು, ಅಬಾರ್ಶನ್ ಮಾಡಿಸಿದ್ದೆ ಎಂದೆಲ್ಲಾ ದೂರಿದ್ದರು: ಸಮಂತಾ ಭಾವುಕ ಪೋಸ್ಟ್
ಇದನ್ನೂ ಓದಿ: 200 ಕೋಟಿ ಜೀವನಾಂಶಕ್ಕೆ ಸಮಂತಾ ತಿರಸ್ಕಾರ
Discussion about this post