• Home
  • About Us
  • Contact Us
  • Terms of Use
  • Privacy Policy
Tuesday, June 17, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result
Shri News
No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಸೊಕ್ಕಿನ ಮಾತನ್ನಾಡಿದ್ದ ವಿದೇಶಿ ಉದ್ಯಮಿಗೆ ರತನ್ ಕೊಟ್ಟ ತಿರುಗೇಟು ಎಂಥದ್ದು..? ಟಾಟಾ ಜೀವನದ ರೋಚಕ ಕಥೆ

News Desk by News Desk
May 14, 2024, 09:32 pm IST
in ರಾಷ್ಟ್ರೀಯ
Share on FacebookShare on TwitterTelegram

Business And Biography: ಜೀವನದಲ್ಲಿ ಏರುಪೇರುಗಳಿದ್ದರೇನೇ ಜೀವನ ಉತ್ತಮವಾಗಿರುತ್ತದೆ. ಯಾಕಂದ್ರೆ ಈಸಿಜಿಯಲ್ಲಿ ಲೈನ್ ಸ್ಟ್ರೇಟ್ ಆಗಿದ್ದರೆ ಸಾವು ಎಂದರ್ಥ. ಈ ಮಾತನ್ನ ಹೇಳಿದವರು, ಪದ್ಮ ವಿಭೂಷಣ, ಶ್ರೀಮಂತ ಉದ್ಯಮಿ ರತನ್ ಟಾಟಾ. ಟಾಟಾ ಸಂಸ್ಥೆಯನ್ನ ಉನ್ನತ ಮಟ್ಟಕ್ಕೆ ತಂದು ನಿಲ್ಲಿಸಿರುವ ರತನ್ ಟಾಟಾ ಜೀವನದ ರೋಚಕ ಕಥೆಯನ್ನ ನಾವಿವತ್ತು ಹೇಳಲಿದ್ದೇವೆ.

ಡಿಸೆಂಬರ್ 28 , 1937ಕ್ಕೆ ಮುಂಬೈನ ಪಾರ್ಸಿ ಕುಟುಂಬದಲ್ಲಿ ರತನ್ ನವಲ್ ಟಾಟಾ ಜನನವಾಯಿತು. ಟಾಟಾ ಕಂಪನಿಯನ್ನ ಹುಹಾಕಿದ್ದ ಜಮ್‌ಶೇಟ್‌ಜೀ ಟಾಟಾರ ಮೊಮ್ಮಗನೇ ರತನ್ ಟಾಟಾ. ರತನ್‌ರ ತಂದೆ ನವಲ್ ಟಾಟಾ, ಟಾಟಾ ಆಯಿಲ್ ಮಿಲ್‌ನ ಎಂ.ಡಿಯಾಗಿದ್ದರು. ತಾಯಿ ಸೋನೂ ಟಾಟಾ ಗೃಹಿಣಿಯಾಗಿದ್ದರು. ರತನ್‌ಗೆ 10 ವರ್ಷವಿದ್ದಾಗ, ನವಲ್ ಮತ್ತು ಸೋನು ವಿಚ್ಛೇದನ ಪಡೆದರು. ನವಲ್ ಟಾಟಾ ಸಿಮೋನ್ ಟಾಟಾರನ್ನ ವಿವಾಹವಾದರು. ಹೀಗಾಗಿ ರತನ್ ಅಜ್ಜಿಯ ಪಾಲನೆ ಪೋಷಣೆಯಲ್ಲಿ ಬೆಳೆದರು.

ಮುಂಬೈ ಮತ್ತು ಶಿಮ್ಲಾದ ಕಾಲೇಜಿನಲ್ಲಿ ಶಾಲಾ- ಕಾಲೇಜು ಶಿಕ್ಷಣ ಮುಗಿಸಿದ ರತನ್ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾ ತೆರಳಿದರು. ಅಲ್ಲಿ ಶಿಕ್ಷಣ ಪಡೆಯುತ್ತ, ಹೊಟೇಲ್‌ನಲ್ಲಿ ಪಾತ್ರೆ ತೊಳೆಯುವ ಕೆಲಸ ಕೂಡ ಮಾಡುತ್ತಿದ್ದರು. 1959ರಲ್ಲಿ ರತನ್‌ಗೆ ಅಮೆರಿಕಾ ಕಾಲೇಜಿನಿಂದ ಬ್ಯಾಚುಲರ್ ಇನ್ ಆರ್ಕಿಟೆಕ್ಟರ್ ಡಿಗ್ರಿ ಸಿಕ್ಕಿತು. ಇದಾದ ಬಳಿಕ ಭಾರತಕ್ಕೆ ಬಂದು ಕೆಲ ವರ್ಷಗಳ ಕಾಲ ಟಾಟಾ ಗ್ರೂಪ್‌ನ ಹಲವು ಕಂಪನಿಗಳಲ್ಲಿ ರತನ್ ಕೆಲಸ ಮಾಡಿದರು.

1971ರಲ್ಲಿ ಟಾಟಾ ಗ್ರೂಪ್‌ನ ನೆಲ್ಕೋ ಕಂಪನಿಯ ಜವಾಬ್ದಾರಿ ನೀಡಲಾಯಿತು. ಈ ಕಂಪನಿಯಲ್ಲಿ ಟಿವಿ ಮತ್ತು ರೇಡಿಯೋವನ್ನ ತಯಾರಿಸಲಾಗುತ್ತಿತ್ತು. ಬರೀ 3 ವರ್ಷದಲ್ಲಿ ಈ ಕಂಪನಿಯನ್ನ ಉನ್ನತ ಮಟ್ಟಕ್ಕೆ ತಂದು ನಿಲ್ಲಿಸುವಲ್ಲಿ ರತನ್ ಯಶಸ್ವಿಯಾದರು. ಆದರೆ, ಕೆಲ ತಿಂಗಳ ಬಳಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ನೆಲ್ಕೋ ಕಂಪನಿಯನ್ನ ಮುಚ್ಚಲಾಯಿತು.

1975ರಲ್ಲಿ ಹಾರ್ವರ್ಡ್ ಯುನಿವರ್ಸಿಟಿಯಿಂದ ರತನ್ ಮ್ಯಾನೇಜ್‌ಮೆಂಟ್ ಡಿಗ್ರಿ ಪಡೆದರು. ಈ ಹಿಂದೆ ನೆಲ್ಕೋ ಕಂಪನಿಯನ್ನ ನಡೆಸಲು ಸಫಲನಾಗಿದ್ದ ರತನ್‌ಗೆ, ಈ ಬಾರಿ ಟಾಟಾ ಎಕ್ಸ್‌ಪ್ರೆಸ್ ಮಿಲ್ ಸಂಭಾಳಿಸುವ ಜವಾಬ್ದಾರಿ ಸಿಕ್ಕಿತ್ತು. ಯಾಕಂದ್ರೆ ಅದು ಮುಚ್ಚುವ ಹಂತ ಬಂದು ತಲುಪಿತ್ತು. ಆ ನಷ್ಟವನ್ನ ಸರಿದೂಗಿಸಿ, ಲಾಭ ತಂದುಕೊಡುತ್ತಾರೆಂದು ರತನ್‌ ಮೇಲೆ ಕಂಪನಿಗೆ ನಂಬಿಕೆಯಿತ್ತು. ಇದಕ್ಕಾಗಿ ರತನ್ 50 ಲಕ್ಷ ರೂಪಾಯಿ ಬಂಡವಾಳ ಹೂಡಿದ್ರೆ, ಕಂಪನಿಯ ನಷ್ಟ ಸರಿದೂಗಿಸಬಹುದು ಎಂದರು. ಆದ್ರೆ ಬಂಡವಾಳ ಹಾಕಲು ಕಂಪನಿ ನಿರಾಕರಿಸಿದ್ದರಿಂದ ಆ ಕಂಪನಿ ಸಹ ಬಂದ್ ಆಯಿತು.

ಎರಡನೇ ಬಾರಿಯೂ ರತನ್ ಸೋತಿದ್ದರು. ಕಂಪನಿಯ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಆದೂ ಕೂಡ ಛಲ ಬಿಡದ ರತನ್, ತಮ್ಮ ತಪ್ಪಿನಿಂದ ಪಾಠ ಕಲಿತರು. 1981ರಲ್ಲಿ ರತನ್‌ರನ್ನ ಟಾಟಾ ಇಂಡಸ್ಟ್ರಿಯ ಅಧ್ಯಕ್ಷನನ್ನಾಗಿ ನೇಮಿಸಲಾಯಿತು. 1991ರಲ್ಲಿ ಟಾಟಾ ಗ್ರೂಪ್‌ನ ಚೇರಮನ್ ಮಾಡಲಾಯಿತು.

ಇದಾದ ಬಳಿಕ ಉದ್ಯಮದಲ್ಲಿ ಪಳಗಿದ್ದ ರತನ್ ಟಾಟಾ ಕಂಪನಿಯನ್ನ ಉತ್ತಮವಾಗಿ ನಿಭಾಯಿಸಿಕೊಂಡು ಬಂದರು. ಬರೀ ಟ್ರಕ್, ಟೆಂಪೋ ಹೊಂದಿದ್ದ ಟಾಟಾ ಕಂಪನಿಯಲ್ಲಿ ಕಾರ್ ಸಹ ಬಂತು. ಟಾಟಾ ಕಂಪನಿಯ ಇಂಡಿಕಾ ಕಾರ್, ಲಕ್ಸೂರಿಯಸ್ ಕಾರ್ ಆಗಿತ್ತು. ರತನ್‌ರ ಡ್ರೀಮ್ ಪ್ರಾಜೆಕ್ಟ್ ಆಗಿದ್ದ ಇಂಡಿಕಾ ಕಾರ್‌ ಉದ್ಯಮ ಉತ್ತಮವಾಗಿಯೇ ಸಾಗಿತ್ತು. ಆದ್ರೆ ಕಂಪನಿಯಲ್ಲಿರುವ ಕೆಲವರು ಅವವ್ಯಹಾರ ಮಾಡಿದ ಪರಿಣಾಮವಾಗಿ ಇಂಡಿಕಾ ಕಾರ್ ಉದ್ಯಮ ನೆಲಕಚ್ಚಿತು. ಮಾರ್ಕೇಟ್‌ನಲ್ಲಿ ಇಂಡಿಕಾ ಬೇಡಿಕೆ ಕಡಿಮೆಯಾಯಿತು.

ಈ ಮೂಲಕ ನಷ್ಟ ಅನುಭವಿಸಿದ ಟಾಟಾ ಮೋಟರ್ಸ್, ಈ ಕಾರ್ ಉದ್ಯಮವನ್ನ ಬೇರೆಯವರಿಗೆ ವಹಿಸಿಬಿಡುವ ಸಲಹೆ ನೀಡಿತು. ಇದಕ್ಕೆ ಒಪ್ಪಿದ ರತನ್, ಕಾರ್ ಮಾಲೀಕತ್ವವನ್ನ ಫೋರ್ಡ್ ಕಂಪನಿಗೆ ಮಾರುವ ನಿರ್ಧಾರ ಮಾಡಿದರು.ಈ ವೇಳೆ ಮಾತನಾಡಿದ ಫೋರ್ಡ್ ಕಂಪೆನಿ ಮಾಲೀಕ,’ ನಿಮ್ಮ ಕೈಯಲ್ಲಿ ಇಷ್ಟು ದೊಡ್ಡ ಉದ್ಯಮ ಮಾಡಲು ಅಸಾಧ್ಯವಾಗಿದ್ದಲ್ಲಿ, ನಿಮಗೆ ಈ ಉದ್ಯಮ ನಡೆಸುವ ಅರ್ಹತೆ ಇಲ್ಲದಿದ್ದಲ್ಲಿ ಯಾಕೆ ಈ ಉದ್ಯಮ  ಶುರು ಮಾಡಿದ್ರಿ. ನಾವು ನಿಮ್ಮ ಕಾರ್ ಮಾಲೀಕತ್ವ ತೆಗೆದುಕೊಂಡು ಉಪಕಾರ ಮಾಡುತ್ತಿದ್ದೇವೆ’ ಎಂದು ಸೊಕ್ಕಿನ ಮಾತನ್ನಾಡಿದರು.

ಇದಕ್ಕೆ ಬೇಸರಗೊಂಡ ರತನ್, ಈ ಮಾತಿಗೆ ಸಫಲತೆಯ ಪ್ರತೀಕಾರ ತೆಗೆದುಕೊಳ್ಳಲೇಬೇಕೆಂದು ನಿರ್ಧರಿಸಿದರು. ಇಂಡಿಕಾ ಕಾರ್ ಮಾಲೀಕತ್ವ ತಾವೇ ನಿಭಾಯಿಸಲು ನಿರ್ಧರಿಸಿದರು.  ಹಲವು ವರ್ಷಗಳ ಪ್ರಯತ್ನದಿಂದ ರತನ್ ಟಾಟಾ ಮೋಟರ್ಸ್‌ ಕಂಪನಿಯನ್ನ ಮತ್ತೆ ಉನ್ನತಮಟ್ಟಕ್ಕೆ ಕೊಂಡೊಯ್ದರು. ಈ ಮೂಲಕ ಫೋರ್ಡ್‌ ಕೊಂಕು ಮಾತಿಗೆ ಜವಾಬ್ ನೀಡಿದರು.

ಈ ಜವಾಬ್ ಹೇಗಿತ್ತೆಂದರೆ, ಫೋರ್ಡ್ ಕಂಪನಿ ನಷ್ಟ ಅನುಭವಿಸಿ, ದೀವಾಳಿಯಾಗತೊಡಗಿತ್ತು. ಫೋರ್ಡ್ ಕಂಪೆನಿಯ ಭಾಗವಾಗಿದ್ದ ಜಾಗ್ವಾರ್ ಮತ್ತು ಲ್ಯಾಂಡರೋವರ್‌ ಕಾರನ್ನ ಮಾರುವ ಸ್ಥಿತಿ ತಲುಪಿತ್ತು. ಇದನ್ನ ಕೊಂಡುಕೊಳ್ಳಲು ರತನ್ ಮುಂದಾಗಿದ್ದರು. ಫೋರ್ಡ್ ಕಂಪನಿ ಮಾಲೀಕ ಮತ್ತು ರತನ್ ಮತ್ತೆ ಭೇಟಿಯಾದರು. ಅಂದು ಫೋರ್ಡ್ ಮಾಲೀಕ ಮಾತನಾಡಿದ್ದಂತೆ ರತನ್ ಕೂಡ ಕೊಂಕು ನುಡಿಯಬಹುದಾಗಿತ್ತು. ಆದ್ರೆ ರತನ್ ಹಾಗೇ ಮಾಡಲಿಲ್ಲ. ಬದಲಾಗಿ ಫೋರ್ಡ್ ಮಾಲೀಕನೇ, ನೀವು ನಮ್ಮ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಾರ್‌ಗಳನ್ನ ಕೊಂಡು ನಮಗೆ ಉಪಕಾರ ಮಾಡುತ್ತಿದ್ದೀರಿ ಎಂದು ಹೇಳಿದರು. ಸಫಲತೆ ಅಂದ್ರೆ ಇದೇ ಅಲ್ವಾ..?

ಈ ಸಫಲತೆ ಹೀಗೆ ಮುಂದುವರೆಯಿತು. ನಡು ನಡುವೆ ನಷ್ಟ ಕೂಡ ಅನುಭವಿಸುವಂತಾಯಿತು. ನಂತರ ಆನ್‌ಲೈನ್ ಆ್ಯಪ್‌ಗಳನ್ನ ತೆರೆದು, ರತನ್ ಉದ್ಯಮ ಆರಂಭಿಸಿದರು. ನಾವೆಲ್ಲ ಉಪಯೋಗಿಸುವ ಪೇಟಿಎಂ, ಓಲಾ, ಲೆನ್ಸ್‌ಕಾರ್ಟ್, ಜಿವಾಮೆ, ಸ್ನ್ಯಾಪ್ ಡೀಲ್ ಇತ್ಯಾದಿ ಆನ್‌ಲೈನ್ ಆ್ಯಪ್‌ಗಳು ಟಾಟಾ ಕಂಪನಿಗೆ ಸೇರಿದ್ದು.

ತಂದೆ ತಾಯಿಯ ಸಂಬಂಧ ಕಂಡೋ ಅಥವಾ ಉದ್ಯಮದಲ್ಲಿ ಉನ್ನತ ಸಾಧನೆ ಮಾಡಬೇಕು ಅನ್ನೋ ಕಾರಣಕ್ಕೋ ಗೊತ್ತಿಲ್ಲ. ರತನ್ ಅವಿವಾಹಿತರಾಗಿಯೇ ಉಳಿದಿದ್ದಾರೆ. ಕೆಲ ಸುದ್ದಿಯ ಪ್ರಕಾರ ರತನ್ ವಿದೇಶಿ ಯುವತಿಯನ್ನು ಪ್ರೀತಿಸಿದ್ದರಂತೆ. ಆದ್ರೆ ಆಕೆಯ ಅಪ್ಪ ಅಮ್ಮ ಆಕೆ ರತನ್‌ರೊಂದಿಗೆ ಭಾರತಕ್ಕೆ ಬರುವುದನ್ನ ಒಪ್ಪಲಿಲ್ಲವಂತೆ. ಈ ಕಾರಣಕ್ಕೆ ರತನ್ ಬೇರೆ ಯಾರನ್ನೂ ವಿವಾಹವಾಗಲು ಇಷ್ಟಪಟ್ಟಿಲ್ಲ ಅಂತಾ ಹೇಳಲಾಗುತ್ತದೆ. ಅವರು ಪ್ರಾಣಿಪ್ರಿಯ ಮತ್ತು ಪುಸ್ತಕಪ್ರಿಯರಾಗಿದ್ದು, ಉದ್ಯಮ ನಿಭಾಯಿಸುವಲ್ಲಿಯೂ ನಿರತರಾಗಿದ್ದಾರೆ. ದೇಶ ವಿದೇಶಗಳಲ್ಲಿ ನೂರಕ್ಕೂ ಹೆಚ್ಚು ಕಂಪನಿ ನಡೆಸುತ್ತಿರುವ ಟಾಟಾ ಗ್ರೂಪ್‌ ಹಲವಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದೆ. ಇಷ್ಟೇ ಅಲ್ಲದೇ, ರತನ್ ಟಾಟಾ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.

Prajwal case: ರೇವಣ್ಣ, ಪ್ರಜ್ಜಣ್ಣ ನನಗೇನೂ ಮಾಡಿಲ್ಲ, ನಾನು ಆರಾಮಾಗಿದ್ದೇನೆ, ನೆಂಟರ ಮನೆಯಲ್ಲಿದ್ದೇನೆ: ಸಂತ್ರಸ್ತೆ

Spiritual: ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರಿಗೆ ಎಂದೂ ಸೋಲಿಲ್ಲ.. ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ..

Tags: Anitha kumaraswamyBhavani RevannabjpBusiness And BiographyCongressD K ShivakumarD.K.SureshH.D. KumaraswamyH.D.DevegowdaH.D.RevannaHassanJDSMallikarjun KhargeNational partyNikhil KumaraswamyPM Modiprajwal Revannapreetham gowdaRahul GandhiRatan TataSiddaramaiahSonia GandhiSooraj revannaSwaroop gowda
ShareSendTweetShare
Join us on:

Related Posts

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?

National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ಮಾಯಾವತಿ

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ಮಾಯಾವತಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Two killed: ಬೈಕ್‌ಗೆ ಮಹೀಂದ್ರಾ ಪಿಕಪ್ ಡಿಕ್ಕಿ ಇಬ್ಬರು ಸಾವು

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ

ಅಂಗಡಿ ಮಾಲೀಕರೇ ಇಂಥವರ ವರ್ತನೆ ಗಮನಿಸಿ: ಇಲ್ಲವಾದ್ದಲ್ಲಿ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು..!

Money Mantra: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಚಿಕ್ಕ ಮಕ್ಕಳನ್ನು ಸ್ಕೂಟಿಯಲ್ಲಿ ಕೂರಿಸುವ ಸುಲಭ ಉಪಾಯ

ಸಧೃಡ, ಉದ್ದ ಕೂದಲಿಗಾಗಿ ಇದನ್ನು ಬಳಸಿ: ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಿರಿ

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಹೀಗೆ ಮಾಡಿದರೆ ಏನಾಗುತ್ತದೆ..?

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Tech News: ಅಮ್ಮಂದಿರಿಗೆ ನಾವು ಈ ರೀತಿಯ ಉಡುಗೊರೆಗಳನ್ನು ನೀಡಬಹುದು

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

Money Mantra: ದುಡ್ಡು ಉಳಿಸಬೇಕು ಅಂದ್ರೆ ನಿಮ್ಮ ಜೀವನದಿಂದ ಇದನ್ನು ಡಿಲೀಟ್ ಮಾಡಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In