ಬೆಂಗಳೂರು: ಈ ಬಾರಿಯ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಂತ ಪ್ರವೇಶಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಕೊನೆಯ ಹಂತದಲ್ಲಿ ಎಡವಿದ್ದಕ್ಕೆ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಈ ಟೂರ್ನಿಯೊಂದಿಗೆ ವಿರಾಟ್ ಕೊಹ್ಲಿ ಅವರ ನಾಯಕತ್ವವೂ ಕೊನೆಗೊಂಡಿದೆ. ಮುಂದಿನ ಋತುವಿನಿಂದ ಕೇವಲ ಆಟಗಾರನಾಗಿ ಮಾತ್ರ ಅವರು ಲಭ್ಯವಿರಲಿದ್ದಾರೆ. ಈ ಕುರಿತು ನಟ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಕೊಹ್ಲಿ ಅವರು ತುಂಬಾ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
‘ಆರ್ಸಿಬಿಗೆ ಇದು ಕೆಟ್ಟ ಸಮಯ. ಈ ಬಾರಿಯ ಟೂರ್ನಿ ತುಂಬಾ ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೂ ಆರ್ಸಿಬಿ ತಂಡವು ಗೆಲುವಿಗಾಗಿ ನಿರಂತರ ಶ್ರಮಿಸಿದೆ. ವಿರಾಟ್ ಕೊಹ್ಲಿ ಅವರೇ, ನೀವು ತೆಗೆದುಕೊಂಡಿರುವ ನಿರ್ಧಾರ ತುಂಬಾ ಕಠಿಣವಾದದ್ದು. ಐಪಿಎಲ್ ಫೈನಲ್ನಲ್ಲಿ ನಾವು ಆರ್ಸಿಬಿಯನ್ನು ಮಿಸ್ ಮಾಡಿಕೊಳ್ಳಲಿದ್ದೇವೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಓದಿ:ವಿರಾಟ್ ಕೊಯ್ಲಿ ಬಗ್ಗೆ ಜೈಶಾಗೆ ದೂರು ಕೊಟ್ಟ ರಹಾನೆ, ಪೂಜಾರಾ !
ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ಸಿಬಿಯು 4 ವಿಕೆಟ್ಗಳ ಅಂತರದಿಂದ ಸೋಲನುಭವಿಸಿತ್ತು.
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದ ಕೊಹ್ಲಿ, ಐಪಿಎಲ್ ಟೂರ್ನಿಯಯಲ್ಲಿ ನನ್ನ ಕೊನೆಯ ಪಂದ್ಯ ಆಡುವ ವರೆಗೂ ಆರ್ಸಿಬಿ ತಂಡದಲ್ಲೇ ಇರುತ್ತೇನೆ. ನನಗೆ ನಿಷ್ಠೆಯೇ ಮುಖ್ಯ ಎಂದು ಹೇಳಿದ್ದರು.
Bad luck @RCBTweets ,,,, very well fought though.
We shall miss ua leadership @imVkohli ,,, it isn’t an easy decision you have made.
We shall miss you guys in the finals.#RCBfanForever 🤗🥂— Kichcha Sudeepa (@KicchaSudeep) October 11, 2021
Discussion about this post