ಚಿಕ್ಕಮಗಳೂರು: ಅಜ್ಜಂಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ೫.೧೦ ಲಕ್ಷ ಮೌಲ್ಯದ ೧೪ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಜ್ಜಂಪುರ ತಾಲ್ಲೂಕು ಗಡಿಗಿರಿಯಪುರದ ತಿಪ್ಪೇಶಯ್ಯ ಎಂಬುವರು ತಮ್ಮ ದ್ವಿಚಕ್ರವಾಹನ ಕಳುವಾಗಿರುವ ಬಗ್ಗೆ ಅಜ್ಜಂಪುರ ಪೋಲೀಸ್ ಠಾಣೆಗೆ ನೀಡಿದ ದೂರನ್ನಾಧರಿಸಿ ಕಾರ್ಯಪ್ರವೃತ್ತರಾದ ಅಜ್ಜಂಪುರ ಪೋಲೀಸ್ ಠಾಣೆಯ ಪಿಎಸ್ಐ ಮಂಜುಳಾಬಾಯಿ ನೇತೃತ್ವದ ಸಿಬ್ಬಂದಿ ಶಿವನಿಯ ಉಮೇಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯು ಬೆಂಗಳೂರಿನಲ್ಲಿ ಕಳ್ಳತನ ಮಾಡಿದ್ದ ೩ ಹೊಂಡಾ ಡಿಯೋ ದ್ವಿಚಕ್ರವಾಹನಗಳು ಹಾಗೂ ವಿವಿಧ ಕಂಪನಿಗಳಿಗೆ ಸೇರಿದ ೧೦ ಮೋಟಾರ್ ಬೈಕ್ಗಳು ಸೇರಿದಂತೆ ಒಟ್ಟು ೧೪ ಬೈಕ್ಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೋಲೀಸ್ ನಿರೀಕ್ಷಕ ಹೆಚ್.ಲಿಂಗರಾಜ್, ಅಪರಾಧ ವಿಭಾಗದ ಪಿಎಸ್ಐ ಮಂಜುಳಾಬಾಯಿ, ಸಿಬ್ಬಂದಿಗಳಾದ ಕೆ.ಕೆ ನಾಗೇಶ್, ಬಸವರಾಜಪ್ಪ, ಶಿವಕುಮಾರ್, ಕಿರಣ್ಕುಮಾರ್, ಪರಮೇಶ್ನಾಯಕ್ ಭಾಗವಹಿಸಿದ್ದು, ಈ ತಂಡದ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹೆಚ್.ಎಂ. ಅಕ್ಷಯ್ ಶ್ಲಾಘಿಸಿ ನಗದು ಪುರಸ್ಕಾರವನ್ನು ಘೋಷಿಸಿದ್ದಾರೆ.

























Discussion about this post