ಹೈದರಾಬಾದ್: ಇತ್ತೀಚೆಗೆ ನಾಗಚೈತನ್ಯರೊಂದಿಗಿನ ವೈವಾಹಿಕ ಸಂಬಂಧದಿಂದ ಹೊರಬಂದಿರುವ ಸಮಂತಾ ಮಾನಸಿಕ ನೆಮ್ಮದಿಗಾಗಿ ದೇವರ ಮೊರೆ ಹೋಗಲಿದ್ದಾರೆ. ತಮ್ಮ ಕಷ್ಟದ ಸಮಯದಲ್ಲಿ ಆಸರೆಯಾಗಿ ನಿಂತಿರುವ ಗೆಳತಿ ಶಿಲ್ಪ ರೆಡ್ಡಿಯವರ ಕುಟುಂಬದೊಂದಿಗೆ ಹೆಚ್ಚಿನ ಆತ್ಮೀಯತೆ ಬೆಳೆಸಿಕೊಂಡಿರುವ ಸಮಂತಾ ತಮ್ಮ ಗೆಳತಿಯೊಂದಿಗೆ ಉತ್ತರಾಖಂಡದ ಪ್ರವಾಸ ಕೈಗೊಂಡಿದ್ದಾರೆ.
ಈ ಪ್ರವಾಸದಲ್ಲಿ ಹಿಮಾಲಯದ ತಪ್ಪಲಿನ ರಾಜ್ಯದ ಅನೇಕ ದೇವಸ್ಥಾನಗಳ ದರ್ಶನ ಪಡೆಯಲಿರುವ ಸಮಂತಾ ಇದರ ಪ್ರಥಮ ಹಂತವಾಗಿ ಹೆಲಿಕ್ಯಾಪ್ಟರ್ನಲ್ಲಿ ಯಮುನೋತ್ರಿಯನ್ನು ತಲುಪಲಿದ್ದು ಇದು ಪವಿತ್ರ ಚಾರ್ಧಾಮ್ ಯಾತ್ರೆಯ ಭಾಗವಾಗಿದೆ.
ತಮ್ಮ ವಿಚ್ಛೇದನದ ವಿಷಯವನ್ನು ಘೋಷಿಸುವುದಕ್ಕೂ ಮೊದಲು ಸಮಂತಾ ತಿರುಪತಿಯಲ್ಲಿ ದೇವರ ದರ್ಶನ ಪಡೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದ್ದು ಅವರು ಇತ್ತೀಚೆಗೆ ನೆಮ್ಮದಿಗಾಗಿ ಆಧ್ಯಾತ್ಮದತ್ತ ಮುಖ ಮಾಡಿರುವಂತೆ ತೋರುತ್ತಿದೆ.
Samantha embarks upon a religious trip to visit temples in Uttarakhand in search of peace
ಇದನ್ನೂ ಓದಿ: ಎಲ್ಲೆಮೀರಿ ವರ್ತಿಸಿದ ಯು-ಟ್ಯೂಬ್ ಚಾನಲ್ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಸಮಂತಾ
ಇದನ್ನೂ ಓದಿ: Samantha Divorce: ಚಿತ್ರರಂಗದಲ್ಲಿ ಸದ್ದು ಮಾಡಿದ ಐದು ವಿಚ್ಛೇದನಗಳು, ಪ್ರತಿಸಲವೂ ಹೆಣ್ಣಿನ ಮೇಲೆ ದೋಷಾರೋಪ ಏಕೆ?
Discussion about this post