ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರಿನಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಕಾರು ಮಹಿಳೆಗೆ ಡಿಕ್ಕಿ ಹೊಡೆದು, ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಮಹಿಳೆ ಮತ್ತು ಆಕೆಯ ಮಗ ನಡೆದುಕೊಂಡು ಬರುವಾಗ ಕಾರ್ ಚಾಲಕ ಅಪಘಾತ ಮಾಡಿದ್ದು, ಸಾವನ್ನಪ್ಪಿದ ಮಹಿಳೆಯ ಮಗನಿಗೂ ಗಂಭೀರವಾಗಿ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
೫೫ ವರ್ಷದ ಹೂವಮ್ಮ ಮೃತ ದುರ್ದೈವಿ. ಮಗನೊಂದಿಗೆ ಬೈಕ್ ನಲ್ಲಿ ಚಲಿಸುವಾಗ ಕುಮಾರಸ್ವಾಮಿ ಕಾರ್ ನೊಂದಿಗೆ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಶಾಸಕರ ಕಾರು ಚಾಲಕ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದು ಈ ದುರ್ಘಟನೆ ನಡೆದಿದೆ.
ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕುಮಾರಸ್ವಾಮಿ ಘಟನೆ ನಡೆದಾಗ ಕಾರ್ ನಲ್ಲಿ ಇರಲಿಲ್ಲ, ಆದರೆ ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

























Discussion about this post