ಭುವನೇಶ್ವರ: ಕಟಕ್ ಬಳಿ ಮುಂಡಲಿ ಬ್ಯಾರೇಜ್ ಮಹಾನದಿಯ ಸ್ಥಳದಲ್ಲಿ ಆನೆ ರಕ್ಷಣೆ ಮಾಡಲು ಹೋಗಿದ ODRF power boat ಪಲ್ಟಿಯಾದ ಕಾರಣ ಓರ್ವ ಪತ್ರಕರ್ತ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ದೂರದರ್ಶನ ಪತ್ರಕರ್ತ ಅರಿಂದರ್ ದಾಸ್ (೩೯) ಅವರು ಒಡಿಶ ವಿಪತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಹಾಗೂ ಕ್ಯಾಮೆರಾ ಪತ್ರಕರ್ತ ರ ಜೊತೆಗೆ ಪವರ್ ಬೋಟ್ ನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದರು.
ನದಿಯಲ್ಲಿ ಬಲವಾದ ಪ್ರವಾಹ ಬಂದಿದ್ದು ಬೋಟ್ ಪಲ್ಟಿ ಆಗಿತ್ತು. ನದಿ ನೀರಿನಿಂದ ತೆಗೆದಾಗ ದಾಸ್ ಮತ್ತು ಪತ್ರಕರ್ತರು, ODRF ಸಿಬ್ಬಂದಿ ಜೊತೆ ಗಂಭೀರ ಸ್ಥಿತಿಯಲ್ಲಿ ಇದ್ದರು ಎನ್ನಲಾಗಿದೆ. ಕಟಕ್ ನ ಎಸ್ ಸಿ ಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (Seb medical college) ಸೇರಿಸಲಾಗಿತ್ತು. ಒಂದು ಗಂಟೆಗೂ ಹೆಚ್ಚುಕಾಲ ಅರಿಂದರ್ ಅವರನ್ನು ಬದುಕಿಸಲು ನಡೆಸಿದ ಪ್ರಯತ್ನ ವಿಫಲವಾಯಿತು ಎಂದು SCB ಅಧೀಕ್ಷಕಭುವಾನಂದ ಮೊಹರಾನಾ ಸುದ್ದಿಗಾರರಿಗೆ ತಿಳಿಸಿದರು.
ದಾಸ್ ಸಹೋದ್ಯೋಗಿ ಸ್ಥಿತಿ ಗಂಭೀರವಾಗಿ ಇದ್ದು ಐಸಿಯು ಚಿಕಿತ್ಸೆ ನಡೆಯುತ್ತಿದೆ. ದಾಸ್ ಜನಪ್ರಿಯ ವರದಿಗರರಾಗಿದ್ದರು. ಅವರು ಮಗ, ಪತ್ನಿ, ತಾಯಿಯನ್ನು ಅಗಲಿದ್ದಾರೆ. ಒಡಿಶಾದ ಪ್ರಮುಖ ಟಿವಿ ಸುದ್ದಿ ಚಾನಲ್ ಒಟಿವಿಯ ಮುಖ್ಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಫಲಿನ್, ಫಾನಿ ಚಂಡಮಾರುತದ ವರದಿ ಮಡಿದ್ದರು, ನಕ್ಸಲ್ ಚಟುವಟಿಕೆ ಕುರಿತು ವರದಿ ಮಾಡಿದ್ದರು. ಅಪರಾಧ, ಅರಣ್ಯ, ವನ್ಯಜೀವಿ ಕುರಿತು ವರದಿ ಮಾಡಿದ್ದರು.

























Discussion about this post